ಚಿತ್ರದುರ್ಗ: ಹೆಗ್ಗೆರೆ ಕೆರೆಗೆ ಈಜಲು ತೆರಳಿದ್ದ 3 ಮಕ್ಕಳು ನೀರುಪಾಲು
ಚಿತ್ರದುರ್ಗ, ಅಕ್ಟೋಬರ್ 21: ಈಜಲೆಂದು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಅಸುನೀಗಿದ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ.
ದುರ್ಗದ ಹೊಂಡ, ಕೆರೆ ಭರ್ತಿ, ಪ್ರವಾಸಿಗರೇ ಬನ್ನಿ ಒಂದ್ಸರ್ತಿ!
ಹೊಸದುರ್ಗದ ಹೆಗ್ಗೆರೆ ಕೆರೆಗೆ ನಿನ್ನೆ(ಅ.20) ಈಜಲೆಂದು ತೆರಳಿದ್ದ ಮೂವರು ಮಕ್ಕಳ ಶವ ಇಂದು ಪತ್ತೆಯಾಗಿದ್ದು ಕುಟುಂಬ ವರ್ಗದ ರೋದನ ಮುಗಿಲುಮುಟ್ಟಿದೆ.
ಮೃತ ಬಾಲಕರನ್ನು ಕೆಂಪರಾಜ್, ಕಾಂತರಾಜ್, ಮಹಾಂತೇಶ್ ಎಂದು ಗುರುತಿಸಲಾಗಿದೆ. ಮೂವರೂ 14 ವರ್ಷ ವಯಸ್ಸಿನ ಮಕ್ಕಳಾಗಿದ್ದರು.
Comments
English summary
3 children died after drown into water in Heggere lake in Chitradurga. The dead bodies are found today.
Story first published: Saturday, October 21, 2017, 8:50 [IST]