ಚಿಕ್ಕಮಗಳೂರು; ರಸ್ತೆಯಿಲ್ಲದೆ ನರಕಯಾತನೆ; ವೃದ್ಧೆಯನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಣೆ
ಚಿಕ್ಕಮಗಳೂರು, ಸೆಪ್ಟೆಂಬರ್ 19 : 85 ವರ್ಷದ ವೃದ್ಧೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ದಾರಿ ಇಲ್ಲದೆ ಜೋಳಿಗೆಯಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಕೊಂಡೊಯ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ನಡೆದಿದೆ.
ಗಂಟೆಮಕ್ಕಿ ಗ್ರಾಮದ ವೃದ್ಧೆ ವೆಂಕಟಮ್ಮನವರಿಗೆ ಕಳೆದೊಂದು ವಾರದಿಂದಲೂ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ಯಲು ದಾರಿ ಇಲ್ಲದೆ ಕುಟುಂಬಸ್ಥರು ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟಾಗ ಸ್ಥಳೀಯರು ಹಾಗೂ ಸಂಬಂಧಿಕರು ಡೋಲಿ ಕಟ್ಟಿಕೊಂಡು ಅವರನ್ನು ಒಂದು ಕಿಲೋಮೀಟರ್ನಷ್ಟು ದೂರ ಹೊತ್ತಿಕೊಂಡೇ ಬಂದಿದ್ದು, ನಂತರ ಜೀಪಿನ ಸಹಾಯದಿಂದ ಕಳಸದ ಆಸ್ಪತ್ರೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಳೆ ನೀರಲ್ಲಿ ಕೊಚ್ಚಿಹೋದ ನೂರಾರು ಮಡಿಕೆಗಳು; ಗದಗದಲ್ಲಿ ವೃದ್ಧೆ ಕಣ್ಣೀರು
ಗಂಟೆಮಕ್ಕಿ ಗ್ರಾಮದ ವೃದ್ಧೆ ವೆಂಕಮ್ಮ ಕಳೆದ 65-70 ವರ್ಷಗಳಿಂದಲೂ ಗಂಟೆಮಕ್ಕಿ ಗ್ರಾಮದಲ್ಲೇ ವಾಸವಿದ್ದಾರೆ. ಇಲ್ಲಿ ಸುಮಾರು 8-10 ಮನೆಗಳಿದ್ದು, ಯಾರಿಗೂ ಓಡಾಡಲು ಜಾಗವಿಲ್ಲ. ಜಮೀನಿಗೆ ಹೋಗಲು ದಾರಿ ಇಲ್ಲ. ಹೊಲ-ಗದ್ದೆಗಳಿಗೆ ಗೊಬ್ಬರ, ಮನೆಗೆ ರೇಷನ್ ಎಲ್ಲವನ್ನು ತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಸ್ಥಳೀಯರು ಹತ್ತಾರು ವರ್ಷಗಳಿಂದ ರಸ್ತೆ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ನೂರಾರು ಮನವಿ ನೀಡಿದ್ದಾರೆ. ಆದರೆ ಈವರೆಗೂ ಯಾರೊಬ್ಬರೂ ಕೂಡ ಇವರ ನೋವಿಗೆ ಸ್ಪಂದಿಸಿಲ್ಲ.
ರಸ್ತೆ
ಸಂಪರ್ಕ
ಇಲ್ಲದೆ
ನಿತ್ಯ
ಗೋಳು
:
ಗ್ರಾಮ
ಪಂಚಾಯಿತಿ
ಅಧಿಕಾರಿಗಳು,
ತಹಸಿಲ್ದಾರ್,
ಎಸಿ
ಹಾಗೂ
ಡಿಸಿಗೂ
ಮನವಿ
ಸಲ್ಲಿಸಿದ್ದಾರೆ.
ಆದರೆ,
ಯಾವುದೇ
ಪ್ರಯೋಜನವಾಗಿಲ್ಲ.
2021
ರಲ್ಲಿ
ಖುದ್ದು
ವೆಂಕಮ್ಮನವರೇ
ಕಂದಾಯ
ಸಚಿವ
ಆರ್.ಅಶೋಕ್ಗೆ
ಮನವಿ
ಮಾಡಿದ್ದರು.
ಚುನಾವಣೆ
ಸಂದರ್ಭದಲ್ಲಿ
ಎಲ್ಲಾ
ರಾಜಕೀಯ
ಪಕ್ಷದ
ಮುಖಂಡರು
ಭೇಟಿ
ನೀಡಿ
ರಸ್ತೆ
ನಿರ್ಮಿಸಿ
ಕೊಡುವ
ಭರವಸೆ
ನೀಡುತ್ತಾರೆ
ಹೊರೆತು,
ನಂತರ
ಯಾರು
ರಸ್ತೆ
ನಿರ್ಮಿಸಿ
ಕೊಡುವ
ಆಲೋಚನೆ
ಮಾಡುವುದಿಲ್ಲ
ಎನ್ನುವುದು
ಗ್ರಾಮಸ್ಥರ
ಅಳಲು.
ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡರೆ ಅಧಿಕಾರಿಗಳು ಅಕ್ಕಪಕ್ಕದ ಜಮೀನು, ಮಾಲೀಕರ ಬಳಿ ಜಾಗ ಬಿಡಿಸಿಕೊಟ್ಟರೆ ರಸ್ತೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾರಂತೆ. ಆದರೆ, ಅಕ್ಕಪಕ್ಕದ ಜಮೀನುಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ಮುಂದಾಗುತ್ತಿಲ್ಲ. ಹಾಗಾಗಿ, ಗಂಟೆಮಕ್ಕಿ ಗ್ರಾಮದ ಎಂಟತ್ತು ಕುಟುಂಬಗಳು ಕಳೆದ 65-70 ವರ್ಷಗಳಿಂದಲೂ ಇದೇ ರೀತಿಯಾಗಿ ಬದುಕುತ್ತಿದ್ದಾರೆ.
ಮಲೆನಾಡಿನ ಕಳಸ ತಾಲೂಕಿನ ಜನರು ರಸ್ತೆ ಸಂಪರ್ಕ ಇಲ್ಲದೆ ನಿತ್ಯ ಗೋಳು ಅನುಭವಿಸುತ್ತಿದ್ದಾರೆ. ಈ ಆಧುನಿಕ ಭಾರತದಲ್ಲೂ ರಸ್ತೆ ಸಂಪರ್ಕ ಇಲ್ಲದೆ ನರಕಯಾತನೆ ಅನುಭವಿಸುವಂತಹ ಪರಿಸ್ಥಿತಿ ಕೆಲ ಜನರಿಗೆ ಎದುರಾಗಿದೆ. ರಸ್ತೆ ಮಾಡಿಸಿಕೊಡಿ ಎಂದು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.