ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್
ಬೆಂಗಳೂರು, ಮೇ 09: ಇ ಕಾಮರ್ಸ್ ಕ್ಷೇತ್ರದ ಬಹುದೊಡ್ಡ ಡೀಲ್ ಕೊನೆಗೂ ಖಚಿತವಾಗಿದೆ. ಬೆಂಗಳೂರು ಮೂಲದ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಶೇ 77ರಷ್ಟು ಪಾಲನ್ನು ಸರಿ ಸುಮಾರು 16 ಬಿಲಿಯನ್ ಯುಎಸ್ ಡಾಲರ್ ನೀಡಿ, ಅಮೆರಿಕದ ವಾಲ್ ಮಾರ್ಟ್ ಸಂಸ್ಥೆ ಖರೀದಿಸಿದೆ.
ದೇಶದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಖರೀದಿಯ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಒಪ್ಪಂದ ಆಗಿದೆ ಎಂದು ಸಾಫ್ಟ್ಬ್ಯಾಂಕ್ ಸಿಇಒ ಮಸಯೋಶಿ ಸನ್ ಹೇಳಿದ್ದಾರೆ. ಖರೀದಿ ಮೌಲ್ಯ 16 ಬಿಲಿಯನ್ ಡಾಲರ್ ನಿಂದ 20 ಬಿಲಿಯನ್ ಡಾಲರ್ ಗೇರಬಹುದು.
ಉಳಿದ ಶೇ 23 ಪಾಲುದಾರಿಕೆಯನ್ನು ಫ್ಲಿಪ್ಕಾರ್ಟ್ನ ಷೇರುದಾರರು, ಸಂಸ್ಥೆಯ ಸಹ-ಸಂಸ್ಥಾಪಕ ಬಿನ್ನಿ ಬನ್ಸಲ್, ಚೀನಾದ ಟೆನ್ಸೆಂಟ್, ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಹಾಗೂ ಮೈಕ್ರೊಸಾಫ್ಟ್ ಕಾರ್ಪೊರೇಷನ್ ಪಡೆಯಲಿದೆ ಎಂದು ವಾಲ್ಮಾರ್ಟ್ ಇಂಡಿಯಾದ ಅಧ್ಯಕ್ಷ ಕ್ರಿಷ್ ಅಯ್ಯರ್ ಹೇಳಿದರು. ಫ್ಲಿಪ್ ಕಾರ್ಟ್ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಸ್ಥೆಯ ವಾಣಿಜ್ಯ ಚಟುವಟಿಕೆಯ ಜವಾಬ್ದಾರಿಯನ್ನು ಅಯ್ಯರ್ ವಹಿಸಿಕೊಳ್ಳಲಿದ್ದಾರೆ.

ಈ ಒಪ್ಪಂದದ ಬಳಿಕ ಅಮೆರಿಕದ ರೀಟೈಲ್ ಕ್ಷೇತ್ರದ ದಿಗ್ಗಜ ವಾಲ್ ಮಾರ್ಟ್ ಸುಮಾರು 2 ಬಿಲಿಯನ್ ಡಾಲರ್ (ಸುಮಾರು 13000 ಕೋಟಿ ರು) ಈಕ್ವಿಟಿಯನ್ನು ಫ್ಲಿಪ್ ಕಾರ್ಟಿಗೆ ಸೇರಿಸಿ ಇಕಾಮರ್ಸ್ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಲಿದೆ.
ಫ್ಲಿಪ್ ಕಾರ್ಟಿನ ಸಹ ಸ್ಥಾಪಕ, ಹಾಲಿ ಸಿಇಒ ಸಚಿನ್ ಬನ್ಸಾಲ್ ಅವರು 9ವರ್ಷಗಳ ಬಳಿಕ ಸಿಇಒ ಹುದ್ದೆ ತೊರೆಯಲಿದ್ದಾರೆ. ತಮ್ಮ ಬಳಿಯಿದ್ದ 5.5 % ಷೇರುಗಳನ್ನು ವಾಲ್ ಮಾರ್ಟ್ ಗೆ ಮಾರಿದ್ದಾರೆ.
Walmart to Invest in Flipkart Group, India’s Innovative eCommerce Company
— Flipkart (@Flipkart) May 9, 2018
Read all about it: https://t.co/m3MUgAyqiZ pic.twitter.com/XFkiXxL7sB
ಆದರೆ, ಮತ್ತೊಬ್ಬ ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಮೂಹ ಸಂಸ್ಥೆ ಸಿಇಒ ಆಗಿ ಮುಂದುವರೆಯಲಿದ್ದಾರೆ. ಕಾರ್ಯಕಾರಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications