ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಯೂರಿದ ರಷ್ಯಾ ಅತಿಥಿ!
ಚಾಮರಾಜನಗರ, ನವೆಂಬರ್.27 : ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಒಂದು ಊರಿನಿಂದ ಮತ್ತೊಂದು ಊರಿಗೆ ಪಕ್ಷಿಗಳು ವಲಸೆ ಹೋಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದರಲ್ಲೂ ಇದೀಗ ದೂರದ ರಷ್ಯಾ ಮತ್ತು ಚೀನಾದಲ್ಲಿ ಕಂಡು ಬರುವ ಪುಟ್ಟ ಹಕ್ಕಿಯೊಂದು ಚಾಮರಾಜನಗರ ಜಿಲ್ಲೆಗೆ ಆಗಮಿಸಿದೆ.
ಹೀಗೆ ಆಗಮಿಸಿರುವ ಪುಟ್ಟ ಹಕ್ಕಿಯು ಇದೀಗ ಗುಂಡ್ಲುಪೇಟೆಯ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಎಂಬುವರ ಮನೆಯ ಆವರಣದಲ್ಲಿರುವ ಗಿಡ ಮರಗಳಲ್ಲಿ ಆಶ್ರಯ ಪಡೆದಿದೆ. ಮರದಿಂದ ಮರಕ್ಕೆ ಹಾರುತ್ತಾ ತನ್ನದೇ ವಿಶಿಷ್ಟ ಚೆಲುವಿನಿಂದ ನೋಡುಗರನ್ನು ಆಕರ್ಷಿಸುವ ಈ ಹಕ್ಕಿಯ ಹೆಸರು ಬೂಟೆಡ್ ವಾಬ್ಲರ್.
ಈ ಹಕ್ಕಿಯ ಕುರಿತ ಮಾಹಿತಿ ನೀಡಿರುವ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಅವರು ಸುಮಾರು 12ಸೆ.ಮೀ. ಉದ್ದ, 10ಗ್ರಾಂ ತೂಕದ ಗುಬ್ಬಚ್ಚಿಗಿಂತ ಪುಟ್ಟದಾದ ಬೂಟೆಡ್ ವಾಬ್ಲರ್ ಹಕ್ಕಿಯು ನೋಡಲು ಸುಂದರವಾಗಿದೆ. ಹಕ್ಕಿಯ ಮೇಲ್ಭಾಗ ತೆಳು ಬೂದು ಬಣ್ಣವನ್ನು ಹೊಂದಿದೆ. ಬಿಳಿ, ತೆಳು ಕ್ರೀಂ ಬಣ್ಣದ ತಳ, ಉದ್ದಬಾಲ, ಕಣ್ಣ ಮೇಲೆ ಬಿಳಿ ಹುಬ್ಬು ಹೊಂದಿ ಆಕರ್ಷಕವಾಗಿದೆ.

ಇವು ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ವಾಸಿಸುತ್ತಿದ್ದು, ಮೇ-ಜೂನ್ನಲ್ಲಿ4-6 ಮೊಟ್ಟೆ ಇಟ್ಟು ಮರಿಮಾಡುತ್ತವೆ. ಆದರೆ ಚಳಿಗಾಲದಲ್ಲಿ ಭಾರತ, ಶ್ರೀಲಂಕಾಗಳಿಗೆ ವಲಸೆ ಬರುತ್ತವೆ. ಜತೆಯಾಗಿ ವಾಸಿಸುವ ಇವು ಚಳಿಗಾಲ ಮುಗಿಯುತ್ತಿದ್ದಂತೆ ತಮ್ಮ ಮೂಲನೆಲೆಗೆ ವಾಪಸಾಗುತ್ತವೆ ಎಂದು ಅವರು ಹೇಳಿದ್ದಾರೆ.
ಪಕ್ಷಿಗಳ ಬಗ್ಗೆ ಹೆಚ್ಚಿ ಆಸಕ್ತಿ ವಹಿಸಿ ಮಾಹಿತಿ ಸಂಗ್ರಹಿಸುತ್ತಿರುವ ಮಧು ಅವರು ಬೂಟೆಡ್ ವಾಬ್ಲರ್ ಹಕ್ಕಿಯ ಬಗ್ಗೆಯೂ ಕಳೆದ 2 ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ಈ ಹಕ್ಕಿಗಳ ಮೂಲ ಮತ್ತು ಅವುಗಳ ಜೀವನ ಕ್ರಮಗಳ ಬಗ್ಗೆಯೂ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ದೂರದಿಂದ ಬರುವ ಈ ಹಕ್ಕಿಗಳು ಕುರುಚಲು ಕಾಡು, ಹೊಲಗದ್ದೆಗಳಲ್ಲಿ ಹಾರಾಡುತ್ತಾ ಹುಳಹುಪ್ಪಟೆಗಳನ್ನು ತಿನ್ನುತ್ತಾ ಜೀವಿಸುತ್ತವೆ ಇವು ಚಳಿಗಾಲ ಮುಗಿದು ಬೇಸಿಗೆ ಬರುತ್ತಿದ್ದಂತೆಯೇ ತಮ್ಮ ಮೂಲ ನೆಲೆಗೆ ಮರಳುವುದನ್ನು ನಾವು ಕಾಣಬಹುದಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications