ಐಎಂ ವಿಠ್ಠಲ್ ಮೂರ್ತಿ ಕಾಫಿ ತೋಟದಲ್ಲಿ ಪ್ರಜ್ಞೆ ತಪ್ಪಿದ್ದ ಆನೆ ಪತ್ತೆ
ಸಕಲೇಶಪುರ, ಮೇ 22 : ನಿವೃತ್ತ ಐಎಎಸ್ ಅಧಿಕಾರಿ ಐಎಂ ವಿಠ್ಠಲ್ ಮೂರ್ತಿ ಅವರ ಕಾಫಿ ತೋಟ ಇಲ್ಲಿ ಕೋಗರವಳ್ಳಿ ಸಿದ್ದಾಪುರದಲ್ಲಿದ್ದು, ಅಲ್ಲಿ ಕಾಡಾನೆಯೊಂದು ನಿತ್ರಾಣವಾಗಿ ಪ್ರಜ್ಞೆ ತಪ್ಪಿ ಬಿದ್ದಿರುವುದು ಪತ್ತೆಯಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು, ಪರಿಶೀಲನೆ ನಡೆಸಿದ್ದಾರೆ.
ವೈದ್ಯಕೀಯ ಚಿಕಿತ್ಸೆ ನೀಡಿದ ಮೇಲೆ ಆನೆಗೆ ಪ್ರಜ್ಞೆ ಬಂದಿದೆ. ಆದರೆ ಅದಕ್ಕೆ ನಿಲ್ಲುವಷ್ಟು ಚೈತನ್ಯ ಕಂಡುಬರುತ್ತಿಲ್ಲ. ಪೌಷ್ಟಿಕ ಆಹಾರ ಸಿಗದ ಕಾರಣ ಅದು ಈ ಸ್ಥಿತಿಗೆ ತಲುಪಿರಬಹುದು ಎಂಬ ಅಂದಾಜಿದೆ. ಸುಮಾರು ಇಪ್ಪತ್ತು ವರ್ಷದ ಆನೆ ಹದಿನೈದು ದಿನದ ಹಿಂದೆ ಮರಿ ಹಾಕಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ವೈದ್ಯರು.
ಇನ್ನು ಈ ಆನೆಯ ಸ್ಥಿತಿಗೆ ಕಾರಣವೇನು, ಸಮಸ್ಯೆ ಏನಾಗಿದೆ ಎಂಬ ಬಗ್ಗೆ ತಿಳಿಯಲು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಸಿಕ್ಕ ನಂತರ ಮುಂದಿನ ಚಿಕಿತ್ಸೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯುತ್ತದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
{promotion-urls}