ಹಾಸನ ಎಸಿ ವಿಜಯಾ ವರ್ಗಾವಣೆಗೆ ತಡೆಯಾಜ್ಞೆ ಇಲ್ಲ
ಹಾಸನ, ಜುಲೈ 30 : ಹಾಸನ ಉಪವಿಭಾಗಾಧಿಕಾರಿ ವಿಜಯಾ ಅವರ ವರ್ಗಾವಣೆಗೆ ತಡೆ ನೀಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನಿರಾಕರಿಸಿದೆ. ಎಚ್.ಎಲ್.ನಾಗರಾಜ್ ಅವರನ್ನು ವಿಜಯಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ವಿಜಯಾ
ಅವರು
ಒಂದೂವರೆ
ವರ್ಷದಿಂದ
ಹಾಸನ
ಉಪವಿಭಾಗಾಧಿಕಾರಿಯಾಗಿ
ಕೆಲಸ
ಮಾಡುತ್ತಿದ್ದರು.
ಜೂನ್
21ರಂದು
ಅವರನ್ನು
ಹಾಸನ
ವೈದ್ಯಕೀಯ
ವಿಜ್ಞಾನ
ಸಂಸ್ಥೆಯ
ಮುಖ್ಯ
ಆಡಳಿತಗಾರರನ್ನಾಗಿ
ನೇಮಕ
ಮಾಡಲಾಗಿತ್ತು.[ಆತ್ಮಹತ್ಯೆಗೆ
ಯತ್ನಿಸಿದ
ಹಾಸನ
ಎಸಿ
ವಿಜಯಾ]
ತಮ್ಮ ವರ್ಗಾವಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ವಿಜಯಾ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ವಿಜಯಾ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ವಿಜಯಾ ಅವರಿಂದ ತೆರವಾದ ಸ್ಥಾನಕ್ಕೆ ಎಚ್.ಎಲ್.ನಾಗರಾಜು ಅವರನ್ನು ನೇಮಕ ಮಾಡಲಾಗಿದ್ದು, ಅವರು ಅಧಿಕಾರವಹಿಸಿಕೊಂಡಿದ್ದಾರೆ.[ಆತ್ಮಹತ್ಯೆಗೆ ಯತ್ನಿಸಿದ ವಿಜಯಾ ಅವರ ವಿರುದ್ಧ FIR]
ಆತ್ಮಹತ್ಯೆಗೆ ಯತ್ನಿಸಿದ್ದರು : ಉಪವಿಭಾಗಾಧಿಕಾರಿ ವಿಜಯಾ ಅವರು ಜುಲೈ 21ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಸದ್ಯ, ಅವರು ಚೇತರಿಸಿಕೊಳ್ಳುತ್ತಿದ್ದಾರೆ.