ಅಂತರ್ಜಾಲ ಲೋಕದಲ್ಲಿ ಮಿನುಗುವ ನಕ್ಷತ್ರ ಯುಸಿ ಬ್ರೌಸರ್
ನವದೆಹಲಿ, ನವೆಂಬರ್, 27: ಮೊಬೈಲ್ ಇಂಟರ್ ನೆಟ್ ಬಳಕೆ ಇಂದು ಪ್ರತಿಯೊಬ್ಬರ ಹಕ್ಕು, ಆಸ್ತಿ, ಸ್ವತ್ತು ಎಂಬಂತಾಗಿದೆ. ಇದಕ್ಕೆ ಪೂರಕ ಎಂಬಂತೆ ಮೊಬೈಲ್ ಅಂತರ್ಜಾಲ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕ ವರದಿಗಳು ಇದನ್ನು ಸಿದ್ಧಮಾಡಿವೆ.
ಜನರಿಗೆ ಮೊಬೈಲ್ ನಲ್ಲಿ ಇಂಟರ್ ಸೌಲಭ್ಯ ಕಲ್ಪಿಸುವ ಬ್ರೌಸರ್ ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದೆಲ್ಲವನ್ನು ಮೀರಿ ಯುಸಿ ಬ್ರೌಸರ್ ಮತ್ತೊಂದು ಸಾಧನೆಯ ಮೈಲಿಗಲ್ಲು ಸಾಧಿಸಿದೆ. ಅಲಿಬಾಬಾ ಕಂಪನಿ ಸಂಯೋಜನೆಯ ಬ್ರೌಸರ್ ಪ್ರಪಂಚದ ಎರಡನೇ ಅತಿ ಹೆಚ್ಚು ಜನಪ್ರಿಯ ಬ್ರೌಸರ್ ಎಂಬ ಖ್ಯಾತಿಗೆ ಪಾತ್ರವಾಗಿದೆ.[UC Cricket : ಮೊಬೈಲ್ ಆಪ್ ನಲ್ಲಿ ಕ್ರಿಕೆಟ್ ಲೋಕ ಅನಾವರಣ]

ಪ್ರಪಂಚದ ಶೇ. 17.42 ರಷ್ಟು ಜನ ಈ ಬ್ರೌಸರ್ ಉಪಯೋಗ ಮಾಡುತ್ತಿದ್ದಾರೆ ಎಂದು ಸ್ವತಂತ್ರ ಸಂಸ್ಥೆ ಸ್ಟಾಟ್ ಕೌಂಟರ್ ತನ್ನ ವರದಿಯಲ್ಲಿ ತಿಳಿಸಿದೆ. ನವೆಂಬರ್ 22, 2015ರಂದು ಈ ಬಗ್ಗೆ ಅಭಿಯಾನವೊಂದನ್ನು ಸಂಸ್ಥೆ ಆರಂಭ ಮಾಡಿದೆ. ಸದ್ಯ ಕ್ರೋಮ್ ಮೊದಲ ಸ್ಥಾನದಲ್ಲಿದೆ.
ಯುಸಿ ಬ್ರೌಸರ್ ಮೊಬೈಲ್ ಬಳಕೆಯಲ್ಲಿ ಅರ್ಥಕ್ಕಿಂತ ಹೆಚ್ಚಿನ ಸಾಧನೆ ದಾಖಲಿಸಿದೆ. ಭಾರತದಲ್ಲಿ ಕಳೆದ ಅಕ್ಟೋಬರ್ ಅಂತ್ಯಕ್ಕೆ ಶೇ. 54, ಇಂಡೋನೇಷಿಯಾದಲ್ಲಿ ಶೇ. 49 ರಷ್ಟು ಜನ ಬಳಕೆದಾರರ ಕೈಯಲ್ಲಿದೆ.[ಮಹಿಳಾ ಸುರಕ್ಷತೆಗೆ ಬಂತು ಹೊಸ ಆಪ್, ಏನಿದರ ವಿಶೇಷ?]
ಕ್ಲ್ವೌಡ್ ಎನೆಬಲ್ಡ್ ಟೆಕ್ನಾಲಜಿ ಈ ಬ್ರೌಸರ್ ನ ವಿಶೇಷ. ಕಡಿಮೆ ಡಾಟಾ ಬಳಕೆಯಲ್ಲಿ ಅತಿ ಹೆಚ್ಚಿನ ಮಾಹಿತಿ ರವಾನೆ, ಕಡಿಮೆ ಡಾಟಾ ಬಳಕೆ, ವೇಗದ ಬಳಕೆ ಗುಣಗಳನ್ನು ಹೊಂದಿರುವುದರಿಂದ ಜನರಿಗೆನೇರವಾಗಿ ತಲುಪುತ್ತಿದೆ.
ಕ್ಲ್ವೌಡ್ ಕಂಪ್ಯೂಟಿಂಗ್ ಟೆಕ್ನಾಲಜಿಯನ್ನು ಮೊಟ್ಟ ಮೊದಲು ಪರಿಚಯಿಸಿದ ಕೀರ್ತಿ ಯುಸಿ ಬ್ರೌಸರ್ ಗೆ ಸಲ್ಲುತ್ತದೆ. 2014ರಲ್ಲೇ ಯುಸಿ ಬ್ರೌಸರ್ ದಿನವೊಂದಕ್ಕೆ 100 ಮಿಲಿಯನ್ ಆಕ್ಟೀವ್ ಯೂಸರ್ ಗಳನ್ನು ಹೊಂತಿತ್ತು. ಫೇಸ್ ಬುಕ್, ಟ್ವಿಟ್ಟರ್ ಮತ್ತು ಯುಟ್ಯೂಬ್ ನ್ನು ಸಹ ನಿಮಗೆ ಪ್ರಿಯವಾದ ರೀತಿಯಲ್ಲಿ ಇಡುವುದು ಈ ಬ್ರೌಸರ್ ವಿಶೇಷ.

ಯುಸಿ ವೆಬ್ ಬಗ್ಗೆ ತಿಳಿದುಕೊಳ್ಳಿ
ಮೊಬೈಲ್ ಗಳ ಇಂಟರ್ನೆಟ್ ಯೂಸೆಜ್ ಗೆ ನೆರವಾಗುವ ಯುಸಿ ವೆಬ್ 2004ರಿಂದ ಅಸ್ತಿತ್ವದಲ್ಲಿದೆ. 3 ಸಾವಿರಕ್ಕೂ ಅಧಿಕ ನಮೂನೆಯ ಮೊಬೈಲ್ ಗಳಿಗೆ ಅನುಕೂಲವಾಗುವಂತೆ ಬ್ರೌಸರ್ ತಯಾರುನಾಡಲಾಗಿದೆ.
ಸದ್ಯ ಯುಸಿ ಬ್ರೌಸರ್ 11 ಭಾಷೆಗಳಲ್ಲಿ ಲಭ್ಯವಿದೆ. ಇಂಗ್ಲಿಷ್, ರಷ್ಯನ್, ಇಂಡೋನೇಶಿಯನ್ ಭಾಷೆಯಲ್ಲಿ ಬ್ರೌಸರ್ ಲಭ್ಯವಿದೆ. ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಕ್ಲಿಕ್ ಮಾಡಿ ಪಡೆದುಕೊಳ್ಳಬಹುದು.
-
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications