ಸ್ಪೀಕರ್ ಅಲ್ಲ ನಾನೀಗ ಕಾಂಗ್ರೆಸ್ ಕಾರ್ಯಕರ್ತ: ರಮೇಶ್‌ಕುಮಾರ್

Recommended Video

      ಸ್ಪೀಕರ್ ಅಲ್ಲ ನಾನೀಗ ಕಾಂಗ್ರೆಸ್ ಕಾರ್ಯಕರ್ತ: ರಮೇಶ್‌ಕುಮಾರ್/ K. R. Ramesh Kumar

      ಚಿಕ್ಕಬಳ್ಳಾಪುರ, ಆಗಸ್ಟ್ 02: ಶಾಸಕರ ಅನರ್ಹತೆ ಬಗ್ಗೆ ಈಗ ಮಾತನಾಡುವುದು ಗೌರವವಲ್ಲ, ಈಗ ನಾನು ಕಾಂಗ್ರೆಸ್ ಕಾರ್ಯಕರ್ತನಷ್ಟೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದರು.

      ನಗರದ ಹೊರವಲಯದ ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

      ಬಿಜೆಪಿ ಸರಕಾರ ಎಷ್ಟು ವರ್ಷ ಇರುತ್ತೇ, ಹೋಗುತ್ತೇ ಎಂದು ಹೇಳಲು ನಾನೇನು ಜ್ಯೋತಿಷ್ಯ ಅಲ್ಲಾ. ಇದ್ದಷ್ಟು ದಿನ ಇರುತ್ತೆ, ಆಮೇಲೆ ಹೋಗುತ್ತೇ? ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

      I am not speaker, i am congress party worker: Ramesh Kumar

      ಇವತ್ತಿನ ರಾಜಕೀಯದಲ್ಲಿ ಅನಿಶ್ಚಿತತೆ ಇದೆ. ಹಾಗಾಗಿ ಬಿಜೆಪಿ ಸರಕಾರ ಇಷ್ಟೇ ದಿನ ಇರುತ್ತೇ? ಹೋಗುತ್ತೆ ಎಂದು ಹೇಳಲು ನಾನೇನು ಜ್ಯೋತಿಶಿ ಅಲ್ಲಾ. ಅದರ ಆಯಸ್ಸು ಇರುವ ತನಕ ಇರತ್ತೇ ಎಂದರು.

      ಅನರ್ಹರು ಪಕ್ಷ ವಿರೋಧಿಯಾಗಿ ನಡೆದುಕೊಂಡರು. ಅದಕ್ಕೆ ಸಂವಿಧಾನದಲ್ಲಿ ಅನರ್ಹ ಮಾಡುವ ಅವಕಾಶವಿತ್ತು ಹಾಗಾಗಿ ಆ ಸ್ಥಾನದಲ್ಲಿದ್ದುಘಿ, ಅದನ್ನು ಮಾಡಿದ್ದೇನೆ. ಅದರ ಬಗ್ಗೆ ಈಗ ವ್ಯಾಖ್ಯಾನ ಮಾಡುವುದು ಗೌರವವಲ್ಲ ಎಂದು ಅನರ್ಹ ಶಾಸಕರ ಬಗ್ಗೆ ಮಾತನಾಡಲು ನಿರಾಕರಿಸಿದರು.

      ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ನಮಗೆ ದೊಡ್ಡ ಸವಾಲಿದೆ. ಸಿದ್ಧರಾಮಯ್ಯ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+