ಜನವರಿ ಅಂತ್ಯದಲ್ಲಿ ಬಿಆರ್ ಟಿಎಸ್ ಕಾಮಗಾರಿ ಅಂತ್ಯ: ದರ್ಪಣ್ ಜೈನ್
ಧಾರವಾಡ, ಡಿಸೆಂಬರ್ 18 : ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್ ಟಿಎಸ್ (ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ) ಕಾಮಗಾರಿ ಜನವರಿ 31 ರೊಳಗೆ ಪೂರ್ಣಗೊಳ್ಳುತ್ತದೆ, ಫೆಬ್ರವರಿಯಲ್ಲಿ ಬಸ್ ಸಂಚಾರ ಆರಂಭಿಸುವ ನಿರೀಕ್ಷೆ ಇದೆ ಎಂದು ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ್ ಜೈನ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್ ಟಿಎಸ್ ಕಾಮಗಾರಿ ವೀಕ್ಷಿಸಿ ಪ್ರಾಯೋಗಿಕವಾಗಿ ಚಿಗರಿ ಬಸ್ನಲ್ಲಿ ಪ್ರಯಾಣಿಸಿದ ಬಳಿಕ ಮಾತನಾಡಿದ ದರ್ಪಣ ಜೈನ್ ಬಿಆರ್ ಟಿಎಸ್ ಕಾಮಗಾರಿಗಳಿಗೆಲ್ಲವೂ ಜನೆವರಿ 31ರೊಳಗೆ ಪೂರ್ಣಗೊಳ್ಳುತ್ತದೆ. ಫೆಬ್ರುವರಿಯಲ್ಲಿ ಬಸ್ ಸಂಚಾರ ಆರಂಭಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.

ಒಟ್ಟು 900 ಕೋಟಿ ರೂಪಾಯಿ ವಿನಯೋಗ ಮಾಡಿದ್ದೇವೆ. ಅದರಲ್ಲಿ 400 ಕೋಟಿ ಭೂಸ್ವಾಧೀನಕ್ಕೆ ಹಾಗೂ 100 ಕೋಟಿಯಲ್ಲಿ 130 ಬಸ್ಗಳನ್ನು ಖರೀದಿ ಮಾಡಿದ್ದೇವೆ. ದೇಶದ ಇತರಡೆ ಇರುವ ಬಿಆರ್ಟಿಎಸ್ ಯೋಜನೆಗಳಿಗಿಂತ ಈ ಯೋಜನೆ ಹೆಚ್ಚಿನ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಮೆಟ್ರೋ ಮಾದರಿಯ ಸೇವೆಯನ್ನು ನಾವು ರಸ್ತೆ ಮಾರ್ಗದಡಿ ನೀಡಲಿದ್ದೇವೆ ಎಂದು ಹೇಳಿದರು.












Click it and Unblock the Notifications