ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಮಗುವಿಗೆ ಬರೆ ಹಾಕಿದ ಅಂಗನವಾಡಿ ಸಹಾಯಕಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ನವೆಂಬರ್ 21 : ಅಂಗನವಾಡಿ ಕೇಂದ್ರದ ಅಡುಗೆ ಮನೆಗೆ ನುಗ್ಗಿತೆಂಬ ಕೋಪದಲ್ಲಿ ಮಗುವಿಗೆ ಅಂಗನವಾಡಿ ಸಹಾಯಕಿ ಬಿಸಿ ಸೌಟಿನಿಂದ ಬರೆ ಹಾಕಿದ ಘಟನೆ ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಅಂಗನವಾಡಿಯ ಸಹಾಯಕಿ ಶಿವಮಲ್ಲಮ್ಮ ಎಂಬಾಕೆಯೇ ಮಗುವಿಗೆ ಬರೆ ಎಳೆದಾಕೆ. ಇದರಿಂದ ಮಗು ಹರ್ಷಿತ್ ನ ಕುತ್ತಿಗೆಯ ಭಾಗ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸೋಮವಾರವೇ ನಡೆದಿದ್ದರೂ ಮಂಗಳವಾರ ಬೆಳಕಿಗೆ ಬಂದಿದೆ.

Anganwadi helper assaulted on Dalit boy by hot ladle in Charamrajnagara district

ಮಗುವಿನ ಪೋಷಕರು ಅಂಗನವಾಡಿ ಸಹಾಯಕಿ ಶಿವಮಲ್ಲಮ್ಮ ವಿರುದ್ದ ದೂರು ದಾಖಲಿಸಿದ್ದಾರೆ. ಮಗು ದಲಿತ ಸಮುದಾಯಕ್ಕೆ ಸೇರಿದ್ದರಿಂದ ಅಂಗನವಾಡಿಗೆ ನುಗ್ಗಿದಕ್ಕೆ ಶಿವಮಲ್ಲಮ್ಮ ಬರೆಹಾಕಿದ್ದಾರೆ ಎಂದು ಮಗುವಿನ ಪೋಷಕರು ದೂರಿದ್ದಾರೆ.

ಮಕ್ಕಳನ್ನು ನೋಡಲೆಂದೇ ಸರ್ಕಾರ ಸಹಾಯಕಿಯನ್ನು ನೇಮಿಸಿದೆ. ಆದರೆ, ಮಕ್ಕಳು ಗಲಾಟೆ ಮಾಡಿದ್ದಾರೆಂದು ಬರೆ ಹಾಕುವುದೆಷ್ಟು ಸರಿ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಮಲ್ಲಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

English summary
Dalit boy assaulted for entering Anganwadi of upper caste woman in Basavapura village, Charamrajnagara district. Accused Shiva Mallamma assaulted Harthik with hot ladle. Boy suffered serious injury on neck, admitted to the hospital. Harthik's parents lodged a complaint with the cops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X