ಉತ್ತರ ಕರ್ನಾಟಕ ಕೂಗಿಗೆ ಸ್ಪಂದಿಸದಿದ್ದರೆ ಅಪಾಯ: ಸ್ವಾಮೀಜಿ
ದಾವಣಗೆರೆ, ಜು.27: ಸರ್ಕಾರದಿಂದ ಸೌಲಭ್ಯ ಸಿಗದಿದ್ದಾಗ ಪ್ರತ್ಯೇಕತೆಯ ಕೂಗು ಸಾಮಾನ್ಯ ಇದು ಹೆಚ್ಚಾಗುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃಂತ್ಯಂಜಯ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಬಜೆಟ್ನಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ ಕಾರಣ ಉತ್ತರ ಕರ್ನಾಟಕ ಜನರು ಪ್ರತ್ಯೇಕ ರಾಜ್ಯವನ್ನು ಮಾಡಬೇಕು ಎನ್ನುವ ಹೋರಾಟ ಆರಂಭಿಸಿದ್ದಾರೆ. ಆ.2ರಂದು ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಸರ್ಕಾರವು ಅಲ್ಲಿಯ ಜನರ ಬೇಡಿಕೆಗಳನ್ನು ಈಡೇರಿಸಿದ್ದರೆ ಜನರು ಹೋರಾಟವನ್ನು ಮುಂದುವರೆಸುತ್ತಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಕುರಿತು ಜು.31ರಂದು ಉತ್ತರ ಕರ್ನಾಟಕ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳ ಸಭೆ ನಡೆಯಲಿದೆ, ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದರೆ ಪ್ರತ್ಯೇಕತೆ ಕೂಗು ಶಮನ ಇಲ್ಲವಾದರೆ ಬೆಳಗಾವಿ 2 ನೇ ರಾಜಧಾನಿಯಾಗಲು ಪ್ರತ್ಯೇಕ ರಾಜ್ಯಕ್ಕೆ ಎಲ್ಲಾ ಮಠಾಧೀಶರ ಬೆಂಬಲವಿದೆ ಎಂದು ಹೇಳಿದರು.

20 ಮುಖ್ಯ ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ವಿಕೇಂದ್ರೀಕೃತವಾಗಲಿ. ಸುವರ್ಣಸೌಧದಲ್ಲಿ 2 ತಿಂಗಳಿಗೊಮ್ಮೆ ಸದನ ನಡೆಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications