ಚಿಕ್ಕಮಗಳೂರಲ್ಲಿ ಪೊಲೀಸರಿಗೆ ಚಿಕಿತ್ಸೆ ನೀಡದ ವೈದ್ಯರು
ಚಿಕ್ಕಮಗಳೂರು, ಮಾರ್ಚ್ 20: ಪೊಲೀಸರನ್ನು ಚರಂಡಿಗೆ ತಳ್ಳಿ ಎಸ್ಕೇಪ್ ಆಗಿದ್ದು, ಚರಂಡಿಗೆ ಬಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಬಳಿ ನಡೆದಿದೆ.
ಹಾಸನ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ.
ಚಿಕಿತ್ಸೆ ನೀಡುವಂತೆ ವೈದ್ಯರ ಬಳಿ ಅಂಗಲಾಚಿದರೂ ಸಬ್ ಇನ್ಸ್ ಪೆಕ್ಟರ್ ಗೆ ಚಿಕಿತ್ಸೆ ನೀಡಲಿಲ್ಲ.

ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಬಳಿ ಘಟನೆ ಈ ಘಟನೆ ನಡೆದಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಲ್ಲದೇ ಪೊಲೀಸರ ಮೇಲೆ ಕಳ್ಳ ಹಲ್ಲೆ ಮಾಡಿದ್ದನು.
ಗಾಯಗೊಂಡ ಪೊಲೀಸ್ ವೈದ್ಯರ ಬಳಿ ಪರಿಪರಿಯಾಗಿ ಕೇಳಿಕೊಂಡರು. ರಕ್ತ ಸುರಿಯುತ್ತಿದ್ದನ್ನು ನೋಡಿಯೂ ವೈದ್ಯರು ಸುಮ್ಮನಾಗಿದ್ದಾರೆ.

ಕಳ್ಳನನ್ನು ಹಿಡಿಯಲು ಹಾಸನದಿಂದ ಚಿಕ್ಕಮಗಳೂರಿಗೆ ಪೊಲೀಸರು ಬಂದಿದ್ದರು. ಚಿಕಿತ್ಸೆ ನೀಡದಿದ್ದರಿಂದ ವೈದ್ಯರ ಮೇಲೆ ಬೇಸರ ಮಾಡಿಕೊಂಡು ಪೊಲೀಸರು ವಾಪಾಸ್ಸಾಗಿದ್ದಾರೆ.












Click it and Unblock the Notifications