Preetham Gowda: ಭವಾನಿ ರೇವಣ್ಣ ಮತ್ತು ನನ್ನ ನಡುವೆ ಉತ್ತಮ ಅಕ್ಕ, ತಮ್ಮನ ಸಂಬಂಧವಿದೆ: ಪ್ರೀತಂ ಗೌಡ
ಹಾಸನ, ಏಪ್ರಿಲ್, 27: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೆ ರಾಜಕೀಯ ನಾಯಕರ ನಡುವೆಯೂ ವಾಕ್ಸಮರಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೆ ಈ ಹಿಂದೆ ಹಾಸನ ಶಾಸಕ ಪ್ರೀತಂ ಗೌಡ ಅವರು ಭವಾನಿ ರೇವಣ್ಣ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದ್ದರು. ಇದೀಗ ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನನ್ನ ಮತ್ತು ಭವಾನಿ ರೇವಣ್ಣ ಅವರ ನಡುವೆ ಉತ್ತಮ ಅಕ್ಕ, ತಮ್ಮನ ಸಂಬಂಧ ಇದೆ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.
ಇನ್ನು ನವೆಂಬರ್ 1ರಂದು ಆಡಿದ ಮಾತಿಗೆ ಬದ್ಧರಾಗಿದ್ದೀರಾ ಅನ್ನುವ ಮಾದ್ಯಮಗಳ ಪ್ರಶ್ನೆಗೆ ಪ್ರೀತಂಗೌಡ ಅವರು ಗರಂ ಆಗಿದ್ದಾರೆ. ಭವಾನಿ ರೇವಣ್ಣ ನಶೆಯಲ್ಲಿ ಮಾತಾಡುತ್ತಾರೆ ಎಂದು ಟೀಕೆ ಮಾಡಿದ್ದೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಕೇಳಿದಕ್ಕೆಲ್ಲಾ ಉತ್ತರ ಕೊಡಬೇಕಿಲ್ಲ. ನಾನು ಹೇಳಿದ್ದನ್ನು ಕೇಳಿ ಎಂದು ಗುಡುಗಿದರು.

ಅಲ್ಲದೆ ನಿಮ್ಮಿಷ್ಟದಂತೆ ನಾನು ಮಾತನಾಡುವುದಕ್ಕೆ ಆಗುವುದಿಲ್ಲ. ನನಗೆ ನನ್ನದೆ ಆದ ಇತಿ, ಮಿತಿ ಇದೆ. ಭವಾನಿ ರೇವಣ್ಣ ಅವರು ಅಭ್ಯರ್ಥಿ ಅಲ್ಲ, ಈಗ ಅವರ ವಿಚಾರ ಬೇಡ. ಅವರನ್ನು ಭೇಟಿಯಾದಾಗ ವಿಶ್ವಾದದಿಂದ ಮಾತನಾಡಿದ್ದೇನೆ. ಅವರು ಕೂಡ ವಿಶ್ವಾಸದಿಂದಲೇ ಮಾತನಾಡಿಸಿದ್ದಾರೆ. ಮತ್ತೆ ಭೇಟಿಯಾಗಿ ಮಾತಾಡುತ್ತೇನೆ, ಸ್ವರೂಪ್ ಅವರನ್ನ ಮಗ ಅಂದಿದ್ದಾರೆ. ನಾಳೆ ಪ್ರೀತಂಗೌಡ ತಮ್ಮ ಎಂದರೂ ಅಚ್ಚರಿಯಿಲ್ಲ. ಕಾರಣ ನಾನು ಬಾಯಿ ತುಂಬಾ ಅಕ್ಕ ಅಂತಾ ಕರೆಯುತ್ತೇನೆ ಎಂದರು.
ಭವಾನಿ ರೇವಣ್ಣ ನನ್ನ ನಡುವೆ ಉತ್ತಮ ಅಕ್ಕ, ತಮ್ಮನ ಸಂಬಂಧವಿದೆ. ಅವರು ನನ್ನನ್ನು ಭೇಟಿಯಾದಾಗ ಬಾಯಿ ತುಂಬಾ ತಮ್ಮ ಎಂದು ಕರೆಯುತ್ತಾರೆ.
— oneindiakannada (@OneindiaKannada) April 27, 2023
- ಹಾಸನ ಶಾಸಕ ಪ್ರೀತಂ ಗೌಡ#preethamgowda #preethamgowdaforhassan #bhavanirevanna #bjp #jds #KarnatakaElections2023 pic.twitter.com/RPPVPJ4Fax
ಹೊಂದಾಣಿಕೆ ಉತ್ತಮವಾದ ಬೆಳವಣಿಗೆ
ಸ್ವರೂಪ್ ನನ್ನ ಮಗ ಎಂಬ ಭವಾನಿ ರೇವಣ್ಣ ಹೇಳಿಕೆ ವಿಚಾರಕ್ಕೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದು, ಅವರ ಪ್ರೀತಿ ಸ್ವರೂಪ್ ಮೇಲಿದೆ, ಅದು ಎಲ್ಲಾರಿಗೂ ಗೊತ್ತಾಗಿದೆ. ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿರುವುದು ಉತ್ತಮವಾದ ಬೆಳವಣಿಗೆ ಎಂದು ವ್ಯಂಗ್ಯವಾಡಿದರು.
ಅವರ ಪಕ್ಷದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ 2024ಕ್ಕೆ ಅವರ ಮಗ ಎಂಪಿ ಅಭ್ಯರ್ಥಿ ಆಗುವುದರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತದೆ. ಅವರು ಚುನಾವಣೆ ಮಾಡುತ್ತಾ ಇರುವುದು 2023ರ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿ ಅಂತಾ ಅಲ್ಲ. 2024ಕ್ಕೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಮಾಡೋದಕ್ಕೆ ಎಂದು ದೂರಿದರು.
ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ಚುನಾವಣೆ ಮಾಡುತ್ತಿದ್ದಾರೆ. ಈಗ ಏನು ಮಾಡಿದರೂ ಜನಸಾಮಾನ್ಯರಿಗೆ ಅರ್ಥ ಆಗುತ್ತದೆ. ಮತ್ತೊಂದೆಡೆ ಬಿಟ್ಟೊಹೋಗಿದ್ದ ದತ್ತಣ್ಣನನ್ನ ವಾಪಸ್ ಎಲ್ಲರೂ ಹೋಗಿ ಕರೆದುಕೊಂಡು ಬಂದಿದ್ದು ಯಾಕೆ? ಎಂದು ಪ್ರಶ್ನಿಸಿದರು. ಹಾಗೆಯೆ ಹಾಸನದಲ್ಲಿ ಯಾರು ಅಭ್ಯರ್ಥಿ ಎಂದು ಕೇಳಿದರೆ ಅವರು ಹೆಸರು ಗೊತ್ತಿಲ್ಲ ಅಂತಾ ಹೇಳಿದ್ದರು. ಈಗ ನನ್ನ ಮಗ ಅಂತಾ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
2024ರದ್ದು ಜ್ಞಾಪಕ ಆಗುತ್ತಿದೆ, 2023ರದ್ದು ಫಲಿತಾಂಶ ಮುಗಿದು ಹೋಗಿದೆ. 2024ಕ್ಕೆ ಉಳಿದುಕೊಳ್ಳಬೇಕು ಅಂದರೆ ಏನಾದರೂ ತಂತ್ರ ಮಾಡಬೇಕೆಂದು ಮಗ, ಅಮ್ಮ, ತಂದೆ, ತಾಯಿ ಈ ಎಲ್ಲಾ ಪದಗಳನ್ನು ಜ್ಞಾಪಕ ಮಾಡಿಕೊಳ್ಳುತ್ತಾ ಇದ್ದಾರೆ ಎಂದರು.
ಒಟ್ಟಿನಲ್ಲಿ ಅವರು ಅದೇ ರೀತಿ ಇದ್ದು ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಿ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಲೇಬೇಕು. ವಿರೋಧ ಪಕ್ಷ ಇರಲಿಲ್ಲ ಅಂದರೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಅವರ ಪಕ್ಷದ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications