ಉದ್ಘಾಟನೆಗೂ ಮೊದಲೇ 3ನೇ ಬಾರಿಗೆ ಕುಸಿದ ಬಿದ್ದ ಸೇತುವೆ
ಹಾಸನ, ಆಗಸ್ಟ್ 28 : ಹಾಸನದಲ್ಲಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಮುನ್ನವೇ 3ನೇ ಬಾರಿಗೆ ಕುಸಿದು ಬಿದ್ದಿದೆ. ಲೋಕೋಪಯೋಗಿ ಸಚಿವರ ತವರು ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.
ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಬಳಿ ನಿರ್ಮಾಣವಾಗಿದ್ದ ರೈಲ್ವೆ ಮೇಲ್ಸೇತುವೆ ಕುಸಿದು ಬಿದ್ದಿದೆ. 3ನೇ ಬಾರಿಗೆ ರೈಲ್ವೆ ಮೇಲ್ಸೇತುವೆ ಕುಸಿದುಬಿದ್ದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಸಕಲೇಶಪುರ ಬಳಿ ಭೂಕುಸಿತ: ನಾಲ್ಕು ರೈಲುಗಳ ಸಂಚಾರ ರದ್ದು
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ತವರು ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದ್ದು, ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಗ್ಗೆ ಜನರ ಪ್ರಶ್ನೆ ಎತ್ತಿದ್ದಾರೆ. ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೊಂಡು ರೈಲು ಸಂಚರಿಸಿದರೆ ಏನಾಗಬಹುದು? ಎಂದು ಅಧಿಕಾರಿಗಳನ್ನು ಕೇಳುತ್ತಿದ್ದಾರೆ.
ಹಾಸನ-ಹೊಳೆನರಸೀಪುರ ಮಾರ್ಗದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ನಡೆಸಲಾಗುತ್ತದೆ. ಸುಮಾರು 4 ಕೋಟಿ ವೆಚ್ಚದ ಕಾಮಗಾರಿ ಕಳೆದ ವರ್ಷ ಆರಂಭವಾಗಿದೆ. ಈಗ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಆದರೆ, ನಿರ್ಮಾಣ ಹಂತದಲ್ಲಿಯೇ ಮೂರು ಬಾರಿ ಸೇತುವೆ ಕುಸಿದಿದೆ. ಜುಲೈ 21ರಂದು ಸೇತುವೆಯ ಸ್ಲ್ಯಾಬ್ ಕುಸಿದಿತ್ತು. ಆದರೆ, ಸ್ಲ್ಯಾಬ್ ನಾವೇ ತೆಗೆದಿದ್ದೇವೆ ಎಂದು ಹೇಳಿ ಇಂಜಿನಿಯರ್ಗಳು ಹೇಳಿದ್ದರು.