ರಣಜಿ: ಪ್ರಿಯಾಂಕ ಪಂಚಾಲ ಶತಕ, ಉತ್ತಮ ಸ್ಥಿತಿಯಲ್ಲಿ ಗುಜರಾತ್
ಹುಬ್ಬಳ್ಳಿ, ನವೆಂಬರ್, 22 : ನಗರದ ರಾಜನಗರ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಮುಂಬಯಿ ತಂಡದ ವಿರುದ್ಧ ಗುಜರಾತ್ ಸೋಮವಾರ ಮೊದಲ ದಿನದಾಟದಲ್ಲಿ ಪ್ರಿಯಾಂಕ ಪಂಚಾಲರ ಭರ್ಜರಿ ಶತಕ ಬಾರಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್, ಸಮಿತ ದಹೋಲಕರ ಹಾಗೂ ಪ್ರಿಯಾಂಕ ಪಂಚಾಲ ಉತ್ತಮ ಜತೆಯಾಟ ಆಡಿದರು. ಪ್ರಿಯಾಂಕ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಗುಜರಾತ್ 90 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿ ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ. [ರಣಜಿ ಟ್ರೋಫಿ: ಮುಂಬಯಿ-ಗುಜರಾತ್ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ]

ಸಮಿತ ಗೋಯಲ್ 207 ಎಸೆತಗಳನ್ನು ಎದುರಿಸಿ 87 (11 ಬೌಂಡರಿ, 2 ಸಿಕ್ಸರ್) 87 ರನ್ ಗಳಿಸಿದ್ದಾಗ ದಬೋಲ್ಕರ ಬೌಲಿಂಗ್ ನಲ್ಲಿ ಕ್ರೀನ್ ಬೌಲ್ಡ್ ಆಗುವ ಮೂಲಕ ಗುಜರಾತ್ ತಂಡದ ಮೊದಲನೇ ವಿಕೆಟ್ ಪತನಗೊಂಡಿತು.
ನಂತರ ಬಂದ ಭಾರ್ಗ ಮೆರೈ (0) ದಬೋಲ್ಕರ ಬೌಲಿಂಗನಲ್ಲಿಯೇ ಎಲ್ ಬಿಗೆ ಔಟಾದರು. ಖ್ಯಾತ ಟೆಸ್ಟ್ ಆಟಗಾರ ಪಾರ್ಥಿವ ಪಟೇಲ್ 38 ಎಸೆತಗಳಲ್ಲಿ ಕೇವಲ 12 ( 2 ಬೌಂಡರಿ) ರನ್ ಗಳಿಸಿ ಅದಿತ್ಯ ಧುಮಾಲರ ಬೌಲಿಂಗ್ ಗೆ ಎ ಹರ್ವಡೇಕರಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಪ್ರಿಯಾಂಕ ಜೊತೆ ಮನಪ್ರೀತ್ ಜುನೇಜಾ 39 ಬೌಲ್ ಗಳಲ್ಲಿ 22 (2 ಬೌಂಡರಿ) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 17 ಬೌಂಡರಿ ಬಾರಿಸಿರು ಪ್ರಿಯಾಂಕ ಪಂಚಾಳ 256 ಎಸೆತಗಳಲ್ಲಿ 122 ರನ್ ಗಳಿಸಿ ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 9 ಕ್ಕೆ ಮತ್ತೆ ಎರಡೂ ತಂಡಗಳ ಆಟ ಮುಂದುವರಿಯಲಿದೆ.
ಬೌಲಿಂಗ್ ವಿವರ: ಆದಿತ್ಯ ಧುಬಲ 22 ಓವರ್ ಗಳಲ್ಲಿ 1 ವಿಕೆಟ್ ಪಡೆದಿದ್ದಾರೆ. ವಿಶಾಲ ಧಾಬೋಲ್ಕರ 21 ಓವರ್ ಗಳಲ್ಲಿ 2 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಬೌಲಿಂಗ್ ಮಾಡಿದ ಧವಲ ಕುಲಕರ್ಣಿ, ಶಾರ್ದುಲ ಠಾಕೂರ, ಅಖಿಲ ಹರ್ವಡೇಕರ, ಅಭಿಷೇಕ ನಯ್ಯರ, ಶ್ರೇಯಸ ಅಯ್ಯರ್, ಸೂರ್ಯಕುಮಾರ ಯಾದವ ಯಾವುದೇ ವಿಕೆಟ್ ಪಡೆಯಲು ಸಫಲರಾಗಲಿಲ್ಲ.
ಪಾಯಿಂಟ್ ಪಟ್ಟಿ: ಇದುವರೆಗೂ 5 ಪಂದ್ಯಗಳನ್ನು ಆಡಿರುವ ಮುಂಬಯಿ ತಂಡವು ಮೂರರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡು 25 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿದೆ. ಗುಜರಾತ್ ತಂಡವು ಆಡಿದ 4 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳು ಡ್ರಾ ಆಗಿವೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications