ಅಸ್ಸಾಂ ಪ್ರವಾಹ: ಸಿಲ್ಚಾರ್‌ನ ಬಹುತೇಕ ಭಾಗ ಮುಳುಗಡೆ

ಗುವಾಹಟಿ ಜೂನ್ 24: ಅಸ್ಸಾಂನಲ್ಲಿ ಶುಕ್ರವಾರ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, 45.34 ಲಕ್ಷ ಜನರು ಪ್ರವಾಹದಲ್ಲಿ ತತ್ತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಮತ್ತು ಅವುಗಳ ಉಪನದಿಗಳು ಉಕ್ಕಿ ಹರಿಯುತ್ತಿದ್ದು ಕೆಲವು ಪ್ರದೇಶಗಳಿಂದ ಪ್ರವಾಹವು ಕಡಿಮೆಯಾಗಲು ಪ್ರಾರಂಭಿಸಿದೆ. ಆದರೆ ಕಳೆದ 24 ಗಂಟೆಗಳಲ್ಲಿ ಏಳು ಸಾವುಗಳು ವರದಿಯಾಗುವುದರೊಂದಿಗೆ ಸಂಖ್ಯೆ 108 ಕ್ಕೆ ಏರಿದೆ.

'ಬರಾಕ್ ಕಣಿವೆಗೆ ಗೇಟ್‌ವೇ' ಎಂದು ಪರಿಗಣಿಸಲಾದ ಸಿಲ್ಚಾರ್‌ನ ಪರಿಸ್ಥಿತಿಯು ಆತಂಕಕಾರಿಯಾಗಿದೆ. ಹೆಚ್ಚಿನ ಪ್ರದೇಶಗಳು ಇನ್ನೂ ನೀರಿನಲ್ಲಿ ಮುಳುಗಿವೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತೀವ್ರವಾಗಿ ಪೀಡಿತ ಜಿಲ್ಲೆಗಳಲ್ಲಿ ವಿಶೇಷವಾಗಿ ಸಿಲ್ಚಾರ್ ಇರುವ ಕ್ಯಾಚಾರ್‌ನಲ್ಲಿ ನಿಯೋಜಿಸಲಾದ ಹೆಚ್ಚುವರಿ ಸಂಪನ್ಮೂಲಗಳೊಂದಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಮತ್ತಷ್ಟು ವೇಗಗೊಳಿಸಿದೆ ಎಂದು ಹೇಳಿದೆ. 207 ಸಿಬ್ಬಂದಿಯೊಂದಿಗೆ ಎಂಟು ಎನ್‌ಡಿಆರ್‌ಎಫ್ ತಂಡಗಳನ್ನು ಇಟಾನಗರ ಮತ್ತು ಭುವನೇಶ್ವರದಿಂದ ಕರೆತರಲಾಗಿದ್ದು, 120 ಸದಸ್ಯರೊಂದಿಗೆ ಸೇನಾ ತಂಡವನ್ನು ದಿಮಾಪುರದಿಂದ ಒಂಬತ್ತು ದೋಣಿಗಳೊಂದಿಗೆ ಸಿಲ್ಚಾರ್‌ನಲ್ಲಿ ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ.

ಸಹಾಯವಾಣಿ ಆರಂಭ

ಸಹಾಯವಾಣಿ ಆರಂಭ

ಹೆಚ್ಚುವರಿಯಾಗಿ, ಎರಡು ಸಿಆರ್‌ಪಿಎಫ್ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ಕ್ಯಾಚಾರ್‌ಗೆ ಏರ್‌ಲಿಫ್ಟ್ ಮಾಡಲಾಗಿದೆ. ಜಿಲ್ಲೆಯ ಪರಿಸ್ಥಿತಿಗಾಗಿ ರಾಜ್ಯ ಸರ್ಕಾರವು ಸಹಾಯವಾಣಿ -- 0361-2237219, 9401044617 ಮತ್ತು 1079 ಅನ್ನು ಪ್ರಾರಂಭಿಸಿದೆ.

ಹೆಲಿಕಾಪ್ಟರ್‌ಗಳ ಆಹಾರ ಹಂಚಿಕೆ

ಹೆಲಿಕಾಪ್ಟರ್‌ಗಳ ಆಹಾರ ಹಂಚಿಕೆ

ಸಿಲ್ಚಾರ್ ಪಟ್ಟಣ ಪ್ರವಾಹದ ನೀರಿನಲ್ಲಿ ಮುಳುಗಿರುವುದರಿಂದ ಸುಮಾರು ಮೂರು ಲಕ್ಷ ಜನರು ಆಹಾರ, ಶುದ್ಧ ಕುಡಿಯುವ ನೀರು ಮತ್ತು ಔಷಧಿಗಳ ತೀವ್ರ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಆಹಾರ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ನೀರಿನಿಂದ ತೀವ್ರವಾಗಿ ಹಾನಿ

ನೀರಿನಿಂದ ತೀವ್ರವಾಗಿ ಹಾನಿ

ಕಣಿವೆಯ ಮೂರು ಜಿಲ್ಲೆಗಳಾದ ಕ್ಯಾಚಾರ್, ಹೈಲಕಂಡಿ ಮತ್ತು ಕರೀಮ್‌ಗಂಜ್, ಬರಾಕ್ ಮತ್ತು ಕುಶಿಯಾರಾ ನೀರಿನಿಂದ ತೀವ್ರವಾಗಿ ಹಾನಿಯೊಳಗಾಗಿವೆ. 10,32,561 ಜನರು ಬಳಲುತ್ತಿರುವ ಬಾರ್ಪೇಟಾ ಅತ್ಯಂತ ಹೆಚ್ಚು ಪೀಡಿತ ಜಿಲ್ಲೆಯಾಗಿದೆ. ಇಲ್ಲಿ 4,29,166 ಜನರು ಗಾಯಗೊಂಡಿದ್ದಾರೆ.


ನಿರಂತರ ಮಳೆಯಿಂದ ಉಂಟಾದ ವಿನಾಶಕಾರಿ ಪ್ರವಾಹವು 103 ಕಂದಾಯ ವೃತ್ತಗಳು ಮತ್ತು 4,536 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ರಾಜ್ಯಾದ್ಯಂತ ಒಟ್ಟು 2,84,875 ಜನರು 759 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅದು ತಿಳಿಸಿದೆ.

ಬೆಳೆ ಜಲಾವೃತ

ಬೆಳೆ ಜಲಾವೃತ

ಪ್ರವಾಹವು 173 ರಸ್ತೆಗಳು ಮತ್ತು 20 ಸೇತುವೆಗಳನ್ನು ಹಾನಿಗೊಳಿಸಿದರೆ, ಬಕ್ಸಾ ಮತ್ತು ದರ್ರಾಂಗ್ ಜಿಲ್ಲೆಗಳಲ್ಲಿ ತಲಾ ಎರಡು ಒಡ್ಡುಗಳು ಒಡೆದು ಹೋಗಿವೆ. ಒಟ್ಟಾರೆಯಾಗಿ 10,0869.7 ಹೆಕ್ಟೇರ್ ಬೆಳೆ ಜಲಾವೃತಗೊಂಡಿದೆ. ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್ ಮತ್ತು ಧುಬ್ರಿ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಸವೆತ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+