Get Updates
Get notified of breaking news, exclusive insights, and must-see stories!

ಅಯೋಧ್ಯೆ ರಾಮಮಂದಿರದ ಯಾಗ ಕಾರ್ಯಕ್ರಮಕ್ಕೆ ಭಾಗಿಯಾಗಲಿರುವ ಧಾರವಾಡದ ವಿದ್ವಾಂಸ

ಧಾರವಾಡ, ಜುಲೈ, 19: ಅಯೋಧ್ಯೆಯ ರಾಮಮಂದಿರ ಪ್ರದೇಶದಲ್ಲಿ ಜುಲೈ 21ರಿಂದ 28ರವರೆಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಚತುರ್ವೇದ ಸಂಹಿತಾ ಯಾಗ, ಶ್ರೀಮದ್ ಭಾಗವತ ಹಾಗೂ ವಾಲ್ಮೀಕಿ ರಾಮಾಯಣದ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಧಾರವಾಡದ ವೈದಿಕ ವಿದ್ವಾಂಸ ಗಿರೀಶ್‌ ಶೆಲ್ಲಿಕೇರಿ ಪಾಲ್ಗೊಳ್ಳಲಿದ್ದಾರೆ.

ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ 40 ವೈದಿಕ ವಿದ್ವಾಂಸರು ತೆರಳಲಿದ್ದಾರೆ. ಶುಕ್ಲ ಯಜುರ್ವೇದದ 3,000 ಶ್ಲೋಕ ಸೇರಿ 1.30 ಲಕ್ಷ ಶ್ಲೋಕಗಳ ಮೂಲಕ ಆಹುತಿ ನೀಡಲಾಗುವುದು. ವಿದ್ವಾಂಸ ಗಿರೀಶ್‌ ಅವರು ಶುಕ್ಲ ಯಜುರ್ವೇದ ಶ್ಲೋಕ ಪಠಣ ಮಾಡಲಿದ್ದಾರೆ.

Dharwads scholar girish will participate in Yaga program of Ayodhya Ram Mandir

ಶಾರದಾಂಬೆ ವಿಗ್ರಹಕ್ಕೆ ಶೃಂಗೇರಿ ಶ್ರೀಗಳಿಂದ ಪೂಜೆ

ಹಾಗೆಯೇ ಕಳೆದ ಜೂನ್‌ 5ರಂದು ಶೃಂಗೇರಿಯ ಇಬ್ಬರು ಗುರುವತ್ರಯರಾದ ಶ್ರೀ ಭಾರತಿ ತೀರ್ಥ ಹಾಗೂ ವಿಧುಶೇಖರ ಶ್ರೀಗಳು ಕಾಶ್ಮೀರದ ಟ್ವಿಟಾಲ್‌ನಲ್ಲಿ ನೂತನವಾಗಿ ಸಿದ್ಧಗೊಂಡಿರುವ ಶಾರದಾಂಬೆ ವಿಗ್ರಹಕ್ಕೆ ಪ್ರತಿಷ್ಠಾಪನ ಪೂಜೆ ನೆರವೇರಿಸಿದ್ದರು.

75 ವರ್ಷಗಳ ಬಳಿಕ ತಿತ್ವಾಲ್‌ನಲ್ಲಿ ನಿರ್ಮಾಣವಾಗಿರುವ ಶಾರದಾಂಬೆ ದೇಗುಲದಲ್ಲಿ ಇಂದು ವಿಧುಶೇಖರ ಶ್ರೀಗಳು ಪೂಜೆ ಸಲ್ಲಿಸಿದ್ದಾರೆ. ಇನ್ನು ಶೃಂಗೇರಿಯ ಗುರುವತ್ರಯರು ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದ್ದರು. ವಿಧುಶೇಖರ ಶ್ರೀಗಳು ಶೃಂಗೇರಿಯಿಂದ 4000 ಕಿಲೋ ಮೀಟರ್‌ ದೂರದಲ್ಲಿರುವ ತಿತ್ವಾಲ್‌ಗೆ ವಿಶೇಷ ವಿಮಾನದಲ್ಲಿ ತೆರಳಿದ್ದರು.

1948ರಲ್ಲಿ ಪಾಕಿಸ್ತಾನದ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ಮಂದಿರವನ್ನು ಶೃಂಗೇರಿ ಜಗದ್ಗುರುಗಳ ಆಶೀರ್ವಾದದಲ್ಲಿ ಕಾಶ್ಮೀರಿ ಪಂಡಿತರು ಪುನರ್ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದರು. ಭಾರತದ ಸಂವಿಧಾನದ 370ನೇ ವಿಧಿ ನಂತರ ಪುನರ್‌ ನಿರ್ಮಾಣಗೊಂಡು ಯುಗಾದಿಯಂದು ಲೋಕಾರ್ಪಣೆಗೊಂಡಿದ್ದ ಶಾರದಾ ಮಂದಿರಕ್ಕೆ ಶೃಂಗೇರಿ ಜಗದ್ಗುರುಗಳು ಇತ್ತೀಚೆಗಷ್ಟೇ ಪೂಜೆ ಸಲ್ಲಿಸಿದ್ದರು.

ಕಾಶ್ಮೀರದ ಟಿಟ್ವಾಲ್‌ನಲ್ಲಿರುವ ಆದಿ ಶಂಕರಾಚಾರ್ಯರ ಸರ್ವಜ್ಞ ಪೀಠಕ್ಕೆ ತೆರಳಿ ಜಗದ್ಗುರುಗಳು ಶಾರದಾಂಬೆ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದರು. ಕಾಶ್ಮೀರಿ ಪಂಡಿತರು ಮಾರ್ಚ್ 18ರಂದು ಶೃಂಗೇರಿಯಿಂದ ಪಂಚಲೋಹದ ಶಾರದಾಂಬೆ ವಿಗ್ರಹವನ್ನ ಕೊಂಡೊಯ್ದಿದ್ದು, ನಂತರ ಮಾರ್ಚ್‌ 22ರಂದು‌ ಟಿಟ್ವಾಲ್‌‌ನಲ್ಲಿ ಕಾಶ್ಮೀರಿ ಪಂಡಿತರಿಂದ ಇದು ಪ್ರತಿಷ್ಠಾಪನೆ ಆಗಿತ್ತು‌.‌ ಪಂಚಲೋಹದ ಶಾರದಾಂಭೆ ವಿಗ್ರಹಕ್ಕೆ‌ ಶೃಂಗೇರಿ ಶ್ರೀಗಳು ಜೂನ್‌ ತಿಂಗಳ 5ರಂದು ಪೂಜೆ ನೆರವೇರಿಸಿದ್ದರು.

ಕಾಶ್ಮೀರದ ಟಿಟ್ವಾಲ್‌ಗೆ ತೆರಳಿ‌ ಶೃಂಗೇರಿ ಶ್ರೀಗಳಾದ ಶ್ರೀ ವಿಧುಶೇಖರ ಮತ್ತು ಭಾರತೀ ಮಹಾಸ್ವಾಮೀಜಿಗಳು ಪೂಜೆ ಸಲ್ಲಿಸಿದ್ದರು.‌ ಎರಡು ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಶೃಂಗೇರಿಗೆ ಭೇಟಿ ನೀಡಿ ಸರ್ವಜ್ಞ ಪೀಠವನ್ನು ಪುನರ್ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದ್ದರು. ಬಳಿಕ ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ ಇದೀಗ ಪಂಚಲೋಹದ ಸುಂದರ ಮೂರ್ತಿ ಸರ್ವಜ್ಞ ಪೀಠದಲ್ಲಿ ಪ್ರತಿಷ್ಠಾಪನೆ ಆಗಿದೆ. ಇದೀಗ ಅದೇ ಶಾರದಾಂಭೇ ಮೂರ್ತಿಗೆ ಜೂನ್‌ ತಿಂಗಳಲ್ಲಿ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಿಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+