'ಧಾರವಾಡದಲ್ಲಿ ಇನ್ಫೋಸಿಸ್ ಘಟಕ ಸ್ಥಾಪನೆ ಖಚಿತ'
ಬೆಂಗಳೂರು, ಜ.1: ಇನ್ಫೋಸಿಸ್ ಸಂಸ್ಥೆ ಧಾರವಾಡದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದು, ಅಗತ್ಯ ಭೂಮಿಯನ್ನು ಈಗಾಗಲೇ ಖರೀದಿಸಲಾಗಿದೆ ಎಂದು ಐಟಿ ಸಚಿವ ಎಸ್ ಆರ್ ಪಾಟೀಲ್ ಹೇಳಿದ್ದಾರೆ. ಇದರಿಂದಾಗಿ ಇನ್ಫೋಸಿಸ್ ಸಂಸ್ಥೆ ಕರ್ನಾಟಕದಲ್ಲೇ ಬಂಡವಾಳ ಹೂಡಿಕೆ ಮಾಡುವುದು ಖಚಿತವಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ದೇಶದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ತನ್ನ ಹೊಸ ಘಟಕವನ್ನು ಸ್ಥಾಪನೆ ಮಾಡಲಿದೆ. ಸುಮಾರು 1ರಿಂದ 3 ಸಾವಿರ ಕೋಟಿ ರು ಬಂಡವಾಳ ಹೂಡಿಕೆ ಮಾಡಲಿದೆ. ಸುಮಾರು 6 ಸಾವಿರ ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಸಚಿವ ಪಾಟೀಲ್ ಹೇಳಿದರು. [ಇನ್ಫೋಸಿಸ್ ಶಿಫ್ಟಿಂಗ್: ಸಿಎಂ ಸಿದ್ದು ಜಾಣ ಉತ್ತರ]
ಸರೋಜಿನಿ
ಮಹಿಷಿ
ವರದಿ
ಜಾರಿ:
ಖಾಸಗಿ
ವಲಯ,
ಐಟಿ
ಬಿಟಿ
ಕ್ಷೇತ್ರದಲ್ಲಿ
ಕನ್ನಡಿಗರಿಗೆ
ಹೆಚ್ಚಿನ
ಉದ್ಯೋಗ
ಅವಕಾಶ
ಸಿಗಬೇಕು
ಎಂಬುದು
ಸರ್ಕಾರದ
ಉದ್ದೇಶವಾಗಿದೆ.
ಈ
ಕುರಿತಂತೆ
ಸರೋಜಿನಿ
ಮಹಿಷಿ
ವರದಿ
ಜಾರಿಗೆ
ಮುಖ್ಯಮಂತ್ರಿಗಳ
ಜೊತೆ
ಚರ್ಚಿಸಿ
ಅಂತಿಮ
ಸೂತ್ರ
ತಯಾರಿಸಲಾಗುವುದು
ಎಂದು
ಎಸ್
ಆರ್
ಪಾಟೀಲ್
ತಿಳಿಸಿದರು.
[80
ಲಕ್ಷ
ಉದ್ಯೋಗ
ಅವಕಾಶ
ಏರಿಕೆ
ಗುರಿ]
ಎರಡನೇ ಸ್ತರದ ನಗರಗಳಿಗೆ ಐಟಿ ಬಿಟಿ ಉದ್ಯಮ ಕರೆದೊಯ್ಯಲಾಗುವುದು. ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಐಟಿ ಉದ್ಯಮ ಸ್ಥಾಪನೆಗೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.
ಭೂಮಿ ನೀಡುವ ಸಂಬಂಧ ಉಂಟಾಗಿರುವ ಅವ್ಯವಸ್ಥೆಯಿಂದ ಬೇಸತ್ತು ದೇವನಹಳ್ಳಿ ಯೋಜನೆಯನ್ನು ಇನ್ಫೋಸಿಸ್ ಸ್ಥಗಿತಗೊಳಿಸಿ ದೊಡ್ಡ ಸಂಚಲನ ಮೂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ ]
ವಾರ್ಷಿಕವಾಗಿ ಸುಮಾರು 8 ಬಿಲಿಯನ್ ಆದಾಯವನ್ನು ಹೊಂದಿರುವ ಸುಮಾರು 1.4 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರು ಮೂಲದ ದೇಶದ ಎರಡನೇ ಅತಿದೊಡ್ಡ ಸಂಸ್ಥೆ ಇನ್ಫೋಸಿಸ್ ಅಸಮಾಧಾನ ಸಹಜವಾಗಿದೆ ಎಂದು ಇತರೆ ಉದ್ಯಮಿಗಳು ದನಿಗೂಡಿಸಿದ್ದರು. ನಂತರ ಎಚ್ಚೆತ್ತುಕೊಂಡ ಸರ್ಕಾರ ಐಟಿ ಉದ್ಯಮಿಗಳನ್ನು ಹಿತ ಕಾಯಲು ಮುಂದಾಗಿದೆ.