ವೇಶ್ಯಾವೃತ್ತಿ ಕಾನೂನು ಬದ್ಧಗೊಳಿಸಿ : ಮಾತೆ ಮಹಾದೇವಿ
ಧಾರವಾಡ, ಅ. 13 : 'ವೇಶ್ಯಾವೃತ್ತಿ ಕಾನೂನು ಬದ್ಧ ಗೊಳಿಸಿ, ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಇದೊಂದೆ ಮಾರ್ಗ' ಎಂದು ಕೂಡಲಸಂಗಮ ಬಸವಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ. ಅತ್ಯಾಚಾರಗಳು ನಡೆಯಲು ಮಹಿಳೆಯರು ಧರಿಸುವ ಬಟ್ಟೆಗಳು ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡದಲ್ಲಿ
ಸೋಮವಾರ
ಪತ್ರಿಕಾಗೋಷ್ಠಿ
ನಡೆಸಿದ
ಮಾತೆ
ಮಹಾದೇವಿ
ಅವರು,
ವೇಶ್ಯಾವೃತ್ತಿಯನ್ನು
ಸರ್ಕಾರ
ಕಾನೂನು
ಬದ್ಧಗೊಳಿಸಿದರೆ,
ಅತ್ಯಾಚಾರ
ಪ್ರಕರಣಗಳು
ಕಡಿಮೆಯಾಗುತ್ತವೆ.
ಇದರಿಂದ
ವೇಶ್ಯಾವೃತ್ತಿಯಲ್ಲಿರುವ
ಮಹಿಳೆಯರಿಗೂ
ನೆರವು
ನೀಡಿದಂತಾಗುತ್ತದೆ'
ಎಂದು
ಹೇಳಿದರು.
'ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಅವರು ಧರಿಸುವ ಉಡುಪುಗಳು ಕಾರಣ ಎಂದು ಹೇಳಿದ ಮಾತೆ ಮಹದೇವಿ ಅವರು, ಅಂಗಾಗ ಕಾಣುವಂತೆ ಉಡುಪು ಧರಿಸುವುದರಿಂದ ಅತ್ಯಾಚಾರಕ್ಕೆ ಪ್ರೇರಣೆ ನೀಡಿದಂತಾಗುತ್ತದೆ' ಎಂದರು. [ಕರ್ನಾಟಕದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧವಾಗಬೇಕೆ?]
'ಧಾರ್ಮಿಕ ಸಂಸ್ಕಾರದ ಕೊರತೆಯೂ ಅತ್ಯಾಚಾರ ಹೆಚ್ಚಳವಾಗಲೂ ಕಾರಣವಾಗಿದ್ದು, ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಸುಳ್ಳು ಪ್ರಕರಣಗಳು ಹೆಚ್ಚಳವಾಗುತ್ತಿವೆ' ಎಂದು ಮಾತೆ ಮಹದೇವಿ ಅವರು ಆತಂಕ ವ್ಯಕ್ತಪಡಿಸಿದರು. [ವೇಶ್ಯೆಯ ಮಗಳೆಂದು ಪತಿಯಿಂದ ಅವಮಾನ: ಉಮಾಶ್ರೀ]
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿದ ಅವರು, ಈ ಪ್ರಕರಣ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಗಾಯಕಿಯ ಆರೋಪ ಸತ್ಯವಾದರೆ ಆಕೆಗೆ ನೈತಿಕ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.