ಚಾಮರಾಜನಗರಕ್ಕೂ ಕಾಲಿಟ್ಟ ವೈರಸ್; ಲಾರಿ ಚಾಲಕನಿಗೆ ಬಂತು ಕೊರೊನಾ
ಚಾಮರಾಜನಗರ, ಜೂನ್ 20: ಗಡಿ ಜಿಲ್ಲೆ ಚಾಮರಾಜನಗರಕ್ಕೂ ಮಹಾಮಾರಿ ಕೊರೊನಾ ಸೋಂಕು ಎಂಟ್ರಿಯಾಗಿದೆ. ಚಾಮರಾಜನಗರ ಜಿಲ್ಲಾ ಜನತೆಯಲ್ಲಿ ಇದೀಗ ಮತ್ತೆ ಆತಂಕ ಶುರುವಾಗಿದೆ. ಕೊರೊನಾ ಮುಕ್ತ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾದಂತಾಗಿದೆ.
Recommended Video
Dancing is the most difficult thing for me : Sudeep | Filmibeat Kannada
ಜಿಲ್ಲೆಯ ಗುಂಡ್ಲುಪೇಟೆಯ ಈಚರ್ ಚಾಲಕನಿಗೆ ತಮಿಳುನಾಡು ಸಂಪರ್ಕದಿಂದ ಕೊರೊನಾ ಸೋಂಕು ಬಂದಿದೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಕೊರೊನಾ ಸೋಂಕಿತನ ಪತ್ತೆ ಮಾಡಲಾಗಿದೆ.
ಈಚರ್ ಚಾಲಕ ಗುಂಡ್ಲುಪೇಟೆ ಪಟ್ಟಣದಿಂದ ತಮಿಳುನಾಡಿಗೆ ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ. ಈತನಲ್ಲಿ ಕೊರೊನಾ ಸೋಂಕು ದೃಢವಾಗುತ್ತಿದ್ದಂತೆ ರಾತ್ರೋ ರಾತ್ರಿ ಸೋಂಕಿತ ಇದ್ದ ಮಹದೇವ್ ಪ್ರಸಾದ್ ನಗರವನ್ನು ಸೀಲ್ ಡೌನ್ ಮಾಡಲಾಗಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕೊರೊನಾ ಸೊಂಕಿತನ ರವಾನೆ ಮಾಡಲಾಗಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು, ಕಂದಾಯಾಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications