Breaking: ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಸೆ.14ಕ್ಕೆ ಮುಂದೂಡಿಕೆ
ಚಿತ್ರದುರ್ಗ, ಸೆಪ್ಟೆಂಬರ್ 13: ಮಠದ ವಸತಿನಿಲಯದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಲಾಗಿದೆ.
ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಶಿವಮೂರ್ತಿ ಶರಣರು ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆಪ್ಟೆಂಬರ್ 14(ನಾಳೆ)ಕ್ಕೆ ನ್ಯಾಯಾಂಗ ಬಂಧನ ಮುಕ್ತಾಯವಾಗಲಿದೆ. ಬುಧವಾರ ಜಾಮೀನು ಸಿಗಲಿದೆಯೇ ಅಥವಾ ಬಂಧನದಲ್ಲೇ ಇರಬೇಕಾಗಬಹುದಾ ಎನ್ನುವುದು ತಿಳಿಯಲಿದೆ.
Murugha Shree : ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
ಮುರುಘಾ ಶ್ರೀ ಜಾಮೀನಿಗೆ ಬುಧವಾರ ಸಂತ್ರಸ್ತೆಯರ ಪರ ವಕೀಲರು ಆಕ್ಷೇಪಣೆ ಸಲ್ಲಿಸಲ್ಲಿಸುವ ಸಾಧ್ಯತೆ ಇದೆ. ಪೋಕ್ಸೋ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಪರಮಶಿವಯ್ಯ ಮತ್ತು ಬಸವಾದಿತ್ಯ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯೂ ಕೂಡ ಬುಧವಾರಕ್ಕೆ ಮುಂದೂಡಲಾಗಿದೆ.
ಜಯದೇವಾ
ಆಸ್ಪತ್ರೆಗೆ
ದಾಖಲಾಗಲು
ಮನವಿ
ಹೃದಯ
ಸಂಬಂಧಿ
ಖಾಯಿಲೆ
ಇರುವುದರಿಂದ
ಹೆಚ್ಚಿನ
ಚಿಕಿತ್ಸೆಗಾಗಿ
ಬೆಂಗಳೂರಿನ
ಜಯದೇವ
ಆಸ್ಪತ್ರೆಗೆ
ಶಿಫ್ಟ್
ಮಾಡಲು
ಮುರುಘಾಶ್ರೀ
ಪರ
ವಕೀಲರು
ಕೋರ್ಟ್ಗೆ
ಮನವಿ
ಮಾಡುವ
ಸಾಧ್ಯತೆಯಿದೆ.
ಈಗಾಗಲೇ
ಸಮೀಪದ
ಸರಕಾರಿ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯಲು
ಕೋರ್ಟ್
ಸೂಚಿಸಿತ್ತು.
ಇದೀಗ
ಎಂಜೋಗ್ರಾಮ್
ಚಿಕಿತ್ಸೆಗಾಗಿ
ಬೆಂಗಳೂರಿನ
ಜಯದೇವ
ಆಸ್ಪತ್ರೆಗೆ
ಶಿಫ್ಟ್ಗೆ
ಮಾಡುವಂತೆ
ಮನವಿ
ಮಾಡಲಾಗಿದ್ದು,
ಆಸ್ಪತ್ರೆಗೆ
ಶಿಫ್ಟ್
ಬಗ್ಗೆಯೂ
ಬುಧವಾರ
ಕೋರ್ಟ್ನಲ್ಲಿ
ವಿಚಾರಣೆ
ನಡೆಯಲಿದೆ.
ಮುರುಘಾಶ್ರೀ
ಆರೋಗ್ಯ
ವರದಿಗಳ
ಆಧಾರದ
ಮೇಲೆ
ಕೋರ್ಟ್
ಸೂಚನೆ
ನೀಡುವ
ಸಾಧ್ಯತೆಯಿದೆ.
ಸೆಪ್ಟೆಂಬರ್ 7ರಂದು ಸ್ವಾಮೀಜಿಗೆ ಹೃದಯ ಸಂಬಂಧಿ ಸಮಸ್ಸೆ ಬಗ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ಸೇರಿಸಲು ಮನವಿ ಮಾಡಲಾಗಿತ್ತು. ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು
ಪೋಕ್ಸೋ ಪ್ರಕರಣದ ನ್ಯಾಯಾಂಗ ಬಂಧನದಲ್ಲಿರುವ 2ನೇ ಆರೋಪಿ ಹಾಸ್ಟಲ್ ವಾರ್ಡನ್ ರಶ್ಮಿ ಜಾಮೀನು ಅರ್ಜಿ ವಿಚಾರಣೆ ಕೂಡ ಸೆಪ್ಟೆಂಬರ್ 14ರಂದು ನಡೆಯಲಿದೆ.