ಪೋಯಸ್ ಗಾರ್ಡನ್ ಬಂಗಲೆಗಾಗಿ ಶುರುವಾಯಿತು ಮಹಾಕದನ!
ಚೆನ್ನೈ, ಫೆಬ್ರವರಿ 23: ಮೊದಲ ಬಾರಿಗೆ ಮೌನ ಮುರಿದಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಸೋದರನ ಮಗ (ಸೋದರಳಿಯ) ದೀಪಕ್ ಜಯಕುಮಾರ್, ಪೋಯಸ್ ಗಾರ್ಡನ್ ನ ಬಂಗಲೆ ತನಗೆ ಹಾಗೂ ತನ್ನ ಸೋದರಿ ದೀಪಾಗೆ ಸೇರಿದ್ದು ಎಂದು ಹೇಳಿದ್ದಾರೆ.
ಟಿವಿ ಚಾನಲ್ ನ್ಯೂಸ್ ಎಕ್ಸ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ದೀಪಕ್, ಶಶಿಕಲಾ ಸಂಬಂಧಿಕರಾದ ಟಿಟಿವಿ ದಿನಕರನ್ ಮತ್ತು ವೆಂಕಟೇಶ್ ರಿಂದ ಎಐಎಡಿಎಂಕೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಹೇಳಿಕೆ ಮೂಲಕ ಜಯಲಿತಾರ ಸೋದರ ಸಂಬಂಧಿಗಳು ಹಾಗೂ ಶಶಿಕಲಾ ಸಂಬಂಧಿಕರ ಮಧ್ಯೆಯೇ ಜಯಲಲಿತಾರ ಉತ್ತರಾಧಿಕಾರ ಕದನ ಏರ್ಪಡುವಂತೆ ಕಾಣುತ್ತಿದೆ.[10 ಕೋಟಿ ರುಪಾಯಿ ದಂಡವನ್ನು ಶಶಿಕಲಾ ಹೇಗೆ ಕಟ್ತಾರೆ?]
ಸುಪ್ರೀಂ ಕೋರ್ಟ್ ಜಯಲಲಿತಾ ಅವರಿಗೆ ವಿಧಿಸಿದ ದಂಡ ಪಾವತಿಸಬಲ್ಲೆ. ನನಗೆ ಯಾವುದೇ ರಾಜಕೀಯ ಅಕಾಂಕ್ಷೆಗಳಿಲ್ಲ ಎಂದಿರುವ ದೀಪಕ್. "ನಾನು ಆಸ್ತಿ ಮಾರಿ ದಂಡ ಕಟ್ತೀನಿ. ಅದರೆ ಪೋಯಸ್ ಗಾರ್ಡನ್ ನನಗೆ ಹಾಗೂ ದೀಪಾಗೆ ಸೇರಿದ್ದು. ಬೇರೆ ಯಾರೂ ಅದರ ಮಾಲೀಕತ್ವ ಸ್ಥಾಪಿಸಲು ಸಾಧ್ಯವಿಲ್ಲ. ನಾನು ಹಾಗೂ ದೀಪಾ ಮಾತ್ರ ನನ್ನ ಅತ್ತೆಯ ಆಸ್ತಿಗೆ ಹಕ್ಕುದಾರರು" ಎಂದಿದ್ದಾರೆ.

ದಿನಕರನ್, ವೆಂಕಟೇಶ್ ಗೆ ಹಕ್ಕಿಲ್ಲ
"ನನಗೆ ರಾಜಕಿಯ ಉದ್ದೇಶಗಳೇನಿಲ್ಲ. ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒಪ್ತೀನಿ. ಆದರೆ ದಿನಕರನ್ ಹಾಗೂ ವೆಂಕಟೇಶ್ ಗೆ ಪ್ರಮುಖ ಸ್ಥಾನಗಳನ್ನು ಕೊಟ್ಟಿರೋದು ಹೇಗೆ ಒಪ್ಪಲು ಸಾಧ್ಯ? ದೀಪಾ ಬೇಕಾದರೆ ಪಕ್ಷದಲ್ಲಿ ಸ್ಥಾನ ಕೇಳಬಹುದು. ಅದರೆ ಇವರಿಬ್ಬರಿಗೆ ಆ ಹಕ್ಕಿಲ್ಲ. ಕುಟುಂಬ ರಾಜಕಾರಣ ತರುವ ಯತ್ನ ನಡೆಯುತ್ತಿದೆ" ಎಂದಿದ್ದಾರೆ.

ಪನ್ನೀರ್ ಸೆಲ್ವಂ ಉತ್ತಮ ಆಡಳಿತ ಕೊಟ್ಟಿದ್ದಾರೆ
ಪನ್ನೀರ್ ಸೆಲ್ವಂ ಬಗ್ಗೆ ಮಾತನಾಡಿರುವ ದೀಪಕ್, ಅವರು ಉತ್ತಮ ಆಡಳಿತಕ್ಕೆ ಸಹಕಾರ ನೀಡಿದ್ದಾರೆ. "ಉತ್ತಮ ಆಡಳಿತಕ್ಕೆ ಸಹಕಾರ ನೀಡಿದ್ದಕ್ಕೆ ನಾನು ಬೆಂಬಲ ನೀಡುತ್ತೇನೆ ಮತ್ತು ಅವರನ್ನು ಗೌರವಿಸುತ್ತೇನೆ. ಅವರೊಬ್ಬ ಉತ್ತಮ ಮುಖ್ಯಮಂತ್ರಿ ಆಗಿದ್ದರು. ಇದಕ್ಕಿಂತ ಅವರ ಬಗ್ಗೆ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ.

ಎಐಎಡಿಎಂಕೆ ಇಬ್ಭಾಗ ಸಾಧ್ಯತೆ
ದೀಪಕ್ ಹೇಳಿಕೆ ಗಮನಿಸಿದರೆ ಎಐಎಡಿಎಂಕೆ ಹಾಗೂ ಜಯಲಲಿತಾ ಬೆಂಬಲಿಗರು ಇಬ್ಭಾಗ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಏಕೆಂದರೆ ಜಯಲಲಿತಾ ಅಂತ್ಯಸಂಸ್ಕಾರದ ವೇಳೆ ಶಶಿಕಲಾ ಜೊತೆಗೆ ಕಾಣಿಸಿಕೊಂಡಿದ್ದರು ದೀಪಕ್. ಆ ಸಂದರ್ಭದಲ್ಲಿ ಆತನ ಸೋದರಿ ದೀಪಾ ಉದ್ದೇಶಪೂರ್ವಕವಾಗಿ ಅಂತರ ಕಾಯ್ದುಕೊಂಡಿದ್ದರು.

ಆಗೆಲ್ಲ ದೀಪಕ್ ಜತೆಯಲ್ಲಿದ್ದರು
ಇನ್ನು ಜಯಲಲಿತಾ ಅವರ ನಿಧನ ಸುದ್ದಿಯನ್ನು ಅಪೋಲೋ ಆಸ್ಪತ್ರೆಯಲ್ಲಿ ಘೋಷಿಸುವ ಸಂದರ್ಭದಲ್ಲೂ ದೀಪಕ್ ಅಲ್ಲಿದ್ದರು. ವಿಶ್ವಾಸಮತ ಸಾಬೀತಿಗೆ ಮುನ್ನ ಪಕ್ಷದ ಶಾಸಕರು ರೆಸಾರ್ಟ್ ನಲ್ಲಿದ್ದರಲ್ಲಾ, ಆಗಲೂ ದೀಪಕ್ ಅದೇ ರೆಸಾರ್ಟ್ ನಲ್ಲಿದ್ದರು. ಒ.ಪನ್ನೀರ್ ಸೆಲ್ವಂರನ್ನು ಶಶಿಕಲಾ ಪಕ್ಷದಿಂದ ಉಚ್ಚಾಟಿಸಿದಾಗ ದಿನಕರನ್ ಜತೆಗೆ ದೀಪಕ್ ಸಭೆಯಲ್ಲಿ ಹಾಜರಿದ್ದರು.

ಹೊಸ ರಾಜಕೀಯ ತಿರುವು
ಪೋಯಸ್ ಗಾರ್ಡನ್ ನ ಜಯಲಲಿತಾ ಸ್ಮಾರಕವಾಗಿ ಮಾಡಬೇಕು ಎಂದು ಒಪಿಎಸ್ ಹೇಳಿದಾಗ ಕೂಡ ಶಶಿಕಲಾ ಪರವಾಗಿಯೇ ದೀಪಕ್ ಇದ್ದರು. ಆದರೆ ಆತನ ಟಿವಿ ಸಂದರ್ಶನವು ತಮಿಳುನಾಡು ರಾಜಕೀಯಕ್ಕೆ ಹೊಸ ತಿರುವು ಕೊಟ್ಟಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications