KMF: ಧಾರವಾಡ ಕೆಎಂಎಫ್ ಚುನಾವಣೆ: ಆಯ್ಕೆಯಾದ 09 ನಿರ್ದೇಶಕರ ಮಾಹಿತಿ
ಬೆಂಗಳೂರು, ಜುಲೈ 01: ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆ ಒಳಗೊಂಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ರವಿವಾರ (ಜೂನ್ 30) ಚುನಾವಣೆ ಜರುಗಿತು. ಈ ವೇಳೆ ಒಂಬತ್ತು ಮಂದಿ ನಿರ್ದೇಶಕರಾಗಿ ಆಯ್ಕೆ ಆದರು.
ಒಟ್ಟು ನಿರ್ದೇಶಕ ಸ್ಥಾನಗಳಲ್ಲಿ ಗದಗ ಜಿಲ್ಲೆಯ ಗದಗ- ನರಗುಂದ ತಾಲೂಕು ಕ್ಷೇತ್ರದ 1 ನಿರ್ದೇಶಕ ಸ್ಥಾನಕ್ಕೆ ಹನುಮಂತಗೌಡ ಗೋವಿಂದಗೌಡ ಹಿರೇಗೌಡರ ಅವಿರೋಧವಾಗಿ ಆಯ್ಕೆಯಾದರು. ಮಿಕ್ಕ ಎಂಟು ಸ್ಥಾನಗಳಿಗೆ ನಡೆದ ಚುನಾವಣೆ ಕಣದಲ್ಲಿ 17 ಅಭ್ಯರ್ಥಿಗಳಿದ್ದರು. ಈ ಪೈಕಿ ಅಂತಿಮವಾಗಿ ನಡೆದ ಮತದಾನದಲ್ಲಿ ಹೆಚ್ಚು ಮತಗಳನ್ನು ಪಡೆದು 8 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಧಾರವಾಡ, ಅಳ್ನಾವರ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಮತಕ್ಷೇತ್ರದಿಂದ ಶಂಕರಪ್ಪ ವೀರಪ್ಪ ಮುಗದ ಸತತ 5ನೇ ಬಾರಿಗೆ ಚುನಾಯಿತರಾಗಿದ್ದಾರೆ. ಈ ಕ್ಷೇತ್ರದ ಒಟ್ಟು 83 ಮತದಾರರ ಪೈಕಿ 82 ಜನ ಮತದಾನ ಮಾಡುವ ಶೇ.98.80 ರಷ್ಟು ಮತದಾನವಾಗಿತ್ತು.
ನಾಲ್ಕು ಮತಗಳ ಅಂತರದಿಂದ ಸೋಲು
ಈ ಪೈಕಿ ಒಟ್ಟು 78 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಹೇಮರಡ್ಡಿ ನಾಗರಡ್ಡಿ ಲಿಂಗರಡ್ಡಿನ್ನು ಮಣಿಸಿದ್ದು, ಹೇಮರಡ್ಡಿ ಕೇವಲ ನಾಲ್ಕು ಮತಗಳಷ್ಟೇ ಪಡೆದಿದ್ದಾರೆ.
ಕಲಘಟಗಿ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಗೊಂಡ ಒಟ್ಟು 38 ಮತಗಳಲ್ಲಿ ಗೀತಾ ಸುರೇಶ ಮರಲಿಂಗಣ್ಣವರ 21 ಮತಗಳನ್ನು ಪಡೆಯುವ ಮೂಲಕ ಹನಮಂತಪ್ಪ ಫಕ್ಕೀರಪ್ಪ ಕೊರವರ (17 ಪಡೆದ ಮತ) ಅವರನ್ನು ಸೋಲಿಸಿದ್ದಾರೆ.

ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಯಾದ ಒಟ್ಟು 67 ಮತಗಳಲ್ಲಿ ಸುರೇಶ ಬಣವಿ ಅವರು 36 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಗಂಗಪ್ಪ ಮೂಕಪ್ಪ ಮೊರಬದ ಅವರನ್ನು ಕೇವಲ ನಾಲ್ಕು ಮತಗಳ ಅಂತದಿಂದ ಪರಾಭವಗೊಳಿಸಿದ್ದಾರೆ.
ರೋಣ ಮತ್ತು ಗಜೇಂದ್ರಗಡ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಗೊಂಡ ಒಟ್ಟು 41 ಮತಗಳಲ್ಲಿ ನೀಲಕಂಠಪ್ಪ ಅಸೂಟಿ 29 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಗದಿಗೆಪ್ಪ ಕಿರೇಸೂರ ಅವರನ್ನು 19 ಮತಗಳಿಂದ ಮಣಿಸಿದರು.
ಇನ್ನೂ ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷೇಶ್ವರ ತಾಲೂಕು ಮತಕ್ಷೇತ್ರದ ಒಟ್ಟು 71 ಮತಗಳ ಪೈಕಿ 69 ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ ಲಿಂಗರಾಜಗೌಡ ಹನುಮಂತಗೌಡ ಪಾಟೀಲ 50 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿದ್ದ ಶೇಖಣ್ಣ ಕಾಳೆ ಕೇವಲ 19 ಮತಗಳಷ್ಟೇ ಪಡೆದಿದ್ದಾರೆ.
ಶಿರಸಿ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ ಅವರು ವಿಜಯಶಾಲಿಯಾಗಿದ್ದಾರೆ.
ಕಳೆದ ಎರಡನೇ ಬಾರಿಯ ಜೊತೆಗೆ ಮೂರನೇ ಬಾರಿಗೆ ಕೂಡ ಸತತ ಗೆಲುವು ಸಾಧಿಸಿದ್ದಾರೆ. ಕೆಶಿನ್ಮನೆ 70 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಉಮಾಮಹೇಶ್ವರ ಹೆಗಡೆ ಕೇವಲ 14 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಇತರರ ಮತಗಳು, ಗೆಲುವಿನ ವಿವರ
ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಮತಕ್ಷೇತ್ರದ ಒಟ್ಟು 74 ಮತಗಳ ಪೈಕಿ ಚಲಾವಣೆಗೊಂಡ 73 ಮತಗಳಲ್ಲಿ ಪರಶುರಾಮ ವೀರಭದ್ರ ನಾಯ್ಕ 37 ಮತ ಪಡೆದು ವಿಜಯಶಾಲಿಯಾದರೆ ಪ್ರತಿಸ್ಪರ್ಧಿಗಳಾದ ಸಾಧನಾ ರಾಜೇಶ್ ಭಟ್ಟ 27, ಮಂಜುನಾಥ ಶಿವರಾಮ ಹೆಗಡೆ 9 ಮತಗಳನ್ನು ಪಡೆದರು.
ಯಲ್ಲಾಪೂರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರದ ಒಟ್ಟು 94 ಮತಗಳ ಪೈಕಿ ಚಲಾವಣೆಗೊಂಡ 91 ಮತಗಳಲ್ಲಿ ಶಂಕರ ಪರಮೇಶ್ವರ ಹೆಗಡೆ 66 ಮತಗಳನ್ನು ಪಡೆದು 24 ಮತ ಪಡೆದ ಪ್ರಶಾಂತ ಸುಬ್ರಾಯ ಸಭಾಹಿತ ಅವರನ್ನು ಮಣಿಸಿದ್ದಾರೆ.
ಎಲ್ಲೆಡೆ ಗೆಲುವಿನ ಸಂಭ್ರಮ, ಸಿಹಿ ವಿತರಣೆ
ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಧಾರವಾಡ ಉತ್ಪನ್ನ ಡೇರಿಯ ಮುಖ್ಯ ಕಚೇರಿ ಆವರಣದಲ್ಲಿ ಮತದಾನಕ್ಕೆ ಪ್ರತ್ಯೇಕ ಮೂರು ಕಡೆ ಮೂರು ಜಿಲ್ಲೆಯ ಮತದಾರರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆಡಳಿತ ಮಂಡಳಿಯ ಎಂಟು ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇ.98.38 ರಷ್ಟು ಮತದಾನ ಆಯಿತು.
ಒಟ್ಟು 555 ಮತದಾರರ ಪೈಕಿ 546 ಜನ ಮತ ಚಲಾಯಿಸಿದರೆ ಈ ಚಲಾವಣೆಗೊಂಡ ಮತಗಳ ಪೈಕಿ ಯಲ್ಲಾಪೂರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಯಾದ 91 ಮತಗಳ ಪೈಕಿ 1 ಮತವಷ್ಟೇ ಕುಲಗೆಟ್ಟ ಮತವನ್ನಾಗಿ ಪರಿಗಣಿಸಲಾಯಿತು.
ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ್ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲಿಗರ ಪರ ಪ್ರಚಾರ ಕೈಗೊಂಡಿದ್ದರು. ಫಲಿತಾಂಶ ಪ್ರಕಟಗೊಂಡ ಬಳಿಕ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications