ಹುಬ್ಬಳ್ಳಿ: ಕಲಾವಿದರ ಮನಸೆಳೆವ ಸಮೂಹ ಚಿತ್ರಕಲಾ ಪ್ರದರ್ಶನ
ಹುಬ್ಬಳ್ಳಿ,ಮಾರ್ಚ್,೦4: ಸತ್ವರೂಪ ಫೌಂಡೇಶನ್ ಸಂಸ್ಥೆಯ ಅಡಿಯಲ್ಲಿ ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಕೃತಿ ಕಾಲೇಜಿನಲ್ಲಿ ಆರಂಭವಾದ ಸಮಕಾಲೀನ ಕಲಾಕೃತಿಗಳ ಸಮೂಹ ಚಿತ್ರಕಲಾ ಪ್ರದರ್ಶನ ಮಾರ್ಚ್ 5ರವರೆಗೂ ನಡೆಯಲಿದೆ.
ಸಮೂಹ ಚಿತ್ರಕಲಾ ಪ್ರದರ್ಶನವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ, ಬಾದಾಮಿ ಕೇಂದ್ರದ ದೃಶ್ಯಕಲಾ ವಿಭಾಗದ ಆಡಳಿತಾಧಿಕಾರಿ ಕೆ.ಎಚ್. ಕಟ್ಟಿ ಉದ್ಘಾಟಿಸಿ ಮಾತನಾಡಿ, 'ಹುಬ್ಬಳ್ಳಿಯಲ್ಲಿ ಯಾವುದೇ ಸರಕಾರಿ ಗ್ಯಾಲರಿಗಳಿಲ್ಲ. ಇದರಿಂದ ಕಲಾವಿದರಿಗೆ ನಿರಾಸೆ ಸಹಜ. ಆದರೆ ಸಂಸ್ಕೃತಿ ಕಾಲೇಜಿನವರು ಪ್ರದರ್ಶನ ಗ್ಯಾಲರಿಯನ್ನು ಹೊಸದಾಗಿ ಸ್ಥಾಪನೆ ಮಾಡಿರುವುದು ಸಂತೋಷದ ಸಂಗತಿ' ಎಂದರು.[ಮೈಸೂರಿನ 'ಜ್ಯೋತಿ'ಗೆ ಕರಕುಶಲ ಕಲೆಯೇ ಬಾಳಿನ ಬೆಳಕು]

ಚಿತ್ರಕಲೆ ನಿಜಕ್ಕೂ ಸಮಾಜಕ್ಕೆ ಬಹುದೊಡ್ಡ ಕಾಣಿಕೆ ನೀಡಿದೆ. ಇಂದು ನಾವು ಕಾರ್ಟೂನ್ ಹಾಗೂ ಅನಿಮೇಶನ್ ನಂತಹ ದೊಡ್ದ ಕಲಾಕ್ಷೇತ್ರಕ್ಕೆ ಕಾಲಿರಿಸಿದ್ದೇವೆ. ಅಂತೆಯೆ ಅನ್ವಯಿಕ (ಕಮರ್ಶಿಯಲ್) ಕಲೆ ಕೂಡ ಇಂದು ಎಲ್ಲರಿಗೂ ಬೇಕಾಗಿರುವ ಮಾದ್ಯಮವಾಗಿದೆ. ಹಾಗಾಗಿ ಕಲಾವಿದರು ಕಲಾವಿದರಾಗಿ ಉಳಿದು ಕಲಾಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡುವ ಕಡೆಗೆ ಗಮನಹರಿಬೇಕು ಎಂದು ಕಿವಿಮಾತು ಹೇಳಿದರು.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]
ಸಂಸ್ಥೆಯ ಮ್ಯಾನೆಜ್ ಮೆಂಟ್ ಟ್ರಸ್ಟಿ ಡಾನಿಯೇಲ ಹೊಸಕೇರಿ, ಕಲಾವಿದರಾದ ಎನ್. ಆರ್. ನಾಯ್ಕರ್ , ಈರಣ್ಣ ಬಡಿಗೇರ, ವಿಜಯಲಕ್ಷ್ಮಿ ಸತ್ತೀಗೆರಿ, ಡಾ. ಬಿ. ಎಲ್. ಚವ್ಹಾಣ, ಅಜೀತ ಹುಲಮನಿ ,ಡಾ. ವೀಣಾ ಡಾನಿಯೇಲ ಹೋಸಕೇರಿ, ಡಾ. ವಿ. ಬಿ. ನಿಟಾಲಿ, ಕಬಾದಿ, ವಿ. ಜಿ. ಪತ್ತಾರ, ಬಾದಾಮಿ, ಚಂಡೆಪ್ಪನವರ, ಎಮ್ ಶೇಖ ಹಾಗೂ ಪ್ರಾಚಾರ್ಯ ನಟರಾಜ ಹೊನ್ನವಳ್ಳಿ, ಎಮ್ ಜೆ ಬಂಗ್ಲೆವಾಲೆ ಉಪಸ್ಥಿತರಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications