ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಲ್ಜಾತಿಗೆ ಮೀಸಲಾತಿ, ಬಿಜೆಪಿ ಹಾಕಿರುವ ಗಾಳ: ದೇವೇಗೌಡ

|
Google Oneindia Kannada News

ಹಾಸನ, ಜನವರಿ 11: ಆರ್ಥಿಕವಾಗಿ ಹಿಂದುಳಿದವರಿಗೆ ಮೇಲ್ಜಾತಿಯವರಿಗೆ ಮೀಸಲಾತಿ ಕೊಟ್ಟಿರುವ ಕೇಂದ್ರ ಸರ್ಕಾರದ ನಿರ್ಣಯ ಚುನಾವಣೆ ಗಿಮಿಕ್ ಅಷ್ಟೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ಮೇಲ್ವರ್ಗದ ಜನರ ಮತ ಸೆಳೆಯು ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತಂದಿದೆ ಎಂದು ದೇವೇಗೌಡ ಅವರು ಟೀಕಿಸಿದರು.

ನಿರುದ್ಯೋಗ ಸಮಸ್ಯೆ ಪರಿಹಾರ ಯಾವ ಪಿ.ಎಂಗೂ ಆಗೊಲ್ಲ: ದೇವೇಗೌಡ ನಿರುದ್ಯೋಗ ಸಮಸ್ಯೆ ಪರಿಹಾರ ಯಾವ ಪಿ.ಎಂಗೂ ಆಗೊಲ್ಲ: ದೇವೇಗೌಡ

ಇತ್ತೀಚೆಗೆ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆ ಕುಗ್ಗುತ್ತಿದೆ ಹಾಗಾಗಿ ಅವರು ಮೀಸಲಾತಿಯ ಅಸ್ತ್ರ ಪ್ರಭಾವಿಸಿದ್ದಾರೆ. ಸಮುದಾಯದ ವಿಷಯ ಆಗಿರುವ ಕಾರಣ ಚುನಾವಣೆಯ ಭೀತಿಯಿಂದ ಇತರ ಪಕ್ಷಗಳು ಅದಕ್ಕೆ ಒಪ್ಪಿಗೆ ನೀಡಿವೆ ಎಂದು ದೇವೇಗೌಡ ಅವರು ವಿಶ್ಲೇಷಿಸಿದರು.

reservation for upper caste is election stunt of BJP: Deve Gowda

ಭಾರತವು ರೈತಾಪಿ ದೇಶ. ಇಲ್ಲಿನ ಎಲ್ಲರಿಗೂ ಕೆಲಸ ಕೊಡಲು ಯಾವ ಪ್ರಧಾನಿ, ಸಿಎಂ ಬಂದರೂ ಸಹ ಸಾಧ್ಯವಾಗದ ವಿಷಯ. ಇಲ್ಲಿ ಖಾಸಗಿ ಹಾಗೂ ಕೃಷಿ ಉದ್ದಿಮೆಯಲ್ಲಿ ಹಲವು ಜನ ದುಡಿಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಸ್ಪರ್ಧಿಸುವುದು ಖಾತ್ರಿ ಆಗಿದೆ ಆದರೆ ಅವರು ಎಷ್ಟು ಸೀಟು ನಮಗೆ ನಿಡುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಅವರ ಜೊತೆ ಮಾತನಾಡಬೇಕು ಎಂದು ದೇವೇಗೌಡ ಹೇಳಿದರು.

English summary
JDS leader Deve Gowda said that reservation for upper caste is elections stunt of BJP and Narendra Modi. He also said that Modi's fame decreased down in last 4 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X