ಧಾರವಾಡ : ನುಚ್ಚಂಬಲಿ ಬಾವಿ ಈಗ ಸ್ವಚ್ಛ, ಸುಂದರ
ಧಾರವಾಡ, ಜುಲೈ 24 : ಧಾರವಾಡ ನಗರದ ಹೊಸ ಯಲ್ಲಾಪುರದ ಐತಿಹಾಸಿಕ ನುಚ್ಚಂಬಲಿ ಬಾವಿಯನ್ನು ಶುಚಿಗೊಳಿಸಲು ಮಹಾನಗರಪಾಲಿಕೆಯೊಂದಿಗೆ ಕೈಜೋಡಿಸಿರುವ ಸ್ಥಳೀಯ ವಿನಾಯಕ ವೃಂದದ ಯುವಕರ ಕಾರ್ಯವನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಶ್ಲಾಘಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯುವಕರನ್ನು ಭೇಟಿ ಮಾಡಿದ ದೀಪಾ ಚೋಳನ್, "ಸುಮಾರು 70 ಅಡಿಗಳಿಗೂ ಹೆಚ್ಚು ಆಳವಿರುವ ನುಚ್ಚಂಬಲಿ ಬಾವಿಯು ಹಲವು ದಶಕಗಳ ಹಿಂದೆ ಧಾರವಾಡ ನಗರಕ್ಕೆ ನೀರು ಒದಗಿಸುವ ಪ್ರಮುಖ ಜಲಮೂಲವಾಗಿತ್ತು" ಎಂದು ಹೇಳಿದರು.
"ಗಣೇಶೋತ್ಸವ, ಮೋಹರಂ, ನವರಾತ್ರಿ ದುರ್ಗಾದೇವಿ ವಿಗ್ರಹಗಳು, ಪೂಜಾ ಸಾಮಗ್ರಿಗಳ ವಿಸರ್ಜನೆ ಕಾರ್ಯದಿಂದ ಬಾವಿ ಮಲಿನವಾಗುವುದನ್ನು ತಡೆಯಲು ಸ್ಥಳೀಯ ವಿನಾಯಕ ಯುವಕ ವೃಂದದ ಗೆಳೆಯರು ನಾಲ್ಕು ತಿಂಗಳ ಹಿಂದೆ ಬಾವಿಯನ್ನು ಶುಚಿಗೊಳಿಸಲು ಪಾಲಿಕೆಗೆ ಸಹಕಾರ ನೀಡಿದ್ದಾರೆ" ಎಂದರು.
ವಾರಕ್ಕೊಮ್ಮೆ ಬಾವಿಯ ಗೋಡೆಗಳಿಗೆ ಸುಣ್ಣ ಬಳಿಯಲಾಗುತ್ತಿದೆ. ಮಹಾನಗರ ಪಾಲಿಕೆ ಪೂರೈಸುವ ಬ್ಲೀಚಿಂಗ್ ಪೌಡರ್ ಹಾಕಿ ನೀರಿನ ಗುಣಮಟ್ಟ ಕಾಪಾಡಲು ಒತ್ತು ನೀಡುತ್ತಿರುವ ಕುರಿತು ಯುವಕರೊಂದಿಗೆ ಚರ್ಚೆ ಮಾಡಲಾಯಿತು.

ಬಾವಿಯಲ್ಲಿ ಯಾರೂ ಕೂಡ ಶಾಂಪೂ, ಸಾಬೂನು ಬಳಸಿ ಸ್ನಾನ ಮಾಡದಂತೆ ನಾವೆಲ್ಲ ಯುವಕರು ಕಟ್ಟೆಚ್ಚರ ವಹಿಸಿದ್ದೇವೆ, ವಿಗ್ರಹ ವಿಸರ್ಜಿಸುವ ಕಟ್ಟೆ ದುರಸ್ತಿ ಮಾಡಲು ಕ್ರಮ ಜರುಗಿಸಬೇಕು ಎಂದು ನಾಗರಾಜ ಹಳಕಟ್ಟಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಸಮಸ್ತ ಧಾರವಾಡ ಜನತೆಯ ಹೆಮ್ಮೆಯ ನುಚ್ಚಂಬಲಿ ಬಾವಿಯ ಸ್ವಚ್ಛತೆ ನಮ್ಮ ಸಂಕಲ್ಪವಾಗಿದೆ. ಬಾವಿಯಲ್ಲಿ ವಿಗ್ರಹ ವಿಸರ್ಜಿಸುವ ಸಾರ್ವಜನಿಕರಿಗೆ ಪಾಲಿಕೆ ಅಥವಾ ಜಿಲ್ಲಾಡಳಿತ ಶುಲ್ಕ ನಿಗದಿಗೊಳಿಸಬೇಕು ಎಂದು ಮನವಿ ಮಾಡಲಾಯಿತು.
-
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್












Click it and Unblock the Notifications