Get Updates
Get notified of breaking news, exclusive insights, and must-see stories!

ಹಾಸನದಲ್ಲಿ ಪ್ರೀತಂ ಗೌಡರನ್ನು ಸೋಲಿಸಲು ಒಂದಾದ ಗೌಡರು: ಜಠಿಲವಾಗುತ್ತಿದೆ ಬಿಜೆಪಿ ಅಭ್ಯರ್ಥಿಯ ಜಯದ ಹಾದಿ- ಇನ್‌ಸೈಡ್‌ ಸ್ಟೋರಿ

ಹಾಸನ, ಮೇ 06: ಹಾಸನ ಜಿಲ್ಲೆ ಎಚ್ ಡಿ ದೇವೇಗೌಡ ಕುಟುಂಬದ ಭದ್ರಕೋಟೆಯಾಗಿದೆ. ಈ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಆರು ಸ್ಥಾನಗಳನ್ನು ಹೊಂದಿದೆ. ಬಿಜೆಪಿ ಎರಡು ಸ್ಥಾನಗಳನ್ನು ಹೊಂದಿದೆ. ಈ ಬಾರಿ ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡರನ್ನು ಸೋಲಿಸಲು ಜೆಡಿಎಸ್‌ ಶತಾಯಗತಾಯ ಪ್ರಯತ್ನದಲ್ಲಿ ತೊಡಗಿದೆ.

ಈ ಕ್ಷೇತ್ರದಲ್ಲಿ 1,25,000 ಒಕ್ಕಲಿಗರು, 30,000 ಮುಸ್ಲಿಮರು, 25,000 ಲಿಂಗಾಯತರು, 20,000 ಎಸ್‌ಸಿಗಳು ಮತ್ತು 10,000 ಎಸ್‌ಟಿಗಳು ಇದ್ದಾರೆ.

Karnataka election: Gowdas Joins Hands To Defeat BJPs Preetham Gowda In Hassan

ಒಕ್ಕಲಿಗರು ದಕ್ಷಿಣ ಕರ್ನಾಟಕದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಧಿಕಾರವನ್ನು ಹೊಂದಿರುವ ಕಂಡುಬರುತ್ತದೆ. ಈ ಸಮುದಾಯದಲ್ಲಿ ಗಂಗಾಟಿಕರ, ಮೊರಸು, ಕುಂಚಿಟಿಗ, ನಾಮಧಾರಿ ಮುಂತಾದ ಸುಮಾರು 10 ಉಪಪಂಗಡಗಳಿವೆ.

ದಕ್ಷಿಣ ಕರ್ನಾಟಕದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಪ್ರಬಲವಾಗಿರುವ ಹಳ್ಳಿಕಾರ್, ತುಳು, ಕೊಡಗು, ಜೋಗಿ, ನೊಣಬ, ಸದರ, ದಾಸ ಮತ್ತು ಮುಳ್ಳು ಒಕ್ಕಲಿಗರಿದ್ದಾರೆ. ಹಾಸನ ಜಿಲ್ಲೆಯಲ್ಲಿ ದಾಸ ಒಕ್ಕಲಿಗ ಮತ್ತು ಮುಳ್ಳು ಒಕ್ಕಲಿಗರು ಹೆಚ್ಚಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು ಮುಳ್ಳು ವೊಕ್ಕಲಿಗ ಉಪಪಂಗಡಕ್ಕೆ ಸೇರಿದವರಾದರೂ ಎಲ್ಲ ಉಪಪಂಗಡಗಳಿಂದ ಬೆಂಬಲ ಪಡೆದಿದ್ದಾರೆ.

Karnataka election: Gowdas Joins Hands To Defeat BJPs Preetham Gowda In Hassan

ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬದ್ದೇ ಪ್ರಾಬಲ್ಯ

ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ಪ್ರಬಲವಾಗಿದ್ದು, 2018ರ ವಿಧಾನಸಭೆ ಚುನಾವಣೆಗೂ ಮುನ್ನ ಹಾಸನ ಜಿಲ್ಲೆಯ ಎಲ್ಲ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್‌ ಜಯ ಸಾಧಿಸಿತ್ತು. ಕಡೂರು ಹಾಗೂ ಪ್ರತಿಷ್ಠಿತ ಹಾಸನ ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್‌ ಬಿಜೆಪಿಗೆ ಕಳೆದುಕೊಂಡಿದೆ.

ದೇವೇಗೌಡರ ಉಪಪಂಗಡವಾದ ಮುಳ್ಳು ಒಕ್ಕಲಿಗರ ರಾಜಕೀಯ ಪ್ರಾಬಲ್ಯದ ಬಗ್ಗೆ ದಾಸ ಒಕ್ಕಲಿಗರಲ್ಲಿ ಸುಪ್ತವಾಗಿದ್ದ ಅಸಮಾಧಾನವನ್ನು ಬಿಜೆಪಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಸನ ತಾಲೂಕಿನಲ್ಲಿ ದಾಸ ಒಕ್ಕಲಿಗರ ಪ್ರಾಬಲ್ಯವಿದೆ. ಅವರ ಮತಗಳನ್ನು ಸೆಳೆಯಲು ಬಿಜೆಪಿ ಸಫಲವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ಜೆಡಿಎಸ್‌ನ ಎಚ್‌ಎಸ್‌ ಪ್ರಕಾಶ್‌ ಅವರನ್ನು ಸೋಲಿಸಿದ್ದರು.

Karnataka election: Gowdas Joins Hands To Defeat BJPs Preetham Gowda In Hassan

ದಿವಂಗತ ಎಚ್ಎಸ್ ಪ್ರಕಾಶ್ ಅವರ ಪುತ್ರ ಎಚ್‌ಪಿ ಸ್ವರೂಪ್

ಈ ಚುನಾವಣೆಯಲ್ಲಿ ಬಿಜೆಪಿಯು ಪ್ರೀತಂ ಗೌಡ ಅವರನ್ನು ಕಣಕ್ಕಿಳಿಸಿದೆ. ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ದಿವಂಗತ ಎಚ್ಎಸ್ ಪ್ರಕಾಶ್ ಅವರ ಪುತ್ರ ಎಚ್‌ಪಿ ಸ್ವರೂಪ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಕಾಂಗ್ರೆಸ್ ಬನವಾಸೆ ರಂಗಸ್ವಾಮಿ ಅವರನ್ನು ಕಣಕ್ಕಿಳಿಸಿದೆ. ಪ್ರೀತಂ ಗೌಡ ಮತ್ತು ಸ್ವರೂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಸನ ಜಿಲ್ಲೆಯ ಟಿಕೆಟ್‌ಗಾಗಿ ದೇವೇಗೌಡರ ಹಿರಿಯ ಸೊಸೆ ಹಾಗೂ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಯತ್ನ ನಡೆಸಿದ್ದಾರೆ. ಆದರೆ, ಸ್ವರೂಪ್‌ ಅವರಿಗೆ ಟಿಕೆಟ್‌ ನೀಡಲಾಯಿತು

ಪ್ರೀತಂ ಗೌಡ ಅವರಿಗೆ ಇದು ಎರಡನೇ ವಿಧಾನಸಭೆ ಚುನಾವಣೆ. ಅವರು ಎಚ್ ಎಸ್ ಪ್ರಕಾಶ್ ಅವರನ್ನು 13,006 ಮತಗಳ ಅಂತರದಿಂದ ಸೋಲಿಸಿದ್ದರು. ಜೆಡಿಎಸ್‌ನ ಸ್ವರೂಪ್‌ಗೆ ಇದು ಮೊದಲ ಚುನಾವಣೆ, ಅವರ ತಂದೆ ಮೂರು ಬಾರಿ ಇಲ್ಲಿ ಜಯಗಳಿಸಿದ್ದರು. ಬನವಾಸೆ ರಂಗಸ್ವಾಮಿ ಕೂಡ ಚುನಾವಣೆಗೆ ಮೊದಲ ಬಾರಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಜಯದ ಹಾದಿ ಸುಲಭವಲ್ಲ

ಪ್ರೀತಂ ಗೌಡ ಅವರು ಕ್ಷೇತ್ರದಲ್ಲಿ ಹೆಸರು ಮಾಡಿದ್ದರೂ, ಜಯದ ಹಾದಿ ಅಷ್ಟು ಸುಲಭವಾಗಿಲ್ಲ. ಸ್ವರೂಪ್ ಅವರನ್ನು ಲಘುವಾಗಿ ಪರಿಗಣಿಸಬಾರದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಕಾಶ್ ಅವರ ಮಗ ಎಂಬ ಸಹಾನುಭೂತಿಯ ಅಂಶ ಸ್ವರೂಪ್‌ ಅವರ ಪರ ಕೆಲಸ ಮಾಡಬಹುದು.

ಸ್ವರೂಪ್ ಅವರ ಪ್ರಚಾರವು ಮತದಾರರಿಗೆ ಅವರ ಮೃತ ತಂದೆಯ ಕೆಲಸವನ್ನು ನೆನಪಿಸುವ, ಅನುಕಂಪದ ಅಂಶವನ್ನು ಬಳಸಿಕೊಳ್ಳುವ ಕೇಂದ್ರಬಿಂದುವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಂ ಗೌಡರನ್ನು ಸೋಲಿಸಲು ದೇವೇಗೌಡ ಕುಟುಂಬ ಸದಸ್ಯರು ಒಂದಾಗಿದ್ದಾರೆ. ಶಾಸಕ ರೇವಣ್ಣ, ಅವರ ಪುತ್ರರಾದ ಸಂಸದ ಪ್ರಜ್ವಲ್‌ ರೇವಣ್ಣ, ಎಂಎಲ್‌ಸಿ ಸೂರಜ್‌ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಪ್ರೀತಂ ಗೌಡರನ್ನು ಸೋಲಿಸಲು ಒಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೀತಂ ಗೌಡರ ಗೆಲುವಿನ ಹಾದಿ ಜಠಿಲವಾಗುತ್ತಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+