Get Updates
Get notified of breaking news, exclusive insights, and must-see stories!

ಮೇಘಾಲಯ : ಗಣಿ ಕಾರ್ಮಿಕರ ರಕ್ಷಣೆಗೆ ನೌಕಾಪಡೆ ತಂಡ ರವಾನೆ

ಗುವಾಹಟಿ, ಡಿಸೆಂಬರ್ 28 : ಮೇಘಾಲಯದಲ್ಲಿ ಕಲ್ಲಿದ್ದಲಿನ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ರಕ್ಷಣೆಗೆ ನೌಕಾಪಡೆ 15 ಸದಸ್ಯರ ತಂಡವನ್ನು ಕಳುಹಿಸಿದೆ. ಎರಡು ವಾರಗಳಿಂದ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾರ್ಯಾಚರಣೆಗೆ ಆಗಮಿಸಿರುವ ತಂಡ ವಿಶೇಷ ಉಪಕರಣಗಳನ್ನು ತಂದಿದೆ. ನೀರಿನಾಳದಲ್ಲಿ ಚಿತ್ರೀಕರಣ ಮಾಡಬಹುದಾದ ರಿಮೋಟ್ ಮೂಲಕ ನಿಯಂತ್ರಸುವ ವಿಶೇಷ ಸಾಧನಗಳನ್ನು ತರಲಾಗಿದೆ.

ವಿಶೇಷ ತಂಡದ ಮೂರು ಜನರು ಈಗಾಗಲೇ ಗಣಿ ಇರುವ ಪ್ರದೇಶವನ್ನು ತಲುಪಿದ್ದಾರೆ. ಉಳಿದ ಸದಸ್ಯರು 12 ಗಂಟೆಗಳಲ್ಲಿ ಅಲ್ಲಿಗೆ ತಲುಪಲಿದ್ದಾರೆ ಎಂದು ನೌಕಾಪಡೆ ಹೇಳಿದೆ. ಖುದ್ದು ನೌಕಾಪಡೆಯೇ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲಿದೆ.

Meghalaya mine tragedy: Navy divers to join rescue operations

ಮೇಘಾಲಯದ ಪೂರ್ವ ಜೈಂಟಿಯಾ ಜಿಲ್ಲೆಯ ಲುಂಥಾರಿ ಕಲ್ಲಿದ್ದಲಿನ ಗಣಿಯಲ್ಲಿ 15 ಕಾರ್ಮಿಕರು ಎರಡು ವಾರಗಳಿಂದ ಸಿಲುಕಿದ್ದಾರೆ. ಗಣಿಯೊಳಗೆ ನೀರು ನುಗ್ಗಿದ್ದು, ಅದನ್ನು ಹೊರಹಾಕಲಾಗುತ್ತಿದೆ. ನೀರು ತುಂಬಿರುವುದರಿಂದಲೇ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ.

ಗಣಿಯಲ್ಲಿ ತುಂಬಿರುವ ಅಪಾರ ಪ್ರಮಾಣದ ನೀರನ್ನು ಹೊರ ಹಾಕಲು ಬೇಕಿರುವ ಅಧಿಕ ಸಾಮರ್ಥ್ಯದ ಪಂಪ್‌ಗಳನ್ನು ಒದಗಿಸಲು ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ ಮುಂದೆ ಬಂದಿದೆ. ಕಂಪನಿಯ ತಜ್ಞರ ತಂಡ ಈಗಾಗಲೇ ಸ್ಥಳಕ್ಕೆ ತೆರಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+