ಪ್ರೀತಿಯಿಂದ ಸಾಕಿದ ಜೋಡೆತ್ತುಗಳನ್ನು ಸಿಂಗರಿಸಿ ಮದುವೆ ಮನೆಗೆ ಕರೆತಂದ ಯುವರೈತ
ದಾವಣಗೆರೆ, ಜೂನ್ 20: ಮದುವೆ ಅಂದರೆ ಆಡಂಬರ, ಬಂಧು ಬಳಗದವರ ಓಡಾಟ ಹೆಚ್ಚಾಗಿರುತ್ತದೆ. ಎಲ್ಲರೂ ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಮನೆಯಲ್ಲೆಲ್ಲಾ ಸಂಭ್ರಮ, ಸಂತೋಷಕ್ಕೇನೂ ಕಡಿಮೆ ಇರುವುದಿಲ್ಲ. ವಧು- ವರರಿಗೆ ಆಶೀರ್ವಾದ, ಶುಭಾಶಯ, ಮದುವೆ ಶಾಸ್ತ್ರಗಳು ನಡೆಯುತ್ತದೆ.
ದಾವಣಗೆರೆಯ ಶಾಮನೂರಿನ ಬಿಂದಪ್ಳ ಲಲಿತಮ್ಮ ಮತ್ತು ಲಿಂ. ಬಿ. ಲಿಂಗರಾಜ್ ಸುಪುತ್ರ ಬಿ. ಎಲ್. ಮಂಜುನಾಥ್ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ವಿಶಾಲ ಮತ್ತು ಕೆ. ಪಂಚಪ್ಪ ಪುತ್ರಿ ಕೆ. ಪಿ. ಪೂಜಾ ವಿವಾಹ ಮಹೋತ್ಸವದಲ್ಲಿ ಜೋಡೆತ್ತುಗಳೂ ಸಹ ವಧು - ವರನಂತೆ ಮಿಂಚಿದವು. ಇಡೀ ಮದುವೆ ಮನೆಯಲ್ಲಿಈ ಜೋಡೆತ್ತುಗಳು ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದವು.
ನಗರದ ಎಸ್.ಎಸ್. ಕನ್ವೆಕ್ಷನ್ ಹಾಲ್ ನಲ್ಲಿ ಅದ್ದೂರಿ ಮದುವೆ ಸಮಾರಂಭ ನಡೆಯಿತು. ವರ ಮಂಜುನಾಥ್ಗೆ ಜೋಡೆತ್ತುಗಳೆಂದರೆ ಪಂಚಪ್ರಾಣ. ಮಾತ್ರವಲ್ಲ, ದೇವರ ಸಮಾನವಾದ ಜೋಡೆತ್ತುಗಳ ಸಮ್ಮುಖದಲ್ಲಿ ಮದುವೆ ಆಗಬೇಕೆಂಬ ಆಸೆ ಹೊಂದಿದ್ದರು. ಇದಕ್ಕೆ ಪೂಜಾ ಸಮ್ಮತಿಸಿದ್ದಾರೆ.

ಮಂಜುನಾಥ್ ಪದವಿ ಪಡೆದರೂ ಯಾವುದೇ ಸರಕಾರಿ, ಖಾಸಗಿ ಉದ್ಯೋಗಕ್ಕೆ ಹೋಗಲು ಇಚ್ಚಿಸಲಿಲ್ಲ. ಕೃಷಿಯಿಂದ ಯುವಕರು ವಿಮುಖವಾಗ್ತಿರುವ ಈ ಸಂದರ್ಭದಲ್ಲಿ ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದಿನ ಯಂತ್ರೋಪಕರಣಗಳ ಅಬ್ಬರದಲ್ಲಿ ಗ್ರಾಮೀಣ ಭಾಗದಲ್ಲಿ ಅಳಿವಿನಂಚಿನಲ್ಲಿರುವ ಕರ್ನಾಟಕದ ಸಾಂಪ್ರದಾಯಿಕ ದೇಶಿ ಎತ್ತುಗಳ ಸಂರಕ್ಷಣೆ, ಕೃಷಿಯಲ್ಲಿ ಬಳಕೆ, ಅವುಗಳ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾಡಬೇಕೆಂಬ ಹಂಬಲ ಇದ್ದು, ವಿವಿಧ ದೇಶಿ ಎತ್ತುಗಳು, ಆಕಳುಗಳ ಸಾಕುತ್ತಾ ಬದುಕು ನಡೆಸಬೇಕೆಂಬ ಆಸೆಯನ್ನು ಮಂಜುನಾಥ್ ಹೊಂದಿದ್ದಾರೆ.
ಈ ಜೋಡಿ ಪಂಚ ಪ್ರಾಣವಾಗಿದ್ದ ಜೋಡೆತ್ತುಗಳನ್ನು ಕರೆತಂದು ಮೊದಲು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಮದುವೆ ಮಂಟಪ ಪ್ರವೇಶಿಸಿ ಮದುವೆಯ ಕಾರ್ಯಾರಂಭಕ್ಕೆ ಹೆಜ್ಜೆ ಹಾಕಿದರು. ಗೃಹ ಪ್ರವೇಶ ಹಾಗೂ ಕೆಲ ಶುಭ ಸಮಾರಂಭಗಳಿಗೆ ಶುಭವಾಗಲೆಂದು ಆಕಳು, ಎತ್ತುಗಳ ತಂದು ಪೂಜಿಸುವುದು ಸಾಮಾನ್ಯ. ಆದರೆ ದಾವಣಗೆರೆಯ ಶಾಮನೂರಿನ ಯುವ ಕೃಷಿಕರ ಪುತ್ರನಾದ ಮಂಜುನಾಥ್, ತಮ್ಮ ವಿವಾಹದ ವೇಳೆ ಬದುಕಿನ ಭಾಗವಾಗಿರುವ ಜೋಡೆತ್ತುಗಳಿಗೂ ಗೌರವ ನೀಡಿದ್ದು ವಿಶೇಷ. ಇವು ಮದುವೆ ಸಂಭ್ರಮದ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದವು.

ಅರಸೀಕೆರೆ ಜಾತ್ರೆಯಲ್ಲಿ ಖರೀದಿಸಿದ್ದ ಜೋಡೆತ್ತುಗಳಿಗೂ ವಿಶೇಷ ಅಲಂಕಾರ ಮಾಡಿ ಕಂಗೊಳಿಸುವಂತೆ ಮಾಡಿದ್ದಲ್ಲದೇ, ಅವುಗಳಿಗಾಗಿ ಮದುವೆ ಮಂಟಪ ಆವರಣದಲ್ಲಿ ಸುರಕ್ಷಿತವಾಗಿ ವಿಶೇಷ ಅಲಂಕೃತ ವೇದಿಕೆ ಸಿದ್ಧಪಡಿಸಲಾಗಿತ್ತು.
ಮಂಜುನಾಥ್ ಅವರ ತಂದೆ ಸಹ ಕೃಷಿಕರಾಗಿದ್ದು, ತಂದೆಯಂತೆ ಮಂಜುನಾಥ್ ಕೃಷಿಯನ್ನೇ ಬದುಕಾಗಿಸಿಕೊಂಡಿದ್ದಾರೆ. ತಮ್ಮ 23ನೇ ವಯಸ್ಸಿನ ಕಾಲೇಜು ಹಂತದಿಂದಲ್ಲೇ ಕೃಷಿಗಿಳಿದಿದ್ದು, ಮೂರುವರೆ ಎಕರೆ ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಕಾಯಕ ಮಾಡುತ್ತಿದ್ದಾರೆ. ಪ್ರತಿ ವರ್ಷ ಶಾಮನೂರಿನ ಬೆಲ್ಲದ ಜಾತ್ರೆಯ ಎತ್ತುಗಳ ಸ್ಪರ್ಧೆಯಲ್ಲಿ ಈ ಜೋಡೆತ್ತುಗಳು ಭಾಗವಹಿಸಿ ಕಳೆದ 5 ವರ್ಷಗಳಿಂದಲ್ಲೂ ಬಹುಮಾನ ಗೆದ್ದಿರುವುದು ಮತ್ತೊಂದು ಸ್ಪೆಷಾಲಿಟಿ.
Recommended Video
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications