ಬಿಡಿಎ ಹಗರಣದಲ್ಲಿ ಯಡಿಯೂರಪ್ಪ ಶುದ್ಧ ಹಸ್ತರಾಗಿ ಹೊರಬರುತ್ತಾರೆ: ಪ್ರಲ್ಹಾದ್ ಜೋಶಿ ವಿಶ್ವಾಸ
ಹುಬ್ಬಳ್ಳಿ, ಸೆಪ್ಟೆಂಬರ್, 16: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡಿಎ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶುದ್ಧ ಹಸ್ತರಾಗಿ ಬರುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪ ಅವರು ಪ್ರಸ್ತುತ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿಲ್ಲ. ಭಾರತದ ಕಾನೂನು ವ್ಯವಸ್ಥೆ ಅಡಿಯಲ್ಲಿ ತನಿಖೆ ನಡೆಯಲಿ. ನಮಗೆ ಕಾನೂನಿನ ಮೇಲೆ ವಿಶ್ವಾಸ ಇದೆ. ಆದರೆ ಯಡಿಯೂರಪ್ಪ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಏನೂ ಹೇಳಿಕೆ ಕೊಟ್ಟಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲ ಎಂದರು.
ಅಸಭ್ಯ
ವರ್ತನೆ
ಸಲ್ಲದು,
ಗುಡುಗಿದ
ಜೋಶಿ
ರಾಜಕೀಯ
ಜೀವನದಲ್ಲಿ
ಯಾರೇ
ಆಗಲಿ
ಅಸಭ್ಯ
ವರ್ತನೆ
ತೋರುವುದು
ಸರಿಯಲ್ಲ.
ಎಚ್ಚರಿಕೆಯಿಂದ
ಮಾತನಾಡುವುದು
ಒಳಿತು
ಎಂದು
ವಿಪಕ್ಷ
ನಾಯಕ
ಸಿದ್ದರಾಮಯ್ಯ
ಅವರಿಗೆ
ಪ್ರಹ್ಲಾದ್
ಜೋಶಿ
ಟಾಂಗ್
ಕೊಟ್ಟರು.
ಸಿದ್ದರಾಮಯ್ಯ
ಮಾತನಾಡುವಾಗ
ಎಚ್ಚರಿಕೆಯಿಂದ
ಮಾತನಾಡಬೇಕು.
ನಮ್ಮ
ಪಕ್ಷದ
ರಾಷ್ಟ್ರೀಯ
ಪ್ರಧಾನ
ಕಾರ್ಯದರ್ಶಿ
ಸಿಟಿ
ರವಿ
ಬಗ್ಗೆ
ಯಾವ
ಆಧಾರದ
ಮೇಲೆ
ಲೂಟಿ
ರವಿ
ಎಂಬ
ಹೇಳಿಕೆಯನ್ನು
ನೀಡಿದ್ದಾರೆ.
ಇದರಲ್ಲಿ
ಇಬ್ಬರದ್ದು
ತಪ್ಪಿದೆ.
ಹಾಗಾಗಿ
ರಾಜಕೀಯದಲ್ಲಿ
ಅಸಭ್ಯ
ವರ್ತನೆ
ಸಲ್ಲದು
ಎಂದರು.
ಹುಬ್ಬಳ್ಳಿಯಲ್ಲಿ
ಸೇವಾ
ಪಾಕ್ಷಿಕ
ಕಾರ್ಯಕ್ರಮ
ಪ್ರಧಾನಿ
ನರೇಂದ್ರ
ಮೋದಿ
ಅವರ
ಜನ್ಮ
ದಿನದ
ನಿಮಿತ್ತವಾಗಿ,
ಬಿಜೆಪಿ
ರಾಷ್ಟ್ರೀಯ
ಅಧ್ಯಕ್ಷ
ಜೆ.ಪಿ.ನಡ್ಡಾ
ಅವರು
ನಮೋ
ಅವರ
ಜೀವನವನ್ನು
ಜನರಿಗೆ
ತಿಳಿಸುತ್ತಿದ್ದಾರೆ.
ಈ
ನಿಟ್ಟಿನಲ್ಲಿ
ದೇಶದಾದ್ಯಂತ
ಸೇವಾ
ಪಾಕ್ಷಿಕ
ಕಾರ್ಯಕ್ರಮಕ್ಕೆ
ಕರೆ
ಕೊಟ್ಟಿದ್ದಾರೆ.
ಅದರಂತೆ
ಜಿಲ್ಲೆಯಲ್ಲಿ
ಸಪ್ಟೆಂಬರ್
17
ಮತ್ತು
18ರಂದು
ಅತಿದೊಡ್ಡ
ಕಾರ್ಯಕ್ರಮ
ಆಯೋಜಿಸಲಾಗಿದೆ.
ಸೆಪ್ಟೆಂಬರ್
18ರಂದು
ಜಿಲ್ಲೆಯಲ್ಲಿ
ಉಚಿತ
ವೈದ್ಯಕೀಯ
ತಪಾಸಣಾ
ಶಿಬಿರ
ಆಯೋಜಿಸಲಾಗಿದ್ದು,
ಅಂದು
ನುರಿತ
ತಜ್ಞ
ವೈದ್ಯರುಗಳಿಂದ
ಬೆಳಗ್ಗೆ
10ರಿಂದ
ಮಧ್ಯಾಹ್ನ
2
ರವರೆಗೆ
ತಪಾಸಣೆ
ಜರುಗಲಿದೆ.
ಅಲ್ಲದೇ
ಜಿಲ್ಲೆಯಲ್ಲಿ
ರಕ್ತದಾನ
ಶಿಬಿರ
ಏರ್ಪಡಿಸುವ
ಮೂಲಕ
ಧಾರವಾಡ
ಜಿಲ್ಲೆಯಲ್ಲಿ
ಗಿನ್ನಿಸ್
ರೆಕಾರ್ಡ್
ನಿರ್ಮಾಣದ
ಗುರಿಯನ್ನು
ಹೊಂದಿದ್ದೇವೆ
ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಮೇಯರ್ ಈರೇಶ್ ಅಂಚಟಗೇರಿ, ಬಸವರಾಜ ಕುಂದಗೋಳಮಠ, ಡಾ.ಕ್ರಾಂತಿಕಿರಣ, ಮಹೇಶ್ ನಾಲವಾಡ, ಸಂಜಯ ಕಟಪಕರ, ಜಯತೀರ್ಥ ಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.