ಆಂಧ್ರ ಗಡಿಯಲ್ಲಿ ನಿರ್ಮಿಸಿದ್ದ 5 ಅಡಿ ಎತ್ತರದ ತಡೆಗೋಡೆ ನೆಲಸಮ
ಚೆನ್ನೈ, ಏಪ್ರಿಲ್ 28: ಕೊರೊನಾ ವೈರಸ್ ಭೀತಿಯಿಂದ ಆಂಧ್ರಪ್ರದೇಶದ ಚಿತ್ತೂರು ಗಡಿಭಾಗದಲ್ಲಿ ತಮಿಳುನಾಡಿನ ವೆಲೂರು ಜಿಲ್ಲಾಡಳಿದ 5 ಅಡಿ ಎತ್ತರದ ತಡೆಗೋಡೆ ನಿರ್ಮಿಸಿತ್ತು. ಈ ತಡೆಗೋಡೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಗೋಡೆಯನ್ನು ತೆರವುಗೊಳಿಸಲಾಗಿದೆ.
Recommended Video
ವೆಲೂರು ಮತ್ತು ಚಿತ್ತೂರು ಮಾರ್ಗದಲ್ಲಿ ಎರಡು ಕಡೆ ಕಾಂಕ್ರಿಟ್ ಗೋಡೆ ನಿರ್ಮಿಸಲಾಗಿತ್ತು. ಲಾಕ್ಡೌನ್ ಕಾರಣದಿಂದ ಎರಡು ರಾಜ್ಯಗಳ ನಡುವೆ ವಾಹನ ಮತ್ತು ಜನರು ಸಂಚರಿಸುವುದನ್ನು ತಡೆಯಲು ತಮಿಳುನಾಡು ಜಿಲ್ಲಾಡಳಿತ ಈ ತೀರ್ಮಾನಕ್ಕೆ ಬಂದಿತ್ತು.

ಆದರೆ, ಚಿತ್ತೂರು ಜಿಲ್ಲಾಡಳಿತ ವೆಲೂರು ಜಿಲ್ಲಾಡಳಿತದ ಈ ನಡೆಗೆ ವಿರೋಧ ವ್ಯಕ್ತಪಡಿಸಿತ್ತು. 'ಲಾಕ್ ಡೌನ್ ನಿರ್ಬಂಧಗಳ ಹೊರತಾಗಿಯೂ, ಅಗತ್ಯ ಸರಕು ಸಾಗಿಸುವ ವಾಹನಗಳಿಗೆ ಮತ್ತು ತುರ್ತು ಪರಿಸ್ಥಿತಿ ವಾಹನಕ್ಕೆ ಅನುಮತಿ ನೀಡಬೇಕಾಗುತ್ತೆ. ಈ ಉದ್ದೇಶದಿಂದಲೇ ಗಡಿ ಚೆಕ್-ಪೋಸ್ಟ್ಗಳು ಜಾರಿಯಲ್ಲಿವೆ. ಗೋಡೆಗಳನ್ನು ನಿರ್ಮಿಸುವ ಮೂಲಕ ಹೆದ್ದಾರಿಯನ್ನು ಶಾಶ್ವತವಾಗಿ ನಿರ್ಬಂಧಿಸಿದರೆ, ಅದು ತುರ್ತು ಸಾರಿಗೆ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ' ಎಂದು ಚಿತ್ತೂರಿನ ಜಂಟಿ ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
After the #AndhraPradesh government requested #TamilNadu officials to remove the wall, which had built by #Velluru District officials at the border of #AndhraPradesh and #TamilNadu, has been removed.#Lockdown #COVIDー19 #coronavirus pic.twitter.com/A4cMkbeKqc
— Dr KBN (Corona Specialist) MA,Phd,MD,DM,FRCS,FCMS (@Avakaya9999) April 27, 2020
ಬಳಿಕ ಇದರಿಂದ ಎಚ್ಚೆತ್ತುಕೊಂಡ ವೆಲೂರು ಜಿಲ್ಲಾಡಳಿತ ಸೋಮವಾರ ಸಂಜೆ ಚಿತ್ತೂರು ಮಾರ್ಗದಲ್ಲಿ ನಿರ್ಮಿಸಲಾಗಿದ್ದ ಎರಡು ಕಾಂಕ್ರಿಟ್ ಗೋಡೆಯನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು.
ತಮಿಳುನಾಡು ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮೇ 3ರ ನಂತರವೂ ದೇಶದಲ್ಲಿ ಲಾಕ್ಡೌನ್ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಇಂತಹ ಸಮಯದಲ್ಲಿ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸುವುದರಿಂದ ತುರ್ತುಪರಿಸ್ಥಿತಿ ವಾಹನಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈಗ ಗೋಡೆ ನೆಲಸಮಗೊಳಿಸಲಾಗಿದೆ.












Click it and Unblock the Notifications