ಅದಾನಿ ಕುರಿತ ಹಿಂಡೆನ್ಬರ್ಗ್ ವರದಿ ವಿಚಾರಣೆಗೆ 'ಸುಪ್ರೀಂ' ಒಪ್ಪಿಗೆ: ಮತ್ತಷ್ಟು ಸಂಕಷ್ಟದಲ್ಲಿ ಶ್ರೀಮಂತ ಉದ್ಯಮಿ, ಇಲ್ಲಿದೆ ವರದಿ
ಅರ್ಜಿ ಸಲ್ಲಿಸಿರುವ ವಕೀಲ ವಿಶಾಲ್ ತಿವಾರಿ ಅವರು ಗುರುವಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅದಾನಿ ವಿರುದ್ಧದ ಆರೋಪಗಳಿಗೆ ಅರ್ಜಿಯ ತುರ್ತು ಪಟ್ಟಿಗಾಗಿ ವಿಷಯವನ್ನು ಪ್ರಸ್ತಾಪಿಸಿದರು.
ನವದೆಹಲಿ, ಫೆಬ್ರವರಿ 9: ಉದ್ಯಮಿ ಅದಾನಿ ನೇತೃತ್ವದ ಉದ್ಯಮ ಸಮೂಹದ ವಿರುದ್ಧ ಹಲವಾರು ಆರೋಪಗಳನ್ನು ಮಾಡಿರುವ ಹಿಂಡೆನ್ಬರ್ಗ್ ಸಂಶೋಧನಾ ವರದಿಯ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯನ್ನು ಶುಕ್ರವಾರ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಅರ್ಜಿ ಸಲ್ಲಿಸಿರುವ ವಕೀಲ ವಿಶಾಲ್ ತಿವಾರಿ ಅವರು ಗುರುವಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ತುರ್ತು ಪಟ್ಟಿಗಾಗಿ ವಿಷಯವನ್ನು ಪ್ರಸ್ತಾಪಿಸಿದರು. ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠಕ್ಕೆ ತಿವಾರಿ ಅವರು, ಈ ವಿಷಯದ ಬಗ್ಗೆ ಸಲ್ಲಿಸಲಾದ ಪ್ರತ್ಯೇಕ ಅರ್ಜಿಯನ್ನು ಫೆಬ್ರವರಿ 10ರಂದು ವಿಚಾರಣೆಗೆ ಪಟ್ಟಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದೇ ರೀತಿಯ ಅರ್ಜಿ ನಾಳೆ ಬರಲಿದೆ. ಇದು ದೇಶದ ಪ್ರತಿಷ್ಠೆಗೆ ಕಳಂಕ ತಂದ ಮತ್ತು ನಷ್ಟವನ್ನು ಉಂಟುಮಾಡಿದ ಹಿಂಡೆನ್ಬರ್ಗ್ ಸಂಶೋಧನಾ ವರದಿಗೆ ಸಂಬಂಧಿಸಿದೆ. ಪ್ರತ್ಯೇಕ ಅರ್ಜಿಯೊಂದಿಗೆ ಶುಕ್ರವಾರವೂ ತಮ್ಮ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಅವರು ಪೀಠವನ್ನು ಒತ್ತಾಯಿಸಿದರು. ಅದಕ್ಕೆ ಸರಿ. ಅದನ್ನು ಟ್ಯಾಗ್ ಮಾಡಿ ಎಂದು ಸಿಜೆಐ ಹೇಳಿದರು.

ಹಿಂಡೆನ್ಬರ್ಗ್ ರಿಸರ್ಚ್ನ ವರದಿ
ತಮ್ಮ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ತಿವಾರಿ ಅವರು ದೊಡ್ಡ ಕಾರ್ಪೊರೇಟ್ಗಳಿಗೆ ನೀಡಿದ 500 ಕೋಟಿ ರೂ.ಗಿಂತ ಹೆಚ್ಚಿನ ಸಾಲಗಳ ಮಂಜೂರಾತಿ ನೀತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಸಮಿತಿಯನ್ನು ರಚಿಸುವಂತೆ ನಿರ್ದೇಶನಗಳನ್ನು ಕೋರಿದ್ದಾರೆ. ಕಳೆದ ವಾರ ಅಮಾಯಕ ಹೂಡಿಕೆದಾರರ ಕಳವಳ ಮತ್ತು ಅದಾನಿಯ ಆರ್ಥಿಕ ಕುಸಿತಕ್ಕೆ ಹಿಂಡೆನ್ಬರ್ಗ್ ರಿಸರ್ಚ್ನ ಶಾರ್ಟ್ ಸೆಲ್ಲರ್ ನಾಥನ್ ಆಂಡರ್ಸನ್ ಮತ್ತು ಭಾರತ ಮತ್ತು ಯುಎಸ್ನಲ್ಲಿರುವ ಅವರ ಸಹವರ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಕೀಲ ಎಂ ಎಲ್ ಶರ್ಮಾ ಅವರು ಸುಪ್ರೀಂ ಕೋರ್ಟ್ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಷೇರುಬೆಲೆಯಲ್ಲಿ ಕೈವಾಡ
ಹಿಂಡೆನ್ಬರ್ಗ್ ರಿಸರ್ಚ್ ವ್ಯಾಪಾರ ಸಮೂಹದ ವಿರುದ್ಧ ಅಕ್ರಮ ವಹಿವಾಟುಗಳು ಮತ್ತು ಷೇರುಬೆಲೆಯ ಮ್ಯಾನುಪ್ಯೂಲೇಶನ್ ಆರೋಪಗಳನ್ನು ಮಾಡಿದ ನಂತರ ಅದಾನಿ ಗ್ರೂಪ್ ಷೇರುಗಳು ಷೇರುಗಳ ಮೇಲೆ ದೊಡ್ಡ ಹೊಡೆತ ಬಿದಿದೆ. ಅದಾನಿ ಗ್ರೂಪ್ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದೆ.

ಉಳಿತಾಯದ ಹಣವೆಲ್ಲ ವ್ಯರ್ಥ
ವಿವಿಧ ಕಾರಣಗಳಿಂದಾಗಿ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಷೇರು ಕುಸಿತದ ಪರಿಸ್ಥಿತಿ ಉಂಟಾದಾಗ ಹೂಡಿಕೆ ಜನರ ಸ್ಥಿತಿ ಮತ್ತು ಭವಿಷ್ಯವನ್ನು ಅರ್ಜಿಯು ಚಿತ್ರಿಸುತ್ತದೆ ಎಂದು ತಿವಾರಿ ತಮ್ಮ ಮನವಿಯಲ್ಲಿ ಹೇಳಿದ್ದಾರೆ. ಷೇರುಗಳಲ್ಲಿ ತಮ್ಮ ಇಡೀ ಜೀವಿತಾವಧಿಯಲ್ಲಿ ಉಳಿತಾಯವನ್ನು ಹೊಂದಿದ್ದ ಬಹಳಷ್ಟು ಜನರು ಷೇರುಗಳಲ್ಲಿ ಹಣ ಹೂಡಿರುವ ಕಾರಣದಿಂದಾಗಿ ಗರಿಷ್ಠ ಹಿನ್ನಡೆಯನ್ನು ಅನುಭವಿಸಿದ್ದಾರೆ. ದೊಡ್ಡ ಮೊತ್ತದ ಹಣವು ವ್ಯರ್ಥವಾಗುತ್ತಿದೆ ಎಂದು ಪಿಐಎಲ್ ಸಲ್ಲಿಸಲಾಗಿದೆ.

ಹೂಡಿಕೆದಾರರಿಗೆ ಭಾರಿ ನಷ್ಟ
ಬಿಲಿಯನೇರ್ ಗೌತಮ್ ಅದಾನಿಯವರ ವಿಶಾಲ ಸಾಮ್ರಾಜ್ಯದ ಮೇಲೆ ಹಿಂಡೆನ್ಬರ್ಗ್ನಿಂದ ವರದಿ ನಂತರ ಎಲ್ಲಾ 10 ಅದಾನಿ ಷೇರುಗಳ ಮಾರುಕಟ್ಟೆ ಮೌಲ್ಯವು ಅರ್ಧದಷ್ಟು ಕುಸಿದಿದೆ. ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ ಎಂದು ತಿವಾರಿ ಸಲ್ಲಿಸಿದ ಮನವಿಯಲ್ಲಿ ಹೇಳಿದೆ. ಇದು ಅಂತಿಮವಾಗಿ ಸಾರ್ವಜನಿಕ ಹಣಕ್ಕೆ ಪ್ರತಿವಾದಿಗಳು (ಕೇಂದ್ರ ಮತ್ತು ಇತರರು) ಜವಾಬ್ದಾರರಾಗಿರುತ್ತಾರೆ. ಹೆಚ್ಚಿನ ಪಾಲನ್ನು ಸಾಲದ ಮೊತ್ತಕ್ಕೆ ಸ್ಪಷ್ಟ ಪ್ರಕ್ರಿಯೆ ಮತ್ತು ಮಂಜೂರಾತಿ ನೀತಿಯೊಂದಿಗೆ ಸಾಲಗಳನ್ನು ತಗ್ಗಿಸಲು ಕಟ್ಟುನಿಟ್ಟಾದ ಕ್ರಮದ ಅಗತ್ಯವಿದೆ ಎಂದು ಅದು ಹೇಳಿದೆ.












Click it and Unblock the Notifications