ಪ್ರಸಿದ್ದ ಮಠದ ಜಾತ್ರೆ ರದ್ದು; ಕಣ್ಣೀರಿಟ್ಟ ಸ್ವಾಮೀಜಿ
ಗದಗ, ಏಪ್ರಿಲ್ 23: ಕೊರೊನಾ ಮಹಾಮಾರಿಯಿಂದ ಲಾಕ್ಡೌನ್ ಆಚರಣೆಯಲ್ಲಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಅನೇಕ ಕಡೆ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತದೆ.
ಆದರೆ, ಲಾಕ್ಡೌನ್ ಇರುವುದರಿಂದ ಜಾತ್ರೆಗಳಿಗೂ ತಡೆ ಹೇರಲಾಗಿದೆ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದ ಜಾತ್ರೆಗಳು ವಿಧಿಯಿಲ್ಲದೆ ನಿಂತಿವೆ.
ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಗದಗ ಜಿಲ್ಲೆಯ ಶಿರಹಟ್ಟಿ ಫಕೀರ್ ಸ್ವಾಮಿ ಮಠದ ಜಾತ್ರೆಯನ್ನೂ ರದ್ದು ಮಾಡಲಾಗಿದೆ. ಪ್ರತಿ ವರ್ಷ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದ್ದ ಈ ಜಾತ್ರೆಯನ್ನು ಕೊರೊನಾ ಕಾರಣದಿಂದ ರದ್ದು ಮಾಡಿದ್ದೇವೆ ಎಂದು ಹೇಳಿ, ಮಠದ ಪ್ರಸ್ತುತ ಮಠಾಧಿಪತಿ ಫಕೀರ್ ಸಿದ್ದರಾಮ ಶ್ರೀ ಕಣ್ಣೀರಿಟ್ಟಿದ್ದಾರೆ.

ಶ್ರೀಗಳು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿರಹಟ್ಟಿಯ ಈ ಮಠ ಕರ್ನಾಟಕದಲ್ಲಿ 16 ನೇ ಶತಮಾನದಿಂದಲೂ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ.












Click it and Unblock the Notifications