ಬೆಳ್ಳಂಬೆಳಗ್ಗೆ ವಧು ನಾಪತ್ತೆ, ಅನಿವಾರ್ಯ ಕಾರಣದಿಂದ ಮದುವೆ ಮುಂದಕ್ಕೆ

ಧಾರವಾಡದ ಆ ಕಲ್ಯಾಣ ಮಂಟಪದಲ್ಲಿ ಮದುವೆಯ ಎಲ್ಲ ಸಿದ್ಧತೆ ಮುಗಿದಿತ್ತು. ಹಿಂದಿನ ದಿನದ ಶಾಸ್ತ್ರ-ಸಂಪ್ರದಾಯ ಸಹ ಪೂರ್ಣವಾಗಿತ್ತು. ಆದರೆ ಮಾರನೇ ದಿನ ಬೆಳಗ್ಗೆ ವಧುವೇ ನಾಪತ್ತೆ. ಎಷ್ಟು ಹುಡುಕಿದರೂ ಪತ್ತೆಯಾಗದೆ ಮದಿವೆ ಮುರಿದುಬಿತ್ತು

ಧಾರವಾಡ, ಏಪ್ರಿಲ್ 11: ಅನಿವಾರ್ಯ ಕಾರಣಗಳಿಂದಾಗಿದೆ ಕಾರ್ಯಕ್ರಮ ಮುಂದೂಡಲಾಗಿದೆ ಎಂಬ ಫಲಕ ನೋಡಿರ್ತೀರಿ. ಆದರೆ ಧಾರವಾಡದಲ್ಲಿ ಭಾನುವಾರ ಸ್ವಲ್ಪ ವಿಭಿನ್ನ ಹಾಗೂ ವಿಚಿತ್ರ ಎನಿಸುವಂಥ ಫಲಕವನ್ನು ಕಲ್ಯಾಣ ಮಂಟಪದ ಹೊರಗೆ ಹಾಕಲಾಗಿತ್ತು. ಅದೇನಪ್ಪಾ ಅಂಥ ಫಲಕ ಅಂತೀರಾ? 'ಅನಿವಾರ್ಯ ಕಾರಣಗಳಿಂದಾಗಿ ಮದುವೆ ಮುಂದೂಡಲಾಗಿದೆ' ಎಂಬ ಒಕ್ಕಣೆ ಹಾಕಲಾಗಿತ್ತು.

ಧಾರವಾಡದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಗ್ಗೆ ಮದುವೆ ಮುಹೂರ್ತ ನಿಗದಿಯಾಗಿತ್ತು. ಅದಕ್ಕೂ ಮುಂಚೆ ಹಿಂದಿನ ದಿನದ ಎಲ್ಲ ಶಾಸ್ತ್ರಗಳನ್ನು ಪೂರ್ಣ ಮಾಡಿ, ಇನ್ನೇನು ಮರು ದಿನದ ಶಾಸ್ತ್ರ-ಸಂಪ್ರದಾಯಗಳನ್ನು ಆರಂಭಿಸಬೇಕು ಎಂಬಷ್ಟರಲ್ಲೇ ವಧು ನಾಪತ್ತೆ. ಜೋರಾದ ಅಡುಗೆ ಸಿದ್ಧತೆ ಮಾಡಿಕೊಂಡಿದ್ದ ಹೆಣ್ಣಿನವರು, ಸಂಭ್ರಮದಲ್ಲಿದ್ದ ಗಂಡಿನವರು ಏಕ್ದಂ ದಂಗಾಗಿ ಹೋದರು.[ಇದು ಫೇಸ್ ಬುಕ್ ಮಾಹಿತಿ, ತಾಯಿ-ಮಗುವಿನ ಜೀವವನ್ನು ವಾಟ್ಸ್ ಆಪ್ ಉಳಿಸಿತಾ?]

Due to inevitable reason marriage is postponed

ಮದುವೆ ಹೆಣ್ಣೇ ಮಂಟಪದಲ್ಲಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆಕೆ ಪೋಷಕರು ಹುಡುಕಾಟ ನಡೆಸಿ, ಪೊಲೀಸ್ ಠಾಣೆಗೆ ಹೋಗಿ ಅಲವತ್ತುಕೊಂಡರು. ನಮ್ಮ ಮಗಳನ್ನು ಹುಡುಕಿಕೊಡಿ, ಆದರೆ ದೂರು ದಾಖಲಿಸಬೇಡಿ ಎಂದು ಮನವಿ ಮಾಡಿದರು. ಇನ್ನೊಂದು ಕಡೆ ಈ ಘಟನೆಯಿಂದ ತೀವ್ರ ಬೇಸರವಾಗಿದ್ದ ಹುಡುಗನ ಕಡೆಯವರು ಮೌನಕ್ಕೆ ಶರಣಾಗಿದ್ದರು. ಆಮಂತ್ರಿತರು ಮದುವೆ ಮುಂದೂಡಿಕೆ ಫಲಕ ನೋಡಿ, ಹಿಂತಿರುಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+