ಬರಗಾಲ, ದರ ಏರಿಕೆ: ಚಿತ್ರದುರ್ಗದ ಮಾರುಕಟ್ಟೆಯಲ್ಲಿ ಹೇಗಿದೆ ದಸರಾ ಹಬ್ಬದ ವ್ಯಾಪಾರ..?
ಚಿತ್ರದುರ್ಗ, ಅಕ್ಟೋಬರ್ 23: ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆಯಾಗಿ ಬರಗಾಲ ಆವರಿಸಿದರೆ ಮತ್ತೊಂದು ಕಡೆ ನಾಡಿನಾದ್ಯಂತ ಸಡಗರ ಸಂಭ್ರಮಾಚರಣೆಯ ಆಯುಧ ಪೂಜೆ, ವಿಜಯದಶಮಿ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಪೂಜಾ ಸಾಮಗ್ರಿಗಳ ಖರೀದಿ ಬಲು ಜೋರಾಗಿಯೇ ಇದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಇಂದು ಸೋಮವಾರ ಆಯುಧ ಪೂಜೆ ಆಚರಿಸಲಾಗುತ್ತಿದೆ. ಭಾನುವಾರದಿಂದಲೇ ಹಲವೆಡೆ ಪೂಜೆ ಕಾರ್ಯಗಳು ನಡೆಯುತ್ತಿವೆ. ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ಮೊಳಕಾಲ್ಮೂರು ಭಾಗದಲ್ಲಿ ಖರೀದಿ ಜೋರಾಗಿದೆ.

ಇಂದು ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಹಿನ್ನೆಲೆ ಹೂ, ಹಣ್ಣು, ಕುಂಬಳಕಾಯಿ, ಬಾಳೆಕಂದು ಬೆಲೆಗಳು ಗಗನಕ್ಕೆ ತಲುಪಿವೆ. ಆದರೂ ಗ್ರಾಹಕರು ಮಾತ್ರ ಖರೀದಿಯಲ್ಲಿ ತೊಡಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ವಸ್ತುಗಳ ದರ ಹೆಚ್ಚಳವಾಗಿದೆ.
ತೆಂಗಿನ ಕಾಯಿ 20 ರಿಂದ 25/30 ರೂಪಾಯಿ ಆಗಿದೆ. ಪುಟ್ ಬಾಳೆ ಕೆಜಿಗೆ 80 ರಿಂದ 120 ರೂಪಾಯಿ, ಸೇವಂತಿ ಹೂ ಒಂದು ಮಾರಿಗೆ 80 ರಿಂದ 120 ರೂಪಾಯಿ, ಕನಕಾಂಬರ ಹೂವು 100 ರಿಂದ 120/130 ರೂಪಾಯಿ, ಗುಲಾಬಿ ಒಂದಕ್ಕೆ 20 -30 ರೂಪಾಯಿ, ಚೆಂಡು ಹೂವು 50 ರಿಂದ 80 ರೂಪಾಯಿ, ಸೇಬು ಕೆಜಿಗೆ 150 ರಿಂದ 200 ರೂಪಾಯಿ, ಕಿತ್ತಳೆ ಕೆಜಿಗೆ 50 ರಿಂದ 80 ರೂಪಾಯಿ , ಬಾಳೆ ಕಂದು ಜೋಡಿ 20 ರಿಂದ 50 ರೂಪಾಯಿ ಈಗೆ ವಿವಿಧ ದರಗಳು ಗಗನಕ್ಕೇರುತ್ತಿವೆ. ಇದಲ್ಲದೆ ತರಕಾರಿ ಬೆಳೆಗಳು ಸಹ ಏರಿಕೆಯಾಗಿವೆ.

ಬೆಂಗಳೂರಿನಲ್ಲಿ ಹೂ-ಹಣ್ಣುಗಳ ದರಗಳ ವಿವರ
ಗಗನಕ್ಕೇರಿದ ಹೂಗಳ ದರ(ಕೆಜಿಗೆ)
ಮಲ್ಲಿಗೆ- 1000 ರಿಂದ 1200 ರೂ.
ಸೇವಂತಿಗೆ- 300 ರಿಂದ 500 ರೂ.
ಗುಲಾಬಿ-200 ರಿಂದ 309 ರೂ.
ಕನಕಾಂಬರ-1100 ದಿಂದ 1300 ರೂ.
ಮಳ್ಳೆ ಹೂವು-800 ರಿಂದ 1000 ರೂ.
ಹಣ್ಣುಗಳ ದರವೂ ದುಬಾರಿ
ಏಲಕ್ಕಿ ಬಾಳೆ -120 ರಿಂದ 140 ರೂ.
ಅನಾನಸ್ -40 ರಿಂದ 70 ರೂ.
ದಾಳಿಂಬೆ - 100 ರಿಂದ 150 ರೂ.
ಸೇಬು -180 ರಿಂದ 350 ರೂ.
ಇನ್ನು ಬೂದುಕುಂಬಳಕಾಯಿ ಕೆಜಿಗೆ 20 ರಿಂದ 30 ರೂ ಇದ್ದು, ಬಾಳೆ ಕಂಬ ಜೋಡಿಗೆ 100 ರಿಂದ 150 ರೂ. ಇದೆ
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications