ಇನ್ಫೋಸಿಸ್ Q1 ವರದಿ, ಅಚ್ಚರಿಯ ಬೋನಸ್ ಘೋಷಣೆ ಲಾಭ!
ಬೆಂಗಳೂರು, ಜುಲೈ 13: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ತನ್ನ ಏಪ್ರಿಲ್ -ಜೂನ್ ತ್ರೈಮಾಸಿಕ (Q1) ವರದಿಯನ್ನು ಶುಕ್ರವಾರದಂದು ಪ್ರಕಟಿಸಿದೆ. ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೆ ತಕ್ಕಂತೆ ಸಂಸ್ಥೆಯು ಫಲಿತಾಂಶ ಹೊರಹಾಕಲು ಸಾಧ್ಯವಾಗದಿದ್ದರೂ, ಬೋನಸ್ ಘೋಷಿಸಿ, ಅಚ್ಚರಿ ಮೂಡಿಸಿದೆ.
ಜೂನ್ 30ಕ್ಕೆ ಮುಕ್ತಾಯವಾದ ತ್ರೈಮಾಸಿಕ ವರದಿಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ 270 ಕೋಟಿ ರು ನಷ್ಟವಾಗಿದೆ. ಪ್ರತಿ ಈಕ್ವಟಿ ಷೇರಿನ ಮೇಲಿನ ಮೂಲ ಆದಾಯ ಕೂಡಾ 1.24 ರು ನಷ್ಟು ಈ ತ್ರೈಮಾಸಿಕದಲ್ಲಿ ಇಳಿಕೆಯಾಗಿದೆ.
ಆದರೆ, ವರ್ಷದಿಂದ ವರ್ಷಕ್ಕೆ(YoY) ಲೆಕ್ಕಾಚಾರದಂತೆ ಶೇ 3.70ರಷ್ಟು ಲಾಭ ಏರಿಕೆಯಾಗಿದ್ದು, 3,612 ಕೋಟಿ ರು ಗಳಿಕೆಯಾಗಿದೆ. ಆದರೆ, ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆ 3,711.80 ಕೋಟಿ ರು ನಷ್ಟಿತ್ತು.

ಮೊದಲ ತ್ರೈಮಾಸಿಕ ವರದಿಯ ಮುಖ್ಯಾಂಶಗಳು
* ಸಂಸ್ಥೆಯ ಆದಾಯದಲ್ಲಿ ಶೇ 6ರಷ್ಟು ಏರಿಕೆಯಾಗಿದ್ದು, 19,130 ಕೋಟಿ ರುಗೇರಿದೆ.
* ಡಾಲರ್ ಲೆಕ್ಕಾಚಾರದಂತೆ ಆದಾಯ ಶೇ 0.9ರಷ್ಟು ಏರಿಕೆಯಾಗಿದ್ದು, 2,831 ಮಿಲಿಯನ್ ಡಾಲರ್ ನಷ್ಟಾಗಿದೆ.
* ನಿರ್ವಹಣಾ ಲಾಭ ಶೇ 2 ರಷ್ಟು ಇಳಿಕೆಯಾಗಿ, 4,267 ಕೋಟಿ ರುಗೆ ಬಂದಿದೆ.
* 2018-19ಕ್ಕೆ ಮಾರಾಟ ಪ್ರಗತಿ ಮಾರ್ಗದರ್ಶಿ ಶೇ 6 ರಿಂದ 8ರಷ್ಟು ಮಟ್ಟದಲ್ಲಿದೆ.
* 2019ರ ಆರ್ಥಿಕ ವರ್ಷಕ್ಕೆ ಆದಾಯ ಮಾರ್ಗದರ್ಶಿ ಅಂತರ ಶೇ 22 ರಿಂದ 24ರಷ್ಟು ಇರಿಸಿಕೊಳ್ಳಲಾಗಿದೆ.
* ಉತ್ತರ ಅಮೆರಿಕದಲ್ಲಿ ಆದಾಯ ಶೇ 2ರಷ್ಟು, ಯುರೋಪಿನಲ್ಲಿ ಶೇ 21ರಷ್ಟಿದೆ.
* ಈ ತ್ರೈಮಾಸಿಕದಲ್ಲಿ 70 ಹೊಸ ಗ್ರಾಹಕರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಒಟ್ಟಾರೆ, 5,798 ಹೊಸ ಉದ್ಯೋಗಿಗಳು ಸೇರಿಕೊಂಡಿದ್ದಾರೆ. ಒಟ್ಟಾರೆ, 2,09,905 ಉದ್ಯೋಗಿಗಳಿದ್ದಾರೆ.
* ಇನ್ಫೋಸಿಸ್ ಬೋರ್ಡ್ 1:1 ಅನುಪಾತದ ಬೋನಸ್ ಘೋಷಿಸಿದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications