ಬೆಣ್ಣೆನಗರಿ ದಾವಣಗೆರೆಯಲ್ಲಿ ಮಾರ್ಚ್ 14ಕ್ಕೆ ಹೋಳಿಹಬ್ಬ ಫಿಕ್ಸ್
ದಾವಣಗೆರೆ, ಮಾರ್ಚ್, 10: ಮುಂಬೈ ಬಿಟ್ಟರೆ, ಬೆಣ್ಣೆನಗರಿ ದಾವಣಗೆರೆಯಲ್ಲೇ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇನ್ನೂ ಈ ಬಾರಿ ಆಚರಣೆ ಮಾಡಲ್ಲ ಎನ್ನುವ ವದಂತಿಗಳು ಹರಡಿದ್ದವು. ಅದರೆ, ನಿಗದಿತ ದಿನಾಂಕದಂತೆ ಮಾರ್ಚ್ 14ರಂದೇ ರಾಂ ಅಂಡ್ ಕೋ ಸರ್ಕಲ್ನ ಗೆಳೆಯರ ಬಳಗದಿಂದ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಂ ಅಂಡ್ ಕೋ ಸರ್ಕಲ್ ನ ಗೆಳೆಯರ ಬಳಗದಿಂದ ಮಾರ್ಚ್ 14ರಂದು ಹೋಳಿ ಹಬ್ಬ ಆಚರಣೆ ನಡೆಸಲಾಗುವುದು. ಈ ವರ್ಷ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಣೆ ಮಾಡಲಾಗುತ್ತಿಲ್ಲ ಎಂದು ಕೆಲವರು ಗಾಳಿ ಸುದ್ದಿ ಹರಡಿದ್ದರು. ಈ ರೀತಿಯ ಗಾಳಿ ಸುದ್ದಿಗೆ ಯಾರೂ ಕಿವಿಗೊಡಬೇಡಿ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಾಂ ಅಂಡ್ ಕೋ ಸರ್ಕಲ್ನಲ್ಲಿಯೇ ಹೋಳಿ ಹಬ್ಬನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ನಾಗೇಂದ್ರರೆಡ್ಡಿ ಅವರು ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 27 ವರ್ಷಗಳಿಂದ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಅಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕೂಡ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಶಾಸಕ ಶಾಮನೂರು ಶಿವಶಂಕರಪ್ಪ ಹೋಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 13ರಂದು ಸಂಜೆ 7ಕ್ಕೆ ಕಾಮದಹನ ಮಾಡಲಾಗುವುದು. ಮಾರ್ಚ್ 14ರ ಶುಕ್ರವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಹೋಳಿ ಆಚರಣೆ ಮಾಡಲಾಗುತ್ತದೆ. 2,000ಕ್ಕೂ ಅಧಿಕ ಹೆಚ್ವು ಯುವಕ-ಯುವತಿಯರು ಇದರಲ್ಲಿ ಭಾಗಿ ಆಗಲಿದ್ದು, ಯುವತಿಯರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಪ್ರತ್ಯೇಕ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ.
ಇನ್ನು ಈ ಬಾರಿ ಬೆಳಗಾವಿಯಿಂದ ಡಿಜೆ ತರಿಸಲಾಗುವುದು. ಕಾಮದಹನ ಮಾಡುವ ವೇಳೆ ಕಾಮದಹನದ ಹಿಂದಿರುವ ಪುರಾಣ ಕತೆಯನ್ನು ಡಿವಿಡಿ ಮೂಲಕ ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು. ಇನ್ನು ಈ ದಿನ ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ.
ಮಾರ್ಚ್-ಏಪ್ರಿಲ್ ರಜೆಗಳು: ಪುಣೆಯಲ್ಲಿ ಮಾರ್ಚ್ನಲ್ಲಿ ಹಲವು ಸಾರ್ವಜನಿಕ ರಜಾದಿನಗಳು ಬರಲಿವೆ. ಮಾರ್ಚ್ 13ರಂದು ಹೋಳಿ ಹಬ್ಬ, ಮಾರ್ಚ್ 14ರಂದು ಧುಲಿ ವಂದನಾ ಇರಲಿದ್ದು, ಈ ದಿನಗಳಂದು ಈ ಭಾಗದ ಶಾಲೆಗಳಿಗೆ ರಜೆ ಇರಲಿದೆ. ಮರಾಠಿ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 17ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ, ಮಾರ್ಚ್ 30 ಗುಡಿ ಪಾಡ್ವಾ ಮತ್ತು ಮಾರ್ಚ್ 31 ರಂಜಾನ್ ಹಿನ್ನೆಲೆ ಶಲಾಗಳಿಗೆ ರಜೆ ಇರಲಿದೆ. ಇನ್ನು ಇಲ್ಲಿ ಹಲವು ಶಾಲೆಗಳಿಗೆ ಶನಿವಾರ ಕೂಡ ರಜೆಗಳು ಇರಲಿವೆ ಎನ್ನುವ ಮಾಹಿತಿ ಇದೆ.
ಮತ್ತೊಂದೆಡೆ ಏಪ್ರಿಲ್ 6ರಂದು ರಾಮನವಮಿ, ಏಪ್ರಿಲ್ 10ರಂದು ಮಹಾವೀರ ಜಯಂತಿ ಮತ್ತು ಏಪ್ರಿಲ್ 18ರಂದು ಗುಡ್ ಫ್ರೈಡೇ ಸೇರಿ ಸರಣಿ ರಜೆಗಳು ಇರಲಿವೆ. ಇದನ್ನು ಹೊರತು ಪಡಿಸಿದರೆ ಭಾನುವಾರದಂದು ಶಾಲೆಗಳಿಗೆ ರಜೆ ಇರಲಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications