ದರ್ಶನ್ ಮೇಲೆ ಚಪ್ಪಲಿ ಎಸೆತ: ಗುಂಡ್ಲುಪೇಟೆಯಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು
ಗುಂಡ್ಲುಪೇಟೆ, ಡಿಸೆಂಬರ್, 21: ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ಖಂಡಿಸಿ ಪಟ್ಟಣದಲ್ಲಿ ದರ್ಶನ ಅಭಿಮಾನಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ನಟ ದರ್ಶನ್ ಅಭಿಮಾನಿಗಳು ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಶುರು ಮಾಡಿದ್ದರು. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಎಂಡಿಸಿಸಿ ಬ್ಯಾಂಕ್ ವೃತ್ತದ ಮುಂಭಾಗ ಮಾನವ ಸರಪಳಿ ನಿರ್ಮಿಸಿ, ನಂತರ ತಾಲೂಕು ಕಚೇರಿ ಮುಂದೆ ಜಮಾಯಿಸಿದರು. ಈ ವೇಳೆ ಚಪ್ಪಲಿ ಎಸೆದಿರುವ ಕಿಡಿಗೇಡಿಯನ್ನು ಬಂಧಿಸುವಂತೆ ಒತ್ತಾಯಿಸಿದರು.
ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ವಿರೋಧಿಸಿ ದಾವಣಗೆರೆಯಲ್ಲಿ ಅಭಿಮಾನಿಗಳ ಪ್ರತಿಭಟನೆ
ಕಿಡಿಗೇಡಿಗಳಿಂದ
ದರ್ಶನ್
ಮೇಲೆ
ಚಪ್ಪಲಿ
ಎಸೆತ
ಈ
ಸಂದರ್ಭದಲ್ಲಿ
ಮಾತನಾಡಿದ
ಪ್ರತಿಭಟನಾ
ನಿರತ
ದರ್ಶನ
ಅಭಿಮಾನಿಗಳು,
ದರ್ಶನ್
ಕನ್ನಡದ
ಮೇರು
ನಟನಾಗಿದ್ದಾರೆ.
ಕನ್ನಡ
ನಾಡು
ನುಡಿಗೆ
ಸಂಬಂಧಿಸಿದಂತೆ
ಹಲವು
ಚಿತ್ರಗಳಲ್ಲಿ
ನಟಿಸಿದ್ದಾರೆ.
ಇಂತಹ
ಮೇರು
ನಟನಿಗೆ
ಚಪ್ಪಲಿ
ಎಸೆದಿರುವುದು
ಸರಿಯಲ್ಲ.
ಘಟನೆಯಿಂದ
ದರ್ಶನ್
ಅಭಿಮಾನಿಗಳ
ಮನಸ್ಸಿಗೆ
ತುಂಬಾ
ನೋವುಂಟಾಗಿದೆ.
ಆದ್ದರಿಂದ
ಚಪ್ಪಲಿ
ಎಸೆದ
ಕಿಡಿಗೇಡಿಯನ್ನು
ಕೂಡಲೇ
ಬಂಧಿಸಬೇಕು
ಎಂದು
ಆಗ್ರಹಿಸಿದರು.
ಕನ್ನಡ
ಚಿತ್ರರಂಗದ
ಪ್ರತಿಯೊಬ್ಬ
ನಟರು
ಕೂಡ
ಕನ್ನಡಕ್ಕೆ
ಅವಿಸ್ಮರಣೀಯ
ಕೊಡುಗೆಯನ್ನು
ಸಲ್ಲಿಸುತ್ತಲೇ
ಬರುತ್ತಿದ್ದಾರೆ.
ಮುಂದಿನ
ದಿನಗಳಲ್ಲಿ
ಕನ್ನಡದ
ಯಾವೊಬ್ಬ
ನಟನ
ಮೇಲೂ
ಇಂತಹ
ಕೃತ್ಯ
ನಡೆಯದಂತೆ
ಸರ್ಕಾರ
ಕ್ರಮ
ವಹಿಸಬೇಕು
ಎಂದು
ಆಗ್ರಹಿಸಿದರು.
ಈ
ವೇಳೆ
ಪ್ರತಿಭಟನಾನಿರತ
ದರ್ಶನ್
ಅಭಿಮಾನಿಗಳು
ಕೃತ್ಯಗೈದವರ
ವಿರುದ್ಧ
ಸೂಕ್ತ
ಕ್ರಮ
ಕೈಗೊಳ್ಳುವಂತೆ
ತಹಶೀಲ್ದಾರ್
ಸಿ.ಜೆ.ರವಿಶಂಕರ್
ಅವರಿಗೆ
ಮನವಿ
ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಕಿರಣ್ ಗೌಡ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಮಾಡ್ರಹಳ್ಳಿ ಮಹೇಶ್, ಕರವೇ ರಾಜೇಂದ್ರ ವಿ.ನಾಯಕ್, ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿಂದರಾಜ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ಕಠಿಣ
ಕ್ರಮ
ಜರುಗಿಸಬೇಕೆಂದು
ಒತ್ತಾಯ
ಚಾಲೆಂಜಿಂಗ್
ಸ್ಟಾರ್
ದರ್ಶನ್
ತೂಗುದೀಪ
ಮೇಲೆ
ಚಪ್ಪಲಿ
ಎಸೆದವರ
ವಿರುದ್ಧ
ಕಠಿಣ
ಕ್ರಮ
ಜರುಗಿಸಬೇಕು.
ಕಾನೂನು
ರೀತಿಯಲ್ಲಿ
ಶಿಕ್ಷೆಯಾಗಲೇಬೇಕು
ಎಂದು
ಒತ್ತಾಯಿಸಿ
ಅಖಿಲ
ಕರ್ನಾಟಕ
ದರ್ಶನ್
ತೂಗುದೀಪ
ಅಭಿಮಾನಿಗಳ
ಜಿಲ್ಲಾ
ಹಾಗೂ
ತಾಲೂಕು
ಸಮಿತಿ
ವತಿಯಿಂದ
ದಾವಣಗೆರೆಯಲ್ಲಿ
ಪ್ರತಿಭಟನೆ
ನಡೆಸಲಾಯಿತು.
ನಗರದ
ಜಯದೇವ
ವೃತ್ತದಲ್ಲಿ
ಜಮಾಯಿಸಿದ
ಅಭಿಮಾನಿಗಳು
ಹಾಗೂ
ಸಮಿತಿಯ
ಪದಾಧಿಕಾರಿಗಳು,
ಗಾಂಧಿ
ಸರ್ಕಲ್,
ಪಿ.
ಬಿ.
ರಸ್ತೆಯ
ಮೂಲಕ
ಜಿಲ್ಲಾಧಿಕಾರಿ
ಕಚೇರಿಗೆ
ತೆರಳಿ
ಮನವಿ
ಸಲ್ಲಿಸಲಾಯಿತು.
ಕಳೆದ
ಡಿಸೆಂಬರ್
18ರ
ರಾತ್ರಿ
ವಿಜಯನಗರ
ಜಿಲ್ಲೆಯ
ಹೊಸಪೇಟೆಗೆ
ದರ್ಶನ್
ತೂಗುದೀಪ,
ಡಿಂಪಲ್
ಕ್ವೀನ್
ರಚಿತಾ
ರಾಮ್
ಅಭಿನಯದ
ಕ್ರಾಂತಿ
ಸಿನಿಮಾ
ಪ್ರಮೋಷನ್ಗೆ
ಚಿತ್ರತಂಡ
ಬಂದಿತ್ತು.
ಈ
ವೇಳೆ
ಕೆಲ
ಕಿಡಿಗೇಡಿಗಳು
ನಟ
ದರ್ಶನ್
ಮೇಲೆ
ಚಪ್ಪಲಿ
ತೂರಿ
ತೇಜೋವಧೆ
ಮಾಡಲು
ಯತ್ನಿಸಿದ್ದಾರೆ.
ಇಷ್ಟಾದರೂ
ದರ್ಶನ್
ತೂಗುದೀಪ
ಅವರು
ಮಾತನಾಡಿ,
ಆಯ್ತು
ಚಿನ್ನ
ಎಂದು
ಹೇಳಿ
ರಚಿತಾ
ರಾಮ್
ಅವರಿಗೆ
ಮಾತನಾಡಲು
ಮೈಕ್
ನೀಡಿದ್ದಾರೆ.
ಇದು
ಅವರ
ದೊಡ್ಡ
ಗುಣ
ತೋರಿಸುತ್ತದೆ
ಎಂದು
ದರ್ಶನ್
ಅವರ
ಅಭಿಮಾನಿಗಳು
ಹೇಳುತ್ತಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯಗಳಲ್ಲಿಯೂ ದರ್ಶನ್ ತೂಗುದೀಪ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರನ್ನಯ ದೇವರಂತೆ ಆರಾಧಿಸುತ್ತಾರೆ. ಇಷ್ಟೊಂದು ಅಭಿಮಾನಿಗಳನ್ನು ಹೊಂದಿರುವ ಖ್ಯಾತ ನಟನ ಏಳಿಗೆ ಸಹಿಸದೇ ಕೆಲವರು ಇಂತಹ ಕುಕೃತ್ಯ ನಡೆಸಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ದುರ್ವರ್ತನೆ ತೋರಿದವರ ವಿರುದ್ಧ ಕಠಿಣ ಕ್ರಮ ಆಗಲೇಬೇಕು. ಇಲ್ಲದಿದ್ದರೆ, ದರ್ಶನ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.