ನಿಮ್ಮ ಮೊಬೈಲಿಗೆ ನಿಮ್ಮಿಷ್ಟದ ಸಂಖ್ಯೆ ಆಯ್ಕೆ ಮಾಡ್ಕೊಳಿ!
ನವದೆಹಲಿ, ಡಿ.22: ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಒಂದಲ್ಲ ಒಂದು ರೀತಿ ಸಾಹಸ ಮಾಡುತ್ತಲೇ ಇರುತ್ತವೆ. ದರ ಸಮರದ ಜೊತೆಗೆ ಹೊಸ ಹೊಸ ಕೊಡುಗೆಗಳು ಆಗಾಗ ಗ್ರಾಹಕರಿಗೆ ಸಿಗುತ್ತಿರುತ್ತದೆ.
ಎಂಎನ್ ಪಿ ನಂತರ ಈಗ ನಿಮ್ಮ ಮೊಬೈಲ್ ಫೋನಿಗೆ ನಿಮ್ಮಿಷ್ಟದ ಸಂಖ್ಯೆ ಆಯ್ದುಕೊಳ್ಳುವ ಅವಕಾಶವನ್ನು ಟಾಟಾ ಡೊಕೊಮೊ ಸಂಸ್ಥೆ ಪ್ರಪ್ರಥಮ ಬಾರಿಗೆ ಸೋಮವಾರದಿಂದ ಪರಿಚಯಿಸುತ್ತಿದೆ.
ಟಾಟಾ ಟೆಲಿ ಸರ್ವಿಸ್ ನ ಟಾಟಾ ಡೊಕೊಮೊ ಸಂಸ್ಥೆಯ ಗ್ರಾಹಕರು ಇನ್ಮುಂದೆ ತಮ್ಮ ನೆಚ್ಚಿನ ಸಂಖ್ಯೆ(ಹುಟ್ಟಿದ ದಿನಾಂಕ, ವಾರ್ಷಿಕೋತ್ಸವ..ಇತ್ಯಾದಿ) ಗಳನ್ನು ಆಯ್ಕೆ ಮಾಡಿ ಮೊಬೈಲ್ ಫೋನ್ ಸಂಖ್ಯೆ ಮಾಡಿಕೊಳ್ಳಬಹುದಾಗಿದೆ. [ಮಿಸ್ಡ್ ಕಾಲ್ ಕೊಟ್ಟು ಬ್ಯಾಂಕ್ ಬ್ಯಾಲೆನ್ಸ್ ಪಡೆಯಿರಿ]

ಈ ಹೊಸ ಸೌಲಭ್ಯವನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನಮಗೂ ಇದೆ. ಹಾಲಿ ಗ್ರಾಹಕರು ಹಾಗೂ ಹೊಸ ಗ್ರಾಹಕರಿಗೂ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಟಾಟಾ ಟೆಲಿ ಸರ್ವಿಸಸ್ ನ ಮುಖ್ಯಸ್ಥ ಸಂದೀಪ್ ಸಿಂಘಾಲ್ ಹೇಳಿದ್ದಾರೆ.
ಕ್ರೇಜಿ ನಂಬರ್ ಹೊಂದುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಸೌಲಭ್ಯಕ್ಕೆ ಟಾಟಾ ಕಂಪನಿ ಮುಂದಾಗಿದೆ. ಮುಕ್ಕಾಲು ಪಾಲು ಟಾಟಾ ಸಂಸ್ಥೆ ಗ್ರಾಹಕರು ತಮ್ಮ ನೆಚ್ಚಿನ ಸಂಖ್ಯೆ ಆಯ್ದುಕೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ಇನ್ನಷ್ಟು ಗ್ರಾಹಕ ಸ್ನೇಹಿಯಾಗಲು ಟಾಟಾ ಡೊಕೊಮೊ ಮುಂದಾಗಿದೆ.
ಕಳೆದ ವಾರ 2,899 ರು ಬೆಲೆಯ ಫೋಟಾನ್ ಮ್ಯಾಕ್ಸ್ ವೈ ಫೈ ಡಿಯೂ ಡಾಂಗಲ್ (4400mAh ಸಾಮರ್ಥ್ಯದ ಬ್ಯಾಟರಿ ಸಹಿತ) ಬಿಡುಗಡೆ ಮಾಡಲಾಗಿತ್ತು. ಮೈಕ್ರೋ ಎಸ್ ಡಿ 32 ಜಿಬಿ ಕಾರ್ಡ್ ಕೂಡಾ ಹೊಂದಿರುವ ಪವರ್ ಬ್ಯಾಂಕ್ ರೀತಿ ಕೂಡಾ ಕಾರ್ಯ ನಿರ್ವಹಿಸುವ ಈ ಡಾಂಗಲ್ ಜನಪ್ರಿಯತೆ ಗಳಿಸುತ್ತಿದೆ. ದೆಹಲಿ ಹಾಗೂ ಮುಂಬೈನಲ್ಲಿ ಲಭ್ಯವಿರುವ ಈ ಸಾಧನ ಮುಂಬರುವ ದಿನಗಳಲ್ಲಿ ಭಾರತದ ಇತರೆ ನಗರಗಳಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ. (ಪಿಟಿಐ)
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications