'ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!'
ಬೆಂಗಳೂರು, ಫೆ. 26: ಉದ್ಯಮಿ ವಿಜಯ್ ಮಲ್ಯ ಬಗ್ಗೆ 'ಅರುವತ್ತಕ್ಕೆ ಅರಳು ಮರಳು' ಎಂದು ಹೇಳುವಂತಿಲ್ಲ. ಉದ್ದೇಶಪೂರ್ವಕ ಸುಸ್ತಿದಾರನಾಗಿ ಬ್ಯಾಂಕ್ ಗಳಿಗೆ ಸುಸ್ತು ಮಾಡಿರುವ ಬಂಡ ಅಲ್ಲ ಬಹದ್ದೂರ್. ಯುನೈಟೆಡ್ ಸ್ಪಿರೀಟ್ ಕಳೆದುಕೊಂಡ ಮಲ್ಯರನ್ನು ಈಗ ಟ್ವಿಟ್ಟರ್ ನಲ್ಲಿ 'ಅಡ್ವಾಣಿಯಂತಾದ ಮಲ್ಯ' ಎಂದು ಕರೆಯಲಾಗುತ್ತಿದೆ.
ಏನಾದರೂ ಮಲ್ಯ ಯಾವತ್ತಿಗೂ 'ಕಿಂಗ್ ಆಫ್ ಗುಡ್ ಟೈಮ್' ಇನ್ನು ಕೆಲವರು ಹೊಗಳುತ್ತಿದ್ದಾರೆ. ಕುಡುಕರ ಪಾಲಿನ ಪರ್ಮನೆಂಟ್ 'ಡಾಕ್ಟರ್' ಮಲ್ಯರಿಗೆ ಶುಭಹಾರೈಕೆಗಳು ಹರಿದು ಬರುತ್ತಿವೆ. [ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ]
ರಾಜೀನಾಮೆ ನೀಡಿದ್ದೇಕೆ?: ಯುಬಿ ಗ್ರೂಪ್ನ ಅಂಗಸಂಸ್ಥೆಗಳು ಮತ್ತು ವಿಮಾನ ಯಾನ ಸಂಸ್ಥೆ ಕಿಂಗ್ಫಿಷರ್ ಏರ್ಲೈನ್ಸ್ಗೆ ಯುನೈಟೆಡ್ ಸ್ಪಿರಿಟ್ನ ನಿಧಿಗಳನ್ನು ವರ್ಗಾವಣೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಹುದ್ದೆ ತೊರೆಯಲು ಡಿಯಾಜಿಯೊ ಕಳೆದ ವರ್ಷವೇ ಮಲ್ಯ ಅವರನ್ನು ಕೇಳಿಕೊಂಡಿತ್ತು.
ಈ ಬೇಡಿಕೆಯನ್ನು ಮಲ್ಯ ಅವರು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು. ಆದರೆ, ಸಂಸ್ಥೆ ತೊರೆದರೆ ಮುಂದಿನ ಐದು ವರ್ಷಕ್ಕೆ 75 ಮಿಲಿಯನ್ ಡಾಲರ್ ನೀಡುವುದಾಗಿ ಆಫರ್ ಬಂದ ಮೇಲೆ ಮಲ್ಯ ತಾವೂ ಇಂಗ್ಲೆಂಡಿಗೆ ಹಾರುವುದಾಗಿ ಘೋಷಿಸಿದ್ದಾರೆ.[ಯುಎಸ್ಎಲ್ಗೆ ಬೈ ಹೇಳಿ ಇಂಗ್ಲೆಂಡ್ ವಿಮಾನ ಏರಿದ ಮಲ್ಯ]
ಇತ್ತೀಚೆಗಷ್ಟೇ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮಲ್ಯ ಅವರ ಮುಂದಿನ ನಡೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸದ್ಯಕ್ಕೆ ಅಧಿಕಾರವಿಲ್ಲದ ಸ್ಥಾಪಕನಾಗಿ ಮಲ್ಯ ಅವರಿರುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಫ್ 1 ವಾಹನ ಓಡಿಸಿಕೊಂಡು ಸ್ಕಾಚ್ ಹಿರುವುದು ಸದ್ಯದ ಯೋಜನೆ.

ಬ್ಯಾಂಕ್ ಸಾಲದ ಗತಿ ಏನು?
8 ಸಾವಿರ ಕೋಟಿ ರುಗೂ ಅಧಿಕ ಸಾಲ ಮರುಪಾವತಿ ಮಾಡದ ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಆಸ್ತಿ ಹರಾಜಿನ ಸಂಕಷ್ಟ ಎದುರಾಗಿದ್ದು ವಿವಿಧ ಬ್ಯಾಂಕ್ ಗಳು ಅವರನ್ನು 'ಉದ್ದೇಶ ಪೂರ್ವಕ ಸುಸ್ತಿದಾರ' ಎಂದು ಘೋಷಣೆ ಮಾಡಿವೆ. ಆದರೆ, ಮಲ್ಯ ಅವರು ಕಾನೂನು ಪ್ರಕಾರವಾಗಿ ನಡೆದುಕೊಳ್ಳುತ್ತಿದ್ದು, ಆಸ್ತಿ ಹರಾಜು ಹಾಕಿದರೂ ಬ್ಯಾಂಕ್ ಗಳಿಗೆ ಅಸಲು ಕೂಡಾ ಸಿಗದಂತೆ ಮಾಡಿಬಿಟ್ಟಿದ್ದಾರೆ.
|
ಸ್ಟೀವ್ ಜಾಬ್ಸ್ ರೀತಿ ಮತ್ತೆ ಮೇಲಕ್ಕೆ ಏರಲಿ
ಉದ್ಯಮಿ ಸ್ಟೀವ್ ಜಾಬ್ಸ್ ರೀತಿ ಮತ್ತೆ ಮೇಲಕ್ಕೆ ಏರಲಿ, ಮಲ್ಯ ಅವರು ಪಕ್ಕಾ ವ್ಯಾಪರಸ್ಥ ಒಳ್ಳೆಯದಾಗಲಿ ಎಂದು ಶುಭಹಾರೈಕೆ.
|
Founder Emeritus ಆದ ಮಲ್ಯ
Founder Emeritus ಆದ ಮಲ್ಯ. ಏನು ಅರ್ಥವಾಗಲಿಲ್ವ. ರಾಜಕೀಯದಲ್ಲಿ ಬಿಜೆಪಿಯಲ್ಲಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗಿರುವ ಮರ್ಯಾದೆ ಅಷ್ಟೇ ವಿಜಯ್ ಮಲ್ಯರಿಗೆ ಈಗ ಸಿಗುತ್ತದೆ.
|
ಮಲ್ಯ, ಇಂಗ್ಲೆಂಡಿಗೆ ಹೋಗುವುದು ಸೂಪರ್ ಐಡಿಯಾ
ಮಲ್ಯ ಇಂಗ್ಲೆಂಡಿಗೆ ಹೋಗುವುದು ಸೂಪರ್ ಐಡಿಯಾ. ಬ್ರಿಟಿಷರನ್ನು ಹಾಳು ಮಾಡಲು ಎಲ್ಲಾ ರಿಟೈರ್ ಆದವರು ಅಲ್ಲಿ ಹೋಗಿ ನೆಲೆಸಿದರೆ ಸಾಕು.
|
ಮಲ್ಯ ರಾಜೀನಾಮೆ ನೀಡಿದ ರಹಸ್ಯ ಬಯಲು
ಮಲ್ಯ ರಾಜೀನಾಮೆ ನೀಡಿದ ರಹಸ್ಯ ಬಯಲು. ತಮ್ಮ ಕಂಪನಿಯ ವ್ಹಿಸ್ಕಿ ಎರಡು ಗುಟುಕು ಹೀರಿದ ಮೇಲೆ ತಲೆ ಕೆಟ್ಟು ಮಲ್ಯ ರಾಜೀನಾಮೆ ಕೊಟ್ಟರಂತೆ!
|
ಸಾಲ ಮಾಡಿ ತುಪ್ಪ ತಿಂದು ಜೀರ್ಣಿಸಿಕೊಳ್ಳುವ ಕಲೆ
ಸಾಲ ಮಾಡಿ ತುಪ್ಪ ತಿಂದು ಜೀರ್ಣಿಸಿಕೊಳ್ಳುವ ಕಲೆ ಮಲ್ಯರಿಂದ ಕಲಿಯಬೇಕು. ನಿಮ್ಮ ಲೈಫ್ ಎಂಜಾಯ್ ಮಾಡಿ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications