Lok Sabha Election 2024: ಚುನಾವಣಾ ಕರ್ತವ್ಯನಿರತ ಸಿಬ್ಬಂದಿ, ಅಧಿಕಾರಿಗಳಿಗೆ ಮಹತ್ವದ ಆದೇಶ
ಧಾರವಾಡ, ಮೇ. 03: ಧಾರವಾಡ ಜಿಲ್ಲೆಯ ಮತದಾರ ಆಗಿರುವ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ, ಅಧಿಕಾರಿಗಳು ಜಿಲ್ಲೆಯ ಯಾವುದೇ ಮತಗಟ್ಟೆಯಲ್ಲಿ ಇಡಿಸಿ (ಎಲೆಕ್ಷನ್ ಡ್ಯೂಟಿ ಸರ್ಟಿಪಿಕೆಟ್) ನೀಡಿ, ಇವಿಎಂ ಮೂಲಕ ಮತಚಲಾಯಿಸಬೇಕು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿಯೋಜಿತರಾದ ಸಿಬ್ಬಂದಿ, ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರರಾಗಿದ್ದು ಮತ್ತು ಚುನಾವಣಾ ಆಯೋಗ ನಿಗದಿಪಡಿಸಿದ ದಿನಾಂಕದೊಳಗೆ ಮತದಾನಕ್ಕಾಗಿ ನಿಗದಿತ ನಮೂನೆ 12ಎ ದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅಂತವರಿಗೆ ಇಡಿಸಿ (ಎಲೆಕ್ಷನ್ ಡ್ಯೂಟಿ ಸರ್ಟಿಪಿಕೆಟ್) ನಮೂನೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಮತದಾರರಂತೆ ಇವಿಎಂ ಮತಯಂತ್ರದ ಮೂಲಕ ಮತದಾನ
ಚುನಾವಣಾ ಕರ್ತವ್ಯನಿರತರಾದ ಧಾರವಾಡ ಜಿಲ್ಲೆಯ ಮತದಾರರು, ತಾವು ಕರ್ತವ್ಯ ನಿರ್ವಹಿಸುವ ಮತಗಟ್ಟೆ ಅಥವಾ ತಮ್ಮ ಸಮೀಪದ ಮತಗಟ್ಟೆಯಲ್ಲಿ ಮತದಾನ ದಿನದಂದು ಎಲ್ಲ ಮತದಾರರಂತೆ ಇವಿಎಂ ಮತಯಂತ್ರದ (ಬ್ಯಾಲೇಟ್ ಯಂತ್ರ) ಮೂಲಕ ಮತಚಲಾಯಿಸಬೇಕು. ಆದರೆ, ಬೇರೆ ಜಿಲ್ಲೆಯ ಮತದಾರರಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಅಧಿಕಾರಿಗಳು ಚುನಾವಣಾ ಆಯೋಗ ನಿಗಧಿಪಡಿಸಿದ ಅವಧಿಯಲ್ಲಿ ಅಂಚೆಮತಪತ್ರ ಕೋರಿ ನಮೂನೆ 12 ಅನ್ನು ಸಲ್ಲಿಸಿದಲ್ಲಿ, ಅವರ ಕೋರಿಕೆಯನ್ನು ಅವರು ಮತದಾರರಾಗಿರುವ ಲೋಕಸಭೆ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ನಂತರ ಸಂಬಂಧಿಸಿದ ಚುನಾವಣಾಧಿಕಾರಿಗಳು ಇವರ ಕೋರಿಕೆಯನ್ನು ಪರಿಶೀಲಿಸಿ, ಮತದಾರರ ವಿವರ ಖಚಿತಪಡಿಸಿಕೊಂಡು, ಅವರ ಅಂಚೆ ಮತಪತ್ರ ಸಿದ್ದಪಡಿಸಿ, ಮತದಾರರು ಕರ್ತವ್ಯನಿರತ ಜಿಲ್ಲೆಗೆ ವಿನಿಮಯ ಕೇಂದ್ರದ ಮೂಲಕ ಕಳುಹಿಸಿರುತ್ತಾರೆ. ಅಂತಹ ಮತದಾರರು ಕರ್ತವ್ಯ ನಿರತ ಜಿಲ್ಲೆಯಲ್ಲಿ ಸ್ಥಾಪಿಸಿರುವ ಅಂಚೆಮತಪತ್ರ ಸೌಲಭ್ಯ ಕೇಂದ್ರ(ಫೆಸಿಲಿಟೆಶನ್ ಸೆಂಟರ್)ದಲ್ಲಿ ಅಂಚೆ ಮತಪತ್ರದ ಮೇಲೆ ನಿಯಮಾನುಸಾರ ಮತ ಚಲಾಯಿಸುತ್ತಾರೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಚುನಾವಣಾ ಕರ್ತವ್ಯನಿರತ ಮತದಾರರಲ್ಲಿ ಅಂಚೆ ಮತಪತ್ರ ಮತ್ತು ಇಡಿಸಿ ಮೂಲಕ ಮತಚಲಾಯಿಸುವ ಎರಡು ಬೇರೆಬೇರೆ ವರ್ಗಗಳು ಆಗಿರುವುದರಿಂದ, ಈ ಬಗ್ಗೆ ಸರಿಯಾದ ಮಾಹಿತಿ ಪಡೆಯದೇ, ಇಡಿಸಿಗಳಿಗೆ ಅರ್ಹರಾದ ಮತದಾರರು ಆಯಾ ಇಲಾಖೆ ನೋಡಲ್ ಅಧಿಕಾರಿಗಳಿಂದ ಇಡಿಸಿ ಪಡೆಯದೇ, ಅಂಚೆಮತಪತ್ರ ಸೌಲಭ್ಯ ಕೇಂದ್ರಕ್ಕೆ ಬಂದು ಗೊಂದಲಕ್ಕೆ ಒಳಪಡುತ್ತಿರುವದರಿಂದ ಅವರಿಗೆ ತಿಳುವಳಿಕೆ ನೀಡಿ, ಮತದಾನದಿದಂದು ಮತ ಚಲಾಯಿಸುವಂತೆ ಸೂಚಿಸಲಾಗಿದೆ.
ಮೇ 1, 2 ಮತ್ತು 3 ರಂದು ಮೂರು ದಿನಗಳ ಕಾಲ, ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಚೆಮತಪತ್ರದ ಮೇಲೆ ಮತದಾನ ಮಾಡಲು ಅವಕಾಶ ನೀಡಿ, ಕಳೆದ ಒಂದು ವಾರದಿಂದ ಆಯಾ ಇಲಾಖೆಗಳಿಗೆ ಮಾಹಿತಿ ನೀಡಿ, ಮಾಧ್ಯಮಗಳ ಮೂಲಕ ಈ ಕುರಿತು ಪ್ರಕಟಣೆ ನೀಡಲಾಗಿದೆ ಎಂದಿದ್ದಾರೆ.
ಮಾಧ್ಯಮ ಕಾರ್ಯಾಗಾರಗಳಲ್ಲಿ ವಿವರ ನೀಡಿದ್ದರೂ ಗೊಂದಲ!
ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಸ್ಥಾಪಿಸಿರುವ ಸೌಲಭ್ಯ ಕೇಂದ್ರಕ್ಕೆ, ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯನಿರತ ಬೇರೆ ಲೋಕಸಭೆ ಮತಕ್ಷೇತ್ರಗಳ ಮತದಾರರಾಗಿರುವ ಪೊಲೀಸ್ ಹಾಗೂ ಇತರ ಸಿಬ್ಬಂದಿ ತಪ್ಪು ತಿಳುವಳಿಕೆಯಿಂದ ಅಂಚೆಮತದಾನಕ್ಕೆ ಆಗಮಿಸಿದ್ದರು. ಅವರಿಗೆ ತಿಳುವಳಿಕೆ ನೀಡಿ, ನಿಮ್ಮ ಅಂಚೆಮತಪತ್ರಗಳು ಹಾವೇರಿ ಜಿಲ್ಲಾಧಿಕಾರಿಗೆ ಬಂದಿರುತ್ತವೆ. ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರ ಧಾರವಾಡ ಲೋಕಸಭೆ ವ್ಯಾಪ್ತಿಗೆ ಒಳಪಟ್ಟರೂ, ಅದು ಹಾವೇರಿ ಜಿಾಲ್ಲೆಯ ತಾಲೂಕು ಆಗಿರುವದರಿಂದ ಹಾವೇರಿಯಲ್ಲಿ ಸ್ಥಾಪಿಸಿರುವ ಅಂಚೆಮತಪತ್ರ ಸೌಲಭ್ಯ ಕೇಂದ್ರದಲ್ಲಿ ತಾವು ಮತ ಚಲಾಯಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇಡಿಸಿ ಮತದಾನ ಸೌಲಭ್ಯ ಹಾಗೂ ಅಂಚೆಮತಪತ್ರದ ಮತದಾನ ಸೌಲಭ್ಯದ ಕುರಿತು ಆಯಾ ಇಲಾಖೆಯ ನೋಡಲ್ ಅಧಿಕಾರಿಗಳಿಗೆ, ಎಲ್ಲ ಚುನಾವಣಾ ತರಬೇತಿಗಳಲ್ಲಿ, ಚುನಾವಣೆ ಕುರಿತ ಮಾಧ್ಯಮ ಕಾರ್ಯಾಗಾರಗಳಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. ಆದರೂ ಕೆಲವರು ತಪ್ಪು ತಿಳುವಳಿಕೆಯಿಂದ ಇಡಿಸಿ ಸೌಲಭ್ಯದ ಬದಲಿಗೆ ಅಂಚೆಮತಪತ್ರ ಕೇಳಿ ಬರುತ್ತಾರೆ ಮತ್ತು ಅಂಚೆಮತದಾನಕ್ಕೆ ಮೂರು ದಿನಗಳ ಅವಕಾಶ ನೀಡಿದ್ದರೂ ಹಾಗೂ ಇಡಿಸಿ ಸೌಲಭ್ಯ ಪಡೆಯಲು ಸಾಕಷ್ಟು ಸಮಯವಕಾಶವಿದ್ದರೂ ಗೊಂದಲ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಂಚೆಮತದಾನ ಅಥವಾ ಇಡಿಸಿ ಸೌಲಭ್ಯದ ಮತದಾನ ಕುರಿತು ಗೊಂದಲಗಳಿದ್ದಲ್ಲಿ ಆಯಾ ಇಲಾಖೆಯಲ್ಲಿ ನೇಮಿಸಿರುವ ನೋಡಲ್ ಅಧಿಕಾರಿಗೆ ಸಂಪರ್ಕಿಸಿ ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆಮತಪತ್ರದ ಮತದಾನ ಸೌಲಭ್ಯ ಕೇಂದ್ರಗಳಲ್ಲಿ 1262 ಮತದಾನ
ಮೇ 01 ರಂದು ಧಾರವಾಡ ಅಂಚೆಮತದಾನ ಸೌಲಭ್ಯ ಕೇಂದ್ರದಲ್ಲಿ 1262 ಜನ ಅಧಿಕಾರಿ ಮತ್ತು ಸಿಬ್ಬಂದಿ ಮತದಾರರು ತಾವು ಮತದಾರರಾಗಿರುವ ಲೋಕಸಭೆ ಮತಕ್ಷೇತ್ರದ ಚುನಾವಣೆಯ ಅಂಚೆಮತಪತ್ರದ ಮೇಲೆ ತಮ್ಮ ಮತದಾನದ ಹಕ್ಕನ್ನು ನಿಯಮಾನುಸಾರ ಚಲಾಯಿಸಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications