ಚಿಕ್ಕಮಗಳೂರು: 12 ಸಾವಿರಕ್ಕೆ ಮಾರಾಟವಾಯ್ತು ಈ ಮೀನು, ಇದರ ತೂಕ ಕೇಳಿದ್ರೆ ನೀವು ಶಾಕ್!
ಚಿಕ್ಕಮಗಳೂರು, ಜುಲೈ, 15: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ 56 ಕೆ.ಜಿ.ತೂಕದ ಬೃಹತ್ ಮೀನೊಂದು ಬಲೆಗೆ ಬಿದ್ದಿದೆ.
ಭದ್ರಾ ಹಿನ್ನೀರಿನಲ್ಲಿ ಸಿಕ್ಕ 56 ಕೆ.ಜಿ.ತೂಕದ ಕಾಟ್ಲಾ ಮೀನನ್ನು ಫೈರೋಜ್ ಎಂಬುವವರ ಅಂಗಡಿಗೆ ತರಲಾಗಿದ್ದು, ಇದನ್ನು 4 ಜನ ಸೇರಿ 12 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾಟ್ಲಾ ಮೀನಿನ ಊಟದಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು
1. ಕಾಟ್ಲಾ ಮೀನು ಸೇವಿಸಿದರೆ ಕೊಬ್ಬು ಕಡಿಮೆ
2. ಕಾಟ್ಲಾ ಮೀನು ಸಂಧಿವಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಮತ್ತು ಕೀಲು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
3. ವಿಟಮಿನ್ ಎ ಯ ಒಂದು ವಿಧವಾದ ರೆಟಿನಾಲ್ ಸಮೃದ್ಧವಾಗಿದೆ.
4. ಸೋರಿಯಾಸಿಸ್ ಸೇರಿ ಇತರ ಹಲವಾರು ಚರ್ಮದ ಕಾಯಿಲೆಗಳಿಂದ ರಕ್ಷಿಸುತ್ತದೆ.
5. ಕ್ಯಾಟ್ಲಾವು ಅಯೋಡಿನ್, ಸತು, ಸೆಲೆನಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಹಲವಾರು ಅಂಶಗಳನ್ನು ಹೊಂದಿದೆ.
6. ಇದು ಆಸ್ತಮಾದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
7. ಕ್ಯಾಟ್ಲಾ ಮೀನಿನ ಎಣ್ಣೆಯು ಕೊಲೈಟಿಸ್ ಮತ್ತು ಕ್ರೋನ್ಸ್ ಕಾಯಿಲೆಯಂತಹ ಗಮನಾರ್ಹವಾದ ಉರಿಯೂತದ ಕರುಳಿನ ಅಸ್ವಸ್ಥತೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
8. ಏಕಾಗ್ರತೆ, ಓದುವ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಮತ್ತು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ. ಈ ಮೂಲಕ ಮಕ್ಕಳು ಚುರುಕಾಗಿರಲು ಸಹಕಾರಿಯಾಗುತ್ತದೆ.
ಈ ಮೇಲಿನ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ರುಚಿಕರವಾದ ಕ್ಯಾಟ್ಲಾ ಮೀನು ಪಾಕ ವಿಧಾನಗಳನ್ನು ಇಲ್ಲಿ ತಿಳಿಯಿರಿ. ಮೊಸರು, ಶುಂಠಿ/ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್ ಮತ್ತು ಗೋಡಂಬಿಗಳ ಕೆನೆ ಗ್ರೇವಿಯೊಂದಿಗೆ ಮಾಡಿದ ಕಟ್ಲಾದ ರುಚಿಯನ್ನು ಸವಿಯಿರಿ.
ಮೀನಿನ ತುಂಡುಗಳನ್ನು ಸಾಸಿವೆ ಎಣ್ಣೆಯಲ್ಲಿ ಉಪ್ಪು ಮತ್ತು ಅರಿಶಿನದೊಂದಿಗೆ ಫ್ರೈ ಮಾಡಿ. ನಂತರ ಅದನ್ನು ಈರುಳ್ಳಿ, ಮೊಸರು, ಕೆಂಪು ಮೆಣಸಿನಕಾಯಿಯ ಗ್ರೇವಿಯಲ್ಲಿ ಕುದಿಸಿ ಕ್ಯಾಟ್ಲಾ ಕಾಲಿಯಾವನ್ನು ತಯಾರಿಸಿ. ಹಾಗೆಯೇ ಹುರಿದ ಹೂಕೋಸಿನ ಕೆಲವು ತುಂಡುಗಳನ್ನು ಸಹ ಇದರಲ್ಲಿ ಸೇರಿಸಬಹುದಾಗಿದೆ. ಇನ್ನು ಕಟ್ಲಾ ಮೀನು ಕುಳಂಬು ಅನ್ನು ಹುಣಸೆಹಣ್ಣು ಮತ್ತು ತೆಂಗಿನಕಾಯಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದಲ್ಲದೇ ಕ್ಯಾಟ್ಲಾ ಫಿಶ್ ಫ್ರೈ ಕೂಡ ಮಾಡಬಹುದಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications