ಬರಗಾಲ, ದರ ಏರಿಕೆ: ಚಿತ್ರದುರ್ಗದ ಮಾರುಕಟ್ಟೆಯಲ್ಲಿ ಹೇಗಿದೆ ದಸರಾ ಹಬ್ಬದ ವ್ಯಾಪಾರ..?
ಚಿತ್ರದುರ್ಗ, ಅಕ್ಟೋಬರ್ 23: ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆಯಾಗಿ ಬರಗಾಲ ಆವರಿಸಿದರೆ ಮತ್ತೊಂದು ಕಡೆ ನಾಡಿನಾದ್ಯಂತ ಸಡಗರ ಸಂಭ್ರಮಾಚರಣೆಯ ಆಯುಧ ಪೂಜೆ, ವಿಜಯದಶಮಿ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಪೂಜಾ ಸಾಮಗ್ರಿಗಳ ಖರೀದಿ ಬಲು ಜೋರಾಗಿಯೇ ಇದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಇಂದು ಸೋಮವಾರ ಆಯುಧ ಪೂಜೆ ಆಚರಿಸಲಾಗುತ್ತಿದೆ. ಭಾನುವಾರದಿಂದಲೇ ಹಲವೆಡೆ ಪೂಜೆ ಕಾರ್ಯಗಳು ನಡೆಯುತ್ತಿವೆ. ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ಮೊಳಕಾಲ್ಮೂರು ಭಾಗದಲ್ಲಿ ಖರೀದಿ ಜೋರಾಗಿದೆ.

ಇಂದು ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಹಿನ್ನೆಲೆ ಹೂ, ಹಣ್ಣು, ಕುಂಬಳಕಾಯಿ, ಬಾಳೆಕಂದು ಬೆಲೆಗಳು ಗಗನಕ್ಕೆ ತಲುಪಿವೆ. ಆದರೂ ಗ್ರಾಹಕರು ಮಾತ್ರ ಖರೀದಿಯಲ್ಲಿ ತೊಡಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ವಸ್ತುಗಳ ದರ ಹೆಚ್ಚಳವಾಗಿದೆ.
ತೆಂಗಿನ ಕಾಯಿ 20 ರಿಂದ 25/30 ರೂಪಾಯಿ ಆಗಿದೆ. ಪುಟ್ ಬಾಳೆ ಕೆಜಿಗೆ 80 ರಿಂದ 120 ರೂಪಾಯಿ, ಸೇವಂತಿ ಹೂ ಒಂದು ಮಾರಿಗೆ 80 ರಿಂದ 120 ರೂಪಾಯಿ, ಕನಕಾಂಬರ ಹೂವು 100 ರಿಂದ 120/130 ರೂಪಾಯಿ, ಗುಲಾಬಿ ಒಂದಕ್ಕೆ 20 -30 ರೂಪಾಯಿ, ಚೆಂಡು ಹೂವು 50 ರಿಂದ 80 ರೂಪಾಯಿ, ಸೇಬು ಕೆಜಿಗೆ 150 ರಿಂದ 200 ರೂಪಾಯಿ, ಕಿತ್ತಳೆ ಕೆಜಿಗೆ 50 ರಿಂದ 80 ರೂಪಾಯಿ , ಬಾಳೆ ಕಂದು ಜೋಡಿ 20 ರಿಂದ 50 ರೂಪಾಯಿ ಈಗೆ ವಿವಿಧ ದರಗಳು ಗಗನಕ್ಕೇರುತ್ತಿವೆ. ಇದಲ್ಲದೆ ತರಕಾರಿ ಬೆಳೆಗಳು ಸಹ ಏರಿಕೆಯಾಗಿವೆ.

ಬೆಂಗಳೂರಿನಲ್ಲಿ ಹೂ-ಹಣ್ಣುಗಳ ದರಗಳ ವಿವರ
ಗಗನಕ್ಕೇರಿದ ಹೂಗಳ ದರ(ಕೆಜಿಗೆ)
ಮಲ್ಲಿಗೆ- 1000 ರಿಂದ 1200 ರೂ.
ಸೇವಂತಿಗೆ- 300 ರಿಂದ 500 ರೂ.
ಗುಲಾಬಿ-200 ರಿಂದ 309 ರೂ.
ಕನಕಾಂಬರ-1100 ದಿಂದ 1300 ರೂ.
ಮಳ್ಳೆ ಹೂವು-800 ರಿಂದ 1000 ರೂ.
ಹಣ್ಣುಗಳ ದರವೂ ದುಬಾರಿ
ಏಲಕ್ಕಿ ಬಾಳೆ -120 ರಿಂದ 140 ರೂ.
ಅನಾನಸ್ -40 ರಿಂದ 70 ರೂ.
ದಾಳಿಂಬೆ - 100 ರಿಂದ 150 ರೂ.
ಸೇಬು -180 ರಿಂದ 350 ರೂ.
ಇನ್ನು ಬೂದುಕುಂಬಳಕಾಯಿ ಕೆಜಿಗೆ 20 ರಿಂದ 30 ರೂ ಇದ್ದು, ಬಾಳೆ ಕಂಬ ಜೋಡಿಗೆ 100 ರಿಂದ 150 ರೂ. ಇದೆ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications