ದಾವಣಗೆರೆಯ ಹೊಸ ಲೇಔಟ್ ಡ್ರೈನೇಜ್ ನಲ್ಲಿ ಸಿಕ್ತು ಅಸ್ಥಿಪಂಜರ
ದಾವಣಗೆರೆ, ಜನವರಿ 14: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಶಿವಮೊಗ್ಗ ರಸ್ತೆಯಲ್ಲಿರುವ ಹರಿಹರೇಶ್ವರ ಲೇಔಟ್ ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಲೇಔಟ್ ನ ಒಳ ಚರಂಡಿ ಚೇಂಬರ್ ನಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ.
ಛೇಂಬರ್ ಸ್ವಚ್ಛಗೊಳಿಸಲು ಬಂದಿದ್ದ ಕಾರ್ಮಿಕರು ಛೇಂಬರ್ ತೆಗೆಯುತ್ತಿದ್ದಂತೆ ಅಸ್ಥಿಪಂಜರ ನೋಡಿ ಭಯಗೊಂಡಿದ್ದಾರೆ. ನಂತರ ಹರಿಹರ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Recommended Video
ಮುಳ್ಳಿನ ಮೇಲೆ ಬಿದ್ದು ಆಚರಿಸುವ ಮುಳ್ಳಿನ ಜಾತ್ರೆ | CHITRADURGA | FESTIVAL | ONEINDIA KANNADA

ಸ್ಥಳಕ್ಕೆ ಹರಿಹರ ನಗರ ಠಾಣೆ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಅಸ್ಥಿಪಂಜರವನ್ನು ಹೊರ ತೆಗೆದು ಪರಿಶೀಲನೆ ನಡೆಸಿದರು. ಯಾರೋ ಕೊಲೆ ಮಾಡಿ ಶವವನ್ನು ಇದರೊಳಗೆ ಬಿಸಾಡಿದ್ದಾರೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅಸ್ಥಿಪಂಜರ 25 ರಿಂದ 30 ವಯೋಮಾನದ ಯುವಕನದ್ದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications