ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸು: ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ
Recommended Video

ಹಾಸನದಲ್ಲಿ ಕೆರೆಗೆ ಉರುಳಿದ ಬಸ್ಸಿನಿಂದಾಗಿ ಸಿಹಿನಿದ್ದೆಯಲ್ಲಿದ್ದ 8 ಜನ ದುರ್ಮರಣ | Oneindia Kannada
ಹಾಸನ, ಜನವರಿ 13: ಹಾಸನದ ಶಾಂತಿಗ್ರಾಮ ಕರೆಕೆರೆ ಎಂಬಲ್ಲಿ ಬಸ್ ವೊಂದು ಕೆರೆಗೆ ಉರುಳಿದ ಪರಿಣಾಮ 8 ಜನ ಸಾವಿಗೀಡಾದ ಭೀಕರ ಘಟನೆ ಇಂದು(ಜ.13) ಬೆಳಗ್ಗಿನ ಜಾವ ನಡೆದಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಐರಾವತ್ ಬಸ್ಸಿನಲ್ಲಿ ಸಿಹಿ ನಿದ್ರೆಯಲ್ಲಿದ್ದ ಜನರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಾಲಕ ಲಕ್ಷ್ಮಣ್(38), ಶಿವಪ್ಪ, ಡಯಾನ(20), ಗಂಗಾಧರ್(48) ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತರಾದರೆ, ಓರ್ವ ದುರ್ದೈವಿ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ.

ಬಸ್ಸಿನಲ್ಲಿದ್ದ ಉಳಿದೆಲ್ಲರಿಗೂ ಗಾಯವಾಗಿದ್ದು ಹಾಸನ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ಸಿನ ಮುಂಭಾಗದಲ್ಲಿದ್ದವರೇ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.












Click it and Unblock the Notifications