58 ನಿಮಿಷದಲ್ಲಿ 46 ಭಕ್ಷ್ಯಗಳ ತಯಾರಿ; ಚೆನ್ನೈ ಹುಡುಗಿಯ ಚಮತ್ಕಾರ
ಚೆನ್ನೈ, ಡಿಸೆಂಬರ್ 16: ಮೊನ್ನೆ ಮೊನ್ನೆಯಷ್ಟೇ ಕೇರಳ ಮೂಲದ ಹತ್ತು ವರ್ಷದ ಬಾಲಕಿಯೊಬ್ಬಳು ಕೇವಲ ಒಂದು ಗಂಟೆಯಲ್ಲಿ 33 ಬಗೆಯ ತಿನಿಸುಗಳನ್ನು ತಯಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಳು. ಇದೀಗ ಆ ದಾಖಲೆಯನ್ನು ಚೆನ್ನೈನ ಬಾಲಕಿ ಮುರಿದಿದ್ದಾಳೆ. ಕೇವಲ 58 ನಿಮಿಷದಲ್ಲಿ 46 ತಿನಿಸುಗಳನ್ನು ತಯಾರಿಸಿ ಯುನಿಕೊ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದಾಳೆ.
ಎನ್.ಎಸ್. ಲಕ್ಷ್ಮಿ ಸಾಯಿ ಶ್ರೀ ಎಂಬ ಚೆನ್ನೈನ ಈ ಬಾಲಕಿ ಪಟಾ ಪಟ್ ಎಂದು ಅಡುಗೆ ತಯಾರಿಸಿ ಮಂಗಳವಾರ ವಿಶ್ವ ದಾಖಲೆ ಬರೆದಿದ್ದಾಳೆ.
ವಿಶ್ವ ದಾಖಲೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿ, "ನನಗೆ ಅಡುಗೆ ಮಾಡುವುದರಲ್ಲಿ ತುಂಬಾ ಆಸಕ್ತಿಯಿತ್ತು. ಲಾಕ್ ಡೌನ್ ಸಮಯದಲ್ಲಿ ಅಮ್ಮನಿಂದ ಅಡುಗೆ ಮಾಡಲು ತರಬೇತಿ ಪಡೆದೆ. ಅಪ್ಪ ನನಗೆ ಈ ರೀತಿ ದಾಖಲೆ ಸೃಷ್ಟಿಸುವ ಹುಮ್ಮಸ್ಸು ತುಂಬಿದರು" ಎಂದಿದ್ದಾಳೆ.

"ತಮಿಳುನಾಡಿನ ಹಲವು ಬಗೆಯ ಸಾಂಪ್ರದಾಯಿಕ ಅಡುಗೆಗಳನ್ನು ನಾನು ಮಾಡುತ್ತೇನೆ. ಲಾಕ್ ಡೌನ್ ಸಮಯದಲ್ಲಿ ನನ್ನೊಂದಿಗೆ ನನ್ನ ಮಗಳು ಅಡುಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದಳು. ನಾನು ಆಕೆಗೆ ಅಡುಗೆ ಮಾಡುವುದನ್ನು ಕಲಿಸಿದೆ. ನನ್ನ ಪತಿ, ಅಡುಗೆ ಕಲೆಯಲ್ಲಿ ದಾಖಲೆ ಮಾಡುವ ಆಲೋಚನೆ ನೀಡಿದರು. ಆಗ ನನ್ನ ಮಗಳು ಅಡುಗೆಯನ್ನು ಆದಷ್ಟು ಬೇಗ ಮಾಡುವಂತೆ ತರಬೇತಿ ಪಡೆದುಕೊಂಡು ಈಗ ದಾಖಲೆ ಸೃಷ್ಟಿಸಿದ್ದಾಳೆ" ಎಂದು ಸಂತಸ ವ್ಯಕ್ತಪಡಿಸಿದರು ಲಕ್ಷ್ಮಿ ತಾಯಿ ಎನ್ ಕಲೈಮಗಲ್.
ದಾಖಲೆ ರೂಪಿಸಲು ಮನಸ್ಸು ಮಾಡಿದ ನಂತರ, ಹಿಂದಿನ ದಾಖಲೆಗಳ ಕುರಿತು ಮಾಹಿತಿ ಕಲೆ ಹಾಕಿದರು. ಆಗ ಈಚೆಗೆ ಕೇರಳ ಮೂಲದ ಹತ್ತು ವರ್ಷದ ಬಾಲಕಿ 33 ಆಹಾರಗಳನ್ನು ತಯಾರಿಸಿ ದಾಖಲೆ ಸೃಷ್ಟಿಸಿದ್ದುದು ತಿಳಿದುಬಂತು. ಈ ದಾಖಲೆ ಮುರಿಯಲು ಪ್ರಯತ್ನ ಪಟ್ಟಿದ್ದಾಗಿ ಲಕ್ಷ್ಮಿ ತಿಳಿಸಿದ್ದಾಳೆ.

ಆಗಸ್ಟ್ 29ರಂದು ಕೇರಳದ ಸಾನ್ವಿ 33 ಬಗೆಯ ಆಹಾರ ತಯಾರಿಸಿದ್ದಳು. ಇಡ್ಲಿ, ವೇಫಲ್, ಕಾರ್ನ್ ಫ್ರಿಟರ್, ಮಶ್ರೂಮ್ ಟಿಕ್ಕಾ, ಉತ್ತಪ್ಪಂ, ಪನೀರ್ ಟಿಕ್ಕಾ, ಸ್ಯಾಂಡ್ ವಿಚ್, ಪಾಪಡ್ ಚಾಟ್, ಫ್ರೈಡ್ ರೈಸ್, ಚಿಕನ್ ರೋಸ್ಟ್, ಪ್ಯಾನ್ ಕೇಕ್, ಅಪ್ಪಂ ಹೀಗೆ ಥರಾವರಿ ಭಕ್ಷ್ಯಗಳನ್ನು ತಯಾರಿಸಿದ್ದಳು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications