ಪಿವಿಆರ್, ಐನಾಕ್ಸ್ ಗೆ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಲಾಭವೆಷ್ಟು?
ಮುಂಬೈ, ಜುಲೈ 16: ಮಹಾರಾಷ್ಟ್ರ ಸರಕಾರದ ಆದೇಶವು ಮಲ್ಟಿಪ್ಲೆಕ್ಸ್ ಗಳಿಗೆ ಸರಿಯಾದ ಹೊಡೆತ ಕೊಡಲಿದೆ ಎಂಬ ಆತಂಕ ಶುರುವಾಗಿದೆ. ಮನೆಯಲ್ಲಿನ ಆಹಾರ ಪದಾರ್ಥಗಳನ್ನು ಕೂಡ ಮಲ್ಟಿಪ್ಲೆಕ್ಸ್ ಗಳೊಳಗೆ ತೆಗೆದುಕೊಂಡು ಹೋಗಬಹುದು ಅಂತ ಮೊನ್ನೆ ನಿಯಮ ಜಾರಿಗೆ ತರುವ ಆಲೋಚನೆ ಇದೆ ಎಂಬ ಘೋಷಣೆ ಮಾಡಿದ ಮೇಲೆ ಪ್ರಮುಖ ಮಲ್ಟಿಪ್ಲೆಕ್ಸ್ ಗಳ ಆದಾಯಕ್ಕೆ ಗುನ್ನ ಬೀಳಲಿದೆ ಎಂಬ ಆತಂಕ ಶುರುವಾಗಿದೆ.
ಇಲ್ಲಿ ಉದಾಹರಣೆ ಸಮೇತ ವಿವರಣೆ ಇದೆ ಗಮನಿಸಿ. ಪಿವಿಆರ್ ನ ಒಟ್ಟು ಲಾಭ 2,265.43 ಕೋಟಿಯಾದರೆ, ಅದರಲ್ಲಿ ಆಹಾರ ಮತ್ತು ಪಾನೀಯದ ಮಾರಾಟದಿಂದ ಬರುವ ಲಾಭ 607.7 ಕೋಟಿ. ಅಂದರೆ ಒಟ್ಟು ಲಾಭದ ಶೇ 26.8ರಷ್ಟು ಆದಾಯ ಬರುವುದು ಆಹಾರ ಮತ್ತು ಪಾನೀಯ ಮಾರಾಟದಿಂದ.
ಇನ್ನು ಐನಾಕ್ಸ್ ಲೀಷರ್ ಗೆ ಆಹಾರ ಮತ್ತು ಪಾನೀಯ ಮಾರಾಟದಿಂದ 306 ಕೋಟಿ ಬರುತ್ತದೆ. ಐನಾಕ್ಸ್ ನ ಒಟ್ಟಾರೆ ಆದಾಯ 1348.1 ಕೋಟಿ ರುಪಾಯಿ. ಅಲ್ಲಿಗೆ ಶೇ 22.7ರಷ್ಟು ಲಾಭವನ್ನು ಆಹಾರ ಮತ್ತು ಪಾನೀಯ ಮಾರಾಟವೇ ತಂದುಕೊಡುತ್ತದೆ. ಈ ಅಂಕಿಯು 2018ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದು.

ದೊಡ್ಡ ಮಟ್ಟದ ಆದಾಯಕ್ಕೆ ಗುನ್ನ
ಯಾವಾಗ ಮಹಾರಾಷ್ಟ್ರ ಸರಕಾರ ಹೊಸ ನಿಯಮ ಮಾಡುವ ಸೂಚನೆ ನೀಡಿತೋ ಶುಕ್ರವಾರದಂದು ಷೇರು ಮಾರುಕಟ್ಟೆಯಲ್ಲಿ ಪಿವಿಆರ್ ಷೇರು ಶೇ 13ರಷ್ಟು ಹಾಗೂ ಐನಾಕ್ಸ್ ನ ಷೇರು ಶೇ 5.4ರಷ್ಟು ಕುಸಿತ ಕಂಡಿವೆ. ಹೀಗೆ ಷೇರು ಮೌಲ್ಯ ಕುಸಿತ ಕಾಣುವುದಕ್ಕೆ ಇನ್ನೂ ಒಂದು ಕಾರಣ ಇದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಎಂಆರ್ ಪಿ (ಗರಿಷ್ಠ ಮಾರಾಟ ಬೆಲೆ)ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು ಎಂದು ಮಹಾರಾಷ್ಟ್ರದ ಸಚಿವ ರವೀಂದ್ರ ಚವಾಣ್ ಹೇಳಿದ್ದಾರೆ. ಇದು ಕೂಡ ಜಾರಿಯಾಗಿಬಿಟ್ಟರೆ ಆಹಾರ-ಪಾನೀಯಗಳ ಮಾರಾಟದಿಂದ ಮಲ್ಟಿಪ್ಲೆಕ್ಸ್ ಗಳಿಗೆ ಬರುತ್ತಿರುವ ದೊಡ್ಡ ಪ್ರಮಾಣದ ಆದಾಯ ಹಳ್ಳ ಹಿಡಿಯುತ್ತದೆ. ಏಕೆಂದರೆ ಪಿವಿಆರ್, ಐನಾಕ್ಸ್ ಗೆ ಬರುತ್ತಿರುವ ಎರಡನೇ ಅತಿ ದೊಡ್ಡ ಆದಾಯ ಮೂಲ ಆಹಾರ-ಪಾನೀಯ ಮಾರಾಟ.

ಕನಿಷ್ಠ ಶೇ 20ರಷ್ಟು ಲಾಭಕ್ಕೆ ಹೊಡೆತ
ದೇಶದಲ್ಲಿ 625 ಸ್ಕ್ರೀನ್ ಗಳು ಪಿವಿಆರ್ ನದು ಇದ್ದು, ಅದರಲ್ಲಿ 157 ಸ್ಕ್ರೀನ್ ಮಹಾರಾಷ್ಟ್ರದಲ್ಲಿದೆ. ಇನ್ನು ಐನಾಕ್ಸ್ ದು ಮಹಾರಾಷ್ಟ್ರದಲ್ಲಿ 118 ಸ್ಕ್ರೀನ್ ಇದ್ದು, ದೇಶದಲ್ಲಿ ಒಟ್ಟಾರೆ 492 ಸ್ಕ್ರೀನ್ ಇದೆ. ಒಂದು ವೇಳೆ ಹೊಸದಾಗಿ ನಿಯಮ ಜಾರಿ ಆಗಿಬಿಟ್ಟರೆ ಲಾಭದ ಪ್ರಮಾಣವು ಕನಿಷ್ಠ ಶೇ 20ರಷ್ಟು ಬಿದ್ದು ಹೋಗುತ್ತದೆ. ಅದನ್ನು ಸರಿ ಮಾಡಿಕೊಳ್ಳಲು ಟಿಕೆಟ್ ಬೆಲೆ ಏರಿಸಿದರೆ ವೀಕ್ಷಕರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇದೆ.

ಮುಂಬೈ ಕೋರ್ಟ್ ನಲ್ಲಿ ಹಾಕಿದ್ದ ಪಿಐಎಲ್ ಪರಿಣಾಮ
ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆಯ ಆಹಾರ ಪದಾರ್ಥ ತೆಗೆದುಕೊಂಡು ಹೋಗಲು ಅವಕಾಶ ನೀಡದೆ, ದುಬಾರಿ ಬೆಲೆ ವಸೂಲಿ ಮಾಡಲಾಗುತ್ತಿದೆ ಎಂದು ಮುಂಬೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಅದರ ಹಿನ್ನೆಲೆಯಲ್ಲಿ ಕೋರ್ಟ್ ನೀಡಿದ ನಿರ್ದೇಶನದ ಅನುಸಾರ ಮಹಾರಾಷ್ಟ್ರ ಸರಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಕೋರ್ಟ್ ನಲ್ಲಿ ಮುಂದಿನ ವಿಚಾರಣೆ ಜುಲೈ ಇಪ್ಪತ್ತೈದಕ್ಕೆ ಇದೆ.

ಪಾಪ್ ಕಾರ್ನ್ ನ ನ್ಯಾಯಯುತವಾದ ಬೆಲೆ ಎಷ್ಟು?
ಮಹಾರಾಷ್ಟ್ರ ಸರಕಾರದ ಈ ತೀರ್ಮಾನವು ದೇಶದ ಇತರ ರಾಜ್ಯಗಳಲ್ಲೂ ದೊಡ್ಡ ಮಟ್ಟದ ಸದ್ದು ಮಾಡುವ ಸಾಧ್ಯತೆ ಇದೆ. ಅಂತಿಮವಾಗಿ ಒಂದು ಪಾಕೆಟ್ ಪಾಪ್ ಕಾರ್ನ್ ನ ನ್ಯಾಯವಾದ ಬೆಲೆ ಎಷ್ಟು ಎಂಬುದನ್ನು ಯಾರು ತೀರ್ಮಾನಿಸುತ್ತಾರೆ ಎಂಬುದು ಕೂಡ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ.
-
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಮಾರ್ಚ್ 26ರ ದರಪಟ್ಟಿ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು












Click it and Unblock the Notifications