ಮುಖ ನೋಡಿ ವಿದೇಶಿಗರೆಂದು ಜರಿದು ಪಾಸ್ಪೋರ್ಟ್ ನಿರಾಕರಣೆ
ಚಂಡೀಘಡ, ಜನವರಿ 02: ಪಾಸ್ಪೋರ್ಟ್ ನೀಡಲು ದಾಖಲೆಗಳು ಕಡ್ಡಾಯ, ದಾಖಲೆಗಳನ್ನು ಮೂಲವಾಗಿ ಪರಿಗಣಿಸಿ ಪಾಸ್ಪೋರ್ಟ್ ನೀಡಲಾಗುತ್ತದೆ ಆದರೆ ಮುಖ ನೋಡಿ ಪಾಸ್ಪೋರ್ಟ್ ನಿರಾಕರಿಸಿದ ಘಟನೆ ಹರ್ಯಾಣಾದಲ್ಲಿ ನಡೆದಿದೆ.
ಹರ್ಯಾಣಾದ ಇಬ್ಬರು ಸಹೋದರಿಯರು ಪಾಸ್ಪೋರ್ಟ್ ಮಾಡಿಸಲೆಂದು ಪಾಸ್ಪೋರ್ಟ್ ಕಚೇರಿಗೆ ಹೋದಾಗ ಸಂದರ್ಶನ ಮಾಡಿದ ಅಧಿಕಾರಿಗಳು ಸಹೋದರಿಯರು ನೋಡಲು ನೇಪಾಳ ದೇಶದವರಂತೆ ಇದ್ದಾರೆಂದು ಹೇಳಿ ಪಾಸ್ಪೋರ್ಟ್ ಕೊಡಲು ನಿರಾಕರಿಸಿದ್ದಾರೆ.
ಹರಿಯಾಣಾದ ಹೀನಾ ಮತ್ತು ಸಂತೋಶ್ ಎಂಬ ಇಬ್ಬರು ಸಹೋದರಿಯರು ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು, ಎಲ್ಲಾ ದಾಖಲೆಗಳನ್ನೂ ನೀಡಿದ್ದರೂ, ಅವರು ನೇಪಾಳಿಯರಂತೆ ಕಾಣುತ್ತಾರೆಂದು ಪಾಸ್ಪೋರ್ಟ್ ಅಧಿಕಾರಿಗಳು ಅವರಿಗೆ ಪಾಸ್ಪೋರ್ಟ್ ನೀಡಿಲ್ಲ ಜೊತೆಗೆ ಇಬ್ಬರೂ ತಮ್ಮ ಪೌರತ್ವ ಸಾಬೀತುಪಡಿಸುವಂತೆ ಅಧಿಕಾರಿಗಳು ಹೇಳಿದ್ದಾರೆ.

ಸಹೋದರಿಯರು ಇದೇ ವಿಷಯವಾಗಿ ಹರಿಯಾಣಾದ ಸಚಿವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಪಾಸ್ಪೋರ್ಟ್ ನೀಡಲಾಗುವುದು ಎಂದಿದ್ದಾರೆ.
ಹೀನಾ ಹೇಳುವಂತೆ, ಅವರ ತಾತ ನೇಪಾಳಿಯವರಾಗಿದ್ದರು. ಅವರ ತಂದೆ ಇಲ್ಲಿಯೇ ಭಾರತದಲ್ಲಿ ಹುಟ್ಟಿದವರು, ಪಾಸ್ಪೋರ್ಟ್ ನಿರಾಕರಿಸಲ್ಪಟ್ಟ ಸಹೋದರಿಯರಿಬ್ಬರೂ ಭಾರತದಲ್ಲೇ ಹುಟ್ಟಿದ್ದಾರೆ, ಶಿಕ್ಷಣ ಪಡೆದಿದ್ದಾರೆ. ಆ ದಾಖಲೆಗಳನ್ನೂ ನೀಡಿದ್ದಾರೆ. ಆದರೂ ಸಹ ಅವರನ್ನು ನೇಪಾಳಿಯರೆಂದು ಕರೆಯಲಾಗಿದೆ.
ಘಟನೆ ನಡೆದಿರುವ ಹರಿಯಾಣಾದ ಅಂಬಾಲ ಜಿಲ್ಲೆಯ ಜಿಲ್ಲಾಧಿಕಾರಿ ಅಶೋಕ್ ಶರ್ಮಾ ಮಾತನಾಡಿ, 'ಪಾಸ್ಪೋರ್ಟ್ ನಿರಾಕರಿಸಲು 'ನೇಪಾಳಿಯರಂತೆ ಕಾಣುತ್ತಾರೆ' ಎಂಬ ಕಾರಣವನ್ನು ಆ ಅಧಿಕಾರಿಗಳು ಅರ್ಜಿಯ ಮೇಲೆ ಬರೆದಿದ್ದರು. ಇದು ನನ್ನ ಗಮನಕ್ಕೆ ಬಂದ ಕೂಡಲೇ ಸಹೋದರಿಯರಿಬ್ಬರನ್ನೂ ಸಂಪರ್ಕಿಸಿ ಅಗತ್ಯ ಭರವಸೆ ನೀಡಿದ್ದೆ, ಈ ಘಟನೆ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ' ಎಂದಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications