ಜ್ಯೋತಿಷಿ ಮಾತು ಕೇಳಿ ಕೂಸನ್ನು ಕೊಂದ ಕಟುಕ ತಂದೆ
ಚಿಕ್ಕಮಗಳೂರು, ಜೂನ್ 19: ಜ್ಯೋತಿಷಿ ಮಾತನ್ನು ಕೇಳಿ ಒಂದೂವರೆ ತಿಂಗಳಿನ ಹೆಣ್ಣು ಮಗುವನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಬೂಚೇನಹಳ್ಳಿ ಕಾವಲ್ ನಲ್ಲಿ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
ಕೊಲೆ ಮಾಡಿರುವ ಮಂಜುನಾಥ್ ( 27) ನನ್ನು ಬಂಧಿಸಲಾಗಿದೆ. ಹೆಣ್ಣು ಮಗು ಹುಟ್ಟಿದರೆ ಭವಿಷ್ಯಕ್ಕೆ ಕಂಟಕ ಎಂದು ಮಂಜುನಾಥ್ ಗೆ ಜ್ಯೋತಿಷಿಯೊಬ್ಬರು ಹೇಳಿದ್ದು, ಆ ಮಾತನ್ನು ನಂಬಿ ಹೆತ್ತ ಕಂದನನ್ನೇ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಹೆಂಡತಿ ಇರದ ವೇಳೆಯನ್ನು ನೋಡಿಕೊಂಡು ಮಗುವನ್ನು ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿದರು.
Comments
English summary
By listening to the words of astroleger, man murdered his one and a half month girl baby. Incident happened at chikkamagaluru boochenahalli kaval.
Story first published: Wednesday, June 19, 2019, 12:28 [IST]