ಧಾರವಾಡ : ರೈತರ ಕೋಪಕ್ಕೆ ಬಲಿಯಾದ ಕರಡಿ
ಧಾರವಾಡ, ನವಂಬರ್ 15 : ಹೊಲದಲ್ಲಿ ಕೆಲಸ ಮಾಡುತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಕರಡಿಯನ್ನೇ ಅಟ್ಟಾಡಿಸಿ ಕೊಂದಿದ್ದಾರೆ .
ಕನಕಪುರದಲ್ಲಿ ದಾರಿಹೋಕರ ಮೇಲೆ ಕರಡಿ ದಾಳಿ
ಈ ಘಟನೆ ನಡೆದಿದ್ದು ಧಾರವಾಡ ಜಿಲ್ಲೆಯ ಗಡಿಭಾಗದ ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಹುಲಕೊಪ್ಪ ಗ್ರಾಮದಲ್ಲಿ. ಗ್ರಾಮದ ರೈತ ದ್ಯಾಮಣ್ಣ ಭೋಕಿ ಎಂಬುವವರು ಹೊಲದಲ್ಲಿ ಕೆಲಸ ಮಾಡುತಿದ್ದಾಗೆ ಕರಡಿ ಒಂದು ದಾಳಿ ಮಾಡಿದೆ.
ದಾಳಿ ಸಂದರ್ಭದಲ್ಲಿ ರೈತ ದ್ಯಾಮ0ಣ್ಣ ಭೋಕಿ ಕಿರುಚಾಡಿದ್ದಾರೆ. ದ್ವನಿ ಕೇಳಿದ ಸುತ್ತ ಮುತ್ತ ಹೊಲದಲ್ಲಿ ಕೆಲಸ ಮಾಡುತಿದ್ದ ರೈತರು ಕರಡಿ ದಾಳಿಂದ ದ್ಯಾಮ0ಣ್ಣ ಭೋಕಿ ಅವರನ್ನು ರಕ್ಷಣೆ ಮಾಡಿದ್ದಾರೆ . ಅಲ್ಲದೆ ಗದೆಯಲ್ಲಿ ಕರಡಿಯನ್ನು ಅಟ್ಟಾಡಿಸಿ ಕೊಂದಿದ್ದಾರೆ. ಇನ್ನು ಗಂಭಿರರವಾಗಿ ಗಾಯ ಗೊಂಡ ರೈತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಗೆ ಒಳಗಾಗಿದ್ದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ಕರಡಿ ಮರಿಗಳ ಸಾವಿಗೆ ಕಲುಷಿತ ನೀರು ಕಾರಣವೇ?
ಆದ್ರೆ ದಾಳೀ ಮಾಡಿದ ಕರಡಿ ಮಾತ್ರ ರೈತರ ಆಕ್ರೋಶಕ್ಕೆ ಬಲಿಯಾಗಿ ಸತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಧಿಕಾರಿಗಳು ಸಾವನ್ನಪ್ಪಿದ ಕರಡಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಕಾಡುಜೀವಿಯನ್ನು ಕೊಂದಿರುವ ಬಗ್ಗೆ ಪ್ರಕರಣ ದಾಖಲಾಗುವ ಭಯದಲ್ಲಿ ಗ್ರಾಮಸ್ಥರಿದ್ದಾರೆ.