ಶ್ರೀರಂಗಂನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ
ಮುಳಬಾಗಿಲು ಶ್ರೀಪಾದರಾಜರ ಮಠ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಟ್ರಸ್ಟ್ ನಿಂದ ಆಯೋಜನೆಯಲ್ಲಿ ತಮಿಳುನಾಡಿನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ ಬಾರಿಸಲಾಯಿತು. ಶ್ರೀರಂಗಂನಲ್ಲಿ ವ್ಯಾಸೋತ್ಸವನ್ನು ಆಚರಿಸಲಾಯಿತು
ಶ್ರೀರಂಗಂ(ತಮಿಳುನಾಡು), ಮಾರ್ಚ್ 24: ಮುಳಬಾಗಿಲು ಶ್ರೀಪಾದರಾಜರ ಮಠ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಟ್ರಸ್ಟ್ ನಿಂದ ಆಯೋಜನೆಯಲ್ಲಿ ತಮಿಳುನಾಡಿನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ ಬಾರಿಸಲಾಯಿತು. ಶ್ರೀರಂಗಂನಲ್ಲಿ ವ್ಯಾಸೋತ್ಸವನ್ನು ವಿಜೃಂಭಣೆಯಿಂದ ಮಾರ್ಚ್ 21, 22ರಂದು ದಾಸ ಸಾಹಿತ್ಯ ಉತ್ಸವದ ಮೂಲಕ ಆಚರಿಸಲಾಯಿತು.
ವ್ಯಾಸರಾಜ ಗುರುಸಾರ್ವಭೌಮರು ಶ್ರೀರಂಗಂನಲ್ಲಿ ರಚಿಸಿ ಸಮರ್ಪಿಸಿದ ಸ್ಮರಣಾರ್ಥ ಮತ್ತು ಶ್ರೀಪಾದರಾಜ ಮಠದಿಂದ ಪ್ರಕಾಶನಗೊಂಡಿರುವ ವಿದ್ವಾನ್ ಬೆಮ್ಮೆತ್ತಿ ವೆಂಕಟೇಶಾಚಾರ್ಯರಿಂದ ಸಂಪಾದಿತ ಪರಿಪೂರ್ಣ ಚಂದ್ರಿಕಾ ಗ್ರಂಥದ ಕೊನೆಯ ಸಂಪುಟದ ಲೋಕಾರ್ಪಣೆಯ ಅಂಗವಾಗಿ ಮಾ. 21, 22 ಮತ್ತು 23ರಂದು ರಾಷ್ಟ್ರೀಯ ವ್ಯಾಸೋತ್ಸವ' ಆಯೋಜಿಸಿತ್ತು.

ಶ್ರೀಪಾದರಾಜರ ಮಠದ ಕೇಶವನಿಧಿ ತೀರ್ಥರು ವ್ಯಾಸ ದಾಸ ಸಾಹಿತ್ಯ ಸಂಸ್ಕೃತಿ ಮಹೋತ್ಸವಕ್ಕೆ ಚಾಲನೆ ನೀಡಿದರು. ತಂಬಿಹಳ್ಳಿ ವಿದ್ಯಾಸಾಗರ ಮಾಧವತೀರ್ಥರು, ಭಂಡಾರಕೇರಿ ವಿದ್ಯೇಶತೀರ್ಥರು, ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಸ್ಆರ್ಪಿ ಎಜಿಡಿಪಿ ಭಾಸ್ಕರ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಜೆ ಶ್ರೀವ್ಯಾಸರಾಜ ಗ್ರಂಥ ಮತ್ತು ಚಿತ್ರಪಟವನ್ನು ಆನೆಯ ಮೇಲಿಟ್ಟು ರಂಗನಾಥಸ್ವಾಮಿ ದೇವಾಲಯದ ಮಹಾದ್ವಾರದಿಂದ ನಾಲ್ಕು ಚಿತ್ತರೈ ಬೀದಿಗಳ ಮೂಲಕ ವ್ಯಾಸರಾಜ ಮಠದವರೆಗೆ ಅದ್ದೂರಿ ಮೆರವಣಿಗೆ, ನಂತರ ಕೊವಿಲಡಿ ಮಧ್ವಪ್ರಸಾದ್ ಮತ್ತು ಶ್ರೀಮತಿ ಸರಸ್ವತಿ ಶ್ರೀಪತಿ ರವರಿಂದ ದಾಸ ಸಾಹಿತ್ಯ ಸಿರಿ - ಸಂಗೀತ ಝರಿ ಏರ್ಪಡಿಸಲಾಗಿತ್ತು.
ವಿದ್ವಾಂಸರಾದ ಪ್ರೊ. ಡಿ.ಪ್ರಹ್ಲದಾಚಾರ್ಯ, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಡಾ.ಎ.ವಿ ನಾಗಸಂಪಿಗೆ ಅಧ್ಯಕ್ಷತೆಯಲ್ಲಿ ವ್ಯಾಸ ದಾಸ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ವಿವಿಧ ಗೋಷ್ಠಿ ನಡೆಯಿತು, ಮೂರು ದಿನವೂ ಸಂಜೆ ಸಂಗೀತ ವಿದ್ವಾಂಸರಿಂದ ದಾಸ ಸಾಹಿತ್ಯ ಸಂಗೀತ ಝರಿ ( ಶ್ರೀ ವ್ಯಾಸರಾಜರು ಮತ್ತು ಶ್ರೀಪಾದರಾಜರ ರಚನೆ ಆಧಾರಿತ ಕೃತಿ) ಆಯೋಜನೆಗೊಂಡಿತ್ತು.

ಮೈಸೂರಿನ ವಿದ್ವಾಂಸ ಡಾ.ಎನ್.ಕೆ.ರಾಮಶೇಷನ್, ಎ.ಆರ್ ರಘುರಾಮ, ಚತುರ್ವೇದಿ ವೇದವ್ಯಾಸಾಚಾರ್ಯ , ಸುಬ್ರಾಯ ಭಟ್ಟ , ಪುರಿಯ ಗೌಡೀಯ ಮಠದ ಹರಿಪ್ರಿಯ ದಾಸ, ಡಾ.ವಾಸುದೇವ ಅಗ್ನಿಹೋತ್ರಿ, ಡಾ ಸುಭಾಶ್ ಖಾಕಂಡಕಿ , ಹೆಚ್ ಬಿ ಲಕ್ಷ್ಮಿನಾರಾಯಣ , ಕೃಷ್ಣ ,ಪ್ರಾಣೇಶ್ ಮತ್ತಿತರರು ಭಾಗವಹಿಸಿದ್ದರು. ರಾಜಲಕ್ಷ್ಮೀ ಪಾರ್ಥಸಾರಥಿ ಅಧ್ಯಕ್ಷತೆಯಲ್ಲಿ ಮಹಿಳಾ ಗೋಷ್ಠಿಯೂ ನಡೆಯಿತು.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications